×
Ad

‘ವೈದ್ಯಕೀಯ ಕ್ಷೇತ್ರದಲ್ಲಿ ಏಕರೂಪ ಶಿಕ್ಷಣ ಜಾರಿ’

Update: 2016-04-05 23:45 IST

ಬೆಂಗಳೂರು, ಎ.5: ವೈದ್ಯಕೀಯ ಕ್ಷೇತ್ರದಲ್ಲಿ ಸಮನಾದ ಪಠ್ಯಕ್ರಮವನ್ನು ಅಳವಡಿಸುವುದರ ಮೂಲಕ ಏಕರೂಪ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದು ಭಾರತಿಯ ವೈದ್ಯಕೀಯ ಪರಿಷತ್‌ನ ಅಧ್ಯಕ್ಷೆ ಡಾ.ಜಯಶ್ರೀ ತಿಳಿಸಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವತಿಯಿಂದ ನಗರದ ನಿಮ್ಹಾನ್ಸ್ ಕನ್ವೆಂಷನ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 18ನೆ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ದೇಶದಾದ್ಯಂತ ವೈದಕೀಯ ಪದವಿ ಶಿಕ್ಷಣ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪದ್ಧತಿಯಲ್ಲಿ ಏಕರೂಪತೆ ತರಲು ಭಾರತೀಯ ವೈದ್ಯಕೀಯ ಪರಿಷತ್ ಶ್ರಮಿಸುತ್ತಿದೆ. ಇದರ ಜೊತೆಗೆ ಆಸ್ಪತ್ರೆ ಹಾಗೂ ಸಮುದಾಯದವನ್ನು ಏಕೀಕರಣಗೊಳಿಸುವುದು ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
 ವೈದ್ಯರು ತಮ್ಮ ಜೀವನದಲ್ಲಿ ಸೇವಾ ಮನೋಭಾವ ಮತ್ತು ನಮ್ರತೆಯ ಗುಣಗಳನ್ನು ಹೊಂದಿಲ್ಲದಿದ್ದರೆ ಉತ್ತಮ ವೈದ್ಯರಾಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರು ಪರಿಶ್ರಮ, ದೃಢತೆ ಮತ್ತು ಸಮರ್ಪಣಾ ಮನೋಭಾವದ ಮೂಲಕ ಆರೋಗ್ಯದ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಸಮಾಜದಲ್ಲಿ ವೈದ್ಯಕೀಯ ವೃತ್ತಿಪರರ ಮೇಲಿನ ವಿಶ್ವಾಸ ದಿನೇ ದಿನೇ ಕುಗ್ಗುತ್ತಿದೆ. ಹೆಚ್ಚಿನ ಸಂಖ್ಯೆಯ ವೈದ್ಯರು ಇಂದು ಆರೋಗ್ಯಕರವಲ್ಲದ ಔಷಧಗಳನ್ನು ಶಿಾರಸು ಮಾಡುತ್ತಿದ್ದು, ಹಣದ ವ್ಯಾಮೋಹಕ್ಕೆ ಒಳಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದು ವೈದ್ಯ ವೃತ್ತಿಯ ಘನತೆ ಮತ್ತು ಗೌರವಕ್ಕೆ ಕುತ್ತು ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವೈದ್ಯಕೀಯ ವೃತ್ತಿ ವಿಜ್ಞಾನ ಮತ್ತು ಕಲೆಯೂ ಹೌದು. ವೈದ್ಯಕೀಯ ವೃತ್ತಿ ಕೇವಲ ವೈಜ್ಞಾನಿಕ ಜ್ಞಾನವೊಂದಕ್ಕೆ ಸೀಮಿತಗೊಳ್ಳದೆ ಚಿಕಿತ್ಸಾ ಕಲೆ ಕೂಡ ಹೊಂದಿದೆ. ವೈದ್ಯರ ನಡತೆ, ಹಾಸಿಗೆ ಪಕ್ಕದ ನಡವಳಿಕೆ ವೈದ್ಯಕೀಯ ಚಿಕಿತ್ಸಾ ಕಲೆಯ ಒಂದು ಭಾಗವಾಗಿರಬೇಕು. ಒಬ್ಬ ಕಲಾವಿದನು ಹೇಗೆ ಕಷ್ಟಕರವಾದ ಅಂಶಗಳನ್ನು ಉಪಯೋಗಿಸಿಕೊಂಡು ಉತ್ತಮ ಲಿತಾಂಶ ಕಂಡುಕೊಳ್ಳುತ್ತಾನೋ, ಹಾಗೆಯೇ ಒಬ್ಬ ವೈದ್ಯನು ನಿರ್ದಿಷ್ಟ ರೋಗಿಗೆ ತನ್ನ ಜ್ಞಾನದ ಸಹಾಯದಿಂದ ಸೂಕ್ತ ಚಿಕಿತ್ಸೆಯನ್ನು ನೀಡುವುದರ ಮೂಲಕ ಉತ್ತಮ ಲಿತಾಂಶ ಕಂಡುಕೊಳ್ಳುತ್ತಾನೆ ಎಂದು ಡಾ.ಜಯಶ್ರೀ ತಿಳಿಸಿದರು.
  ಘಟಿಕೋತ್ಸವದಲ್ಲಿ 70 ವಿದ್ಯಾರ್ಥಿಗಳಿಗೆ 102 ಚಿನ್ನದ ಪದಕವನ್ನು ರಾಜ್ಯಪಾಲ ವಿ.ಆರ್.ವಾಲಾ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವಾರು ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

10 ಚಿನ್ನದ ಪದಕ ಬಂದಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ. ಪ್ರತಿದಿನ 3-4ಗಂಟೆಗಳ ಕಾಲ ಕಷ್ಟ ಪಟ್ಟು ಅಭ್ಯಾಸ ಮಾಡುತ್ತಿದ್ದೆ. ಪಠ್ಯಗಳಲ್ಲಿ ಇರುವ ಅಂಶಗಳ ಜೊತೆಗೆ ಆಸ್ಪತ್ರೆಯಲ್ಲಿ ಬರುವ ರೋಗಿಗಳೊಂದಿಗೆ ಹೆಚ್ಚಾಗಿ ಬೆರೆತಿದ್ದರಿಂದ ಅವರೊಂದಿಗೆ ರೋಗದ ಕುರಿತು ಸಂಪೂರ್ಣ ಮಾಹಿತಿಯ ಕುರಿತು ಟಿಪ್ಪಣಿ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದ್ಟೆ. ಇವೆಲ್ಲವುಗಳ ಪ್ರತಿಫಲವಾಗಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಸಾಧ್ಯವಾಯಿತು. ಮುಂದೆ ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿ ಬಡವರ ಸೇವೆ ಮಾಡುವುದೇ ನನ್ನ ಉದ್ದೇಶವಾಗಿದೆ.
-ಡಾ.ನಿಶಾ ಬಿ.ಜೈನ್, 10 ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News