ಶಿರಸಿ : ಕಿಡಗೇಡಿಗಳಿಂದ ಅರಣ್ಯಕ್ಕೆ ಬೆಂಕಿ: ಅರಣ್ಯ ಇಲಾಖೆ ಬೆಂಕಿ ನಂದಿಸಲು ಹರಸಾಹಸ
ಶಿರಸಿ : ಕಾಡಿಗೆ ಬೆಂಕಿ ಬಿದ್ದು ಅಪಾರವಾದ ಕಾಡು ಸಂಪತ್ತು ನಾಶವಾದ ಘಟನೆ ತಾಲೂಕಿನ ಹೆಬ್ಬಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಸಿಬ್ಬಂದಿ ಎರಡು- ಮೂರು ದಿನಗಳಿದಂದ ಹರಸಹಾಸ ಪಟ್ಟು ಬೆಂಕಿ ನಂದಿಸಲು ಪ್ರಯತ್ನ ಜಾರಿಇದ್ದರೂ ಸಹಿತ ಬೆಂಕಿ ಹತೋಟಿಗೆ ಬಾರದೆ ಇರುವುದರಿಂದ ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.
ಕಿಡಿಗೇಡಿಗಳ ಕೃತ್ಯದಿಂದ ಅರಣ್ಯ ಕ್ಕೆ ಬೆಂಕಿ ಬೀಳಲು ಕಾರಣವೆನ್ನಲಾಗುತ್ತಿದೆ
ಅರಣ್ಯ ಇಲಾಖೆಯ ಸಿಬ್ಬಂದಿ ಕಳೆ ಮೂರು ದಿವಸಗಳಿಂದಲೂ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಶಿರಸಿಯ ಬಿಲ್ಲಕೊಪ್ಪ ಗ್ರಾ.ಪಂ ವ್ಯಾಪ್ತಿಯ ಕುಪ್ಪಳ್ಳಿ ಹೆಬ್ಬಳ್ಳಿ ಹಾಗೂ ಉಂಡಾಡಿ ಕಟ್ಟೆ ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಅರಣ್ಯಕೆ ಬೆಂಕಿ ಇಡುತ್ತಿದ್ದಾರೆ ಎಂದು ಹೇಳಲಾಗುತ್ತಿದರೂ ನಿಜವಾಗಿ ಯಾರು ಬೆಂಕಿ ಇಡುತ್ತಿದ್ದಾರೆ ಎಂಬುದು ಗೊತ್ತಾಗ ಬೇಕಿದೆ. ಆಯಾ ಅರಣ್ಯ ಪ್ರದೇಶದ ಹಿರಿಯ ಅಧಿಕಾರಿಗಳು ಹದ್ದಿನಕಣ್ಣು ಇಡುವುದು ಅವಶ್ಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ
ಒಂದು ಎಕರೆಗೂ ಅಧಿಕ ಅರಣ್ಯ ಸಂಪತ್ತು ಬೋರನಗುಡ್ಡ ಭಾಗದಲ್ಲಿ ಬೆಂಕಿಗೆ ಅರಣ್ಯ ನಾಶವಾಗಿದೆ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಒಣಗಿ ನಿಂತ ಬಿದಿರು ಬಾಂಬುಗಳು ಬೆಂಕಿಗೆ ಹೊತ್ತಿ ಉರಿಯುತ್ತಿದ್ದು ಇದರಿಂದ ಸುತ್ತಮುತ್ತಲ ಬೆಲೆ ಬಾಳುವ ಮರಗಳು ಅಕೇಶಿಯಾ ಮರಗಳು ಸುಟ್ಟು ಧರೆಗುರುಳುತ್ತಿವೆ ಎಂದು ಹೇಳಲಾಗುತ್ತಿದೆ . ಕಾಡಿಗೆ ಆವರಿಸಿದ ಬೆಂಕಿಯು ಶನಿವಾರ ಕುಪ್ಪಳ್ಳಿ ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿ ಆವರಿಸಿ ಆತಂತಕ್ಕೆ ಕಾರಣವಾಗಿ ದೆ. ಇಡೀ ಕಾಡು ತರಗಲೆಗಳಿಂದ ತುಂಬಿರುವ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಗೆ ಇತರಡೆ ಪಸರಿಸುತ್ತಿರುವುದರಿಂದ ಸ್ಥಳೀಯರ ಆತಂಕ ಹೆಚ್ಚಿಸಿದೆ. ಕಾಂಡಂಚಿನ ಪ್ರದೇಶದಲ್ಲಿ ಹುಲ್ಲಗಾವಲು ಪ್ರದೇಶವಿರುವ ಕಾರಣ ರೈತರು ಇನ್ನಷ್ಟು ಚಿಂತಿಗೆ ಬೀಳುವಂತೆ ಮಾಡಿದೆ.
ಬೆಸಿಗೆ ಕಾಲದಲ್ಲಿ ಕಾಡಿನಲ್ಲಿ ಉದುರಿಬಿದ್ದ ಮರಗಳ ಎಲೆಗಳು ಹಾಗು ಹುಲ್ಲು ಬಿದಿರು ಒಣಗಿರುವುದರಿಂದ ಬೆಂಕಿಯ ಅವಘಡಗಳು ಸ್ವಲ್ಪಜಾಸ್ತಿ ಎಂಬುದನ್ನು ಅರಣ್ಯ ಇಲಾಖೆ ಮರೆತಂತೆ ಕಾಣುತ್ತಿದೆ. ಸರಕಾರದಿಂದ ಅರಣ್ಯ ಇಲಾಖೆ ಗೆ ಅರಣ್ಯ ನಿರ್ವಣೆಗೆ ಅನುದಾನ ಬರುತ್ತಿದೆ. ಇಲಾಖೆಯು ಬೆಸಿಗೆ ಕಾಲದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಒಗಿದ ಹುಲ್ಲು ಎಲೆ ತೆರವು ಮಾಡಿ ವಿಲೇವಾರಿ ಮಾಡುವುದು ಅವಶ್ಯವಾಗಿದೆ. ಅರಣ್ಯ ಇಲಾಖೆ ತನ್ನ ತಪ್ಪನ್ನು ಮರೆಮಾಚಲು ಕಿಡಿಗೇಡಿಗಳ ಮೇಲೆ ಹಾಕುತ್ತಿದೆ ಬೆಸಿಗೆ ಕಾಲದಲ್ಲಿ ಕಾಡಿನ ಕುರಿತು ಇಲಾಖೆ ಮುತುವರ್ಜಿ ವಹಿಸುವುದು ಅವಶ್ಯವಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.