ಸ್ಪರ್ಧಾತ್ಮಕ ಪರೀಕ್ಷೆಯಲಿ್ಲ ಅತೀವ ಆತ್ಮವಿಶ್ವಾಸ ಬೇಡ: ಎನ್.ಎಂ.ನಾಗರಾಜ್
ಶಿವಮೊಗ್ಗ, ಎ. 9: ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವಾಗ ಅತೀವ ಆತ್ಮವಿಶ್ವಾಸ ಬೇಡ ಎಂದು ಅಪರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪರೀಕ್ಷಾ ಮೇಲ್ವಿಚಾರಕರಿಗೆ ಕಿವಿಮಾತು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಮೊಗ್ಗದಲ್ಲಿ ಎಪ್ರಿಲ್ 10ರಿಂದ ನಡೆಯಲಿರುವ ಕರ್ನಾಟಕ ಲೋಕಸೇವಾ ಆಯೋಗದ ತಾಂತ್ರಿಕ/ ತಾಂತ್ರಿಕೇತರ ಮತ್ತು ಕೆಎಸ್ಎಫ್ಸಿ ನಿಗಮದಲ್ಲಿನ ಖಾಲಿ ಹುದ್ದೆಗಳಿಗೆ ನಡೆಯುವ ಪರೀಕ್ಷಾ ಸಂಬಂಧ ನಿಯೋಜನೆಗೊಂಡ ಮೇಲ್ವಿಚಾರಕರು, ಮಾರ್ಗಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಹಲವಾರು ಪರೀಕ್ಷೆಗಳನ್ನು ನಡೆಸಿರುವ ಅನುಭವ ಇದೇ ಎಂಬ ಅತೀವ ಆತ್ಮ ವಿಶ್ವಾಸ ತಪ್ಪುಗಳಿಗೆ ಕಾರಣ ಆಗಬಹುದು. ಆದ್ದರಿಂದ ಅಂತಹ ಅತೀವ ಆಶ್ವಾಸ ಇಟ್ಟುಕೊಳ್ಳದೆ ಆಯೋಗದ ಪ್ರಸ್ತುತ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪ್ರತೀ ಪರೀಕ್ಷೆಯೂ ಹೊಸದೆಂಬ ಭಾವದೊಂದಿಗೆ ಎಚ್ಚರಿಕೆ ಯಿಂದ ಯಾವುದೇ ದುರಾಚಾರಕ್ಕೆ ಆಸ್ಪದ ನೀಡದೆ ಪರೀಕ್ಷೆ ನಡೆಸಬೇಕು. ಮಾರ್ಗಸೂಚಿಯಂತೆ ಕೊಠಡಿ ಮೇಲ್ವಿಚಾರಕರಿಗೆ ತರಬೇತಿಗೊಳಿಸಬೇಕು. ಕಡ್ಡಾಯವಾಗಿ ಸಮಸ್ಯಾತ್ಮಕ ವಿಷಯವನ್ನು ಪ್ರಮುಖವಾಗಿ ವೀಡಿಯೊ ಚಿತ್ರೀಕರಣ ಮಾಡಬೇಕು ಎಂದು ಸೂಚಿಸಿದರು.
ಪರೀಕ್ಷೆಗೆ ನಿಗದಿಗೊಳಿಸಿರುವ ಸಮಯ ಕಡ್ಡಾಯ ಪಾಲನೆ ಮುಖ್ಯ ಎಂದ ಅವರು, ಅಭ್ಯರ್ಥಿಗಳ ತಪಾಸಣೆ ಸೇರಿದಂತೆ ಪರೀಕ್ಷೆ ನಡೆದ ನಂತರ ತಪಾಸಣಾಧಿಕಾರಿಗಳ ಸಮ್ಮುಖದಲ್ಲೇ ಕೆಪಿ ಎಸ್ಸಿಗೆ ಉತ್ತರ ಪತ್ರಿಕೆಗಳನ್ನು ಪೋಸ್ಟ್ ಮಾಡಬೇಕು ಎಂದರು.
ಇಂದು ನಿಷೇಧಾಜ್ಞೆ ಜಾರಿ
ಎ
ಪ್ರಿಲ್ 10ರಿಂದ ಎಪ್ರಿಲ್ 17ರವರೆಗೆ ಕೆಎಪಿಎಸ್ಸಿ ಪರೀಕ್ಷೆ ನಡೆಯುವ ಕೇಂದ್ರಗಳಾದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಸರಕಾರಿ ಪಿಯು ಕಾಲೇಜು, ಸಹ್ಯಾದ್ರಿವಿಜ್ಞ್ಞಾನ ಕಾಲೇಜು, ನ್ಯಾಷನಲ್ ಪಿಯು ಕಾಲೇಜು, ಕಮಲಾ ನೆಹರೂ ಮಹಿಳಾ ಕಾಲೇಜು, ಡಿವಿಎಸ್ ಕಾಲೇಜು, ಕಸ್ತೂರ್ಬಾ ಬಾಲಕಿಯರ ಕಾಲೇಜು ಹೈಸ್ಕೂಲ್ ವಿಭಾಗ ಹಾಗೂ ಕಾಲೇಜು ವಿಭಾಗ, ಸೆಕ್ರೆಡ್ ಹಾರ್ಟ್ ಕೆಥಡ್ರೆಲ್ ಪಿಯು ಕಾಲೇಜುಗಳ ಸುತ್ತ 200 ಮೀಟರ್ ಬೆಳಗ್ಗೆ 10ರಿಂದ 11:30ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.