ರಾಜ್ಯ ನಾಯಕತ್ವ ಬದಲಾವಣೆ ಇಲ್ಲ: ದಿಗ್ವಿಜಯ ಸಿಂಗ್
Update: 2016-04-13 06:21 GMT
ಬೆಂಗಳೂರು, ಎ.13: ರಾಜ್ಯ ಕಾಂಗ್ರೆಸ್ನ ನಾಯಕತ್ವ ಬದಲಾವಣೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್ ಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಇಲ್ಲ ಎಂದರು.
ರಾಜ್ಯ ಉಸ್ತುವಾರಿ ಹುದ್ದೆಯಿಂದ ತಮ್ಮನ್ನು ಬದಲಾಯಿಸುವಂತೆ ಮಾಜಿ ಸಂಸದ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ ಸಿಂಗ್ ಅವರು ವಿಶ್ವನಾಥ್ ಬಗ್ಗೆ ತಮಗೆ ಗೌರವ ಇದೆ. ನನ್ನನ್ನು ಬದಲಾಯಿಸುವಂತೆ ಅವರು ಹೈಕಮಾಂಡ್ಗೆ ದೂರು ನೀಡಲಿ ಎಂದು ವಿಶ್ವನಾಥ್ಗೆ ಟಾಂಗ್ ನೀಡಿದ್ದಾರೆ.