×
Ad

ಶಾದಿ ಭಾಗ್ಯ ಯೋಜನೆ ಸದುಪಯೋಗವಾಗಲಿ: ಬಲ್ಕೀಸ್‌ಬಾನು

Update: 2016-05-09 22:13 IST

ತರೀಕೆರೆ, ಮೇ 9: ಪಟ್ಟಣದಲ್ಲಿ ಇತ್ತೆಹಾದ್ ಗ್ರೂಪ್‌ವತಿಯಿಂದ ಇಸ್ಲಾಮಿನಲ್ಲಿ ಮಹಿಳೆಯರ ಹಕ್ಕುಗಳು ಕುರಿತು ವಿಚಾರ ಸಂಕಿರಣ ನಡೆಯಿತು.

ವಿಚಾರ ಸಂಕಿರಣದಲ್ಲಿ ಭಾಗವಹಿಸಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಬಲ್ಕೀಸ್‌ಬಾನು ಮಾತನಾಡಿ, ಮುಸ್ಲಿಮರಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗು ತ್ತಿರುವುದು ಆತಂಕಕಾರಿ. ಸರಳ ವಿವಾಹಗಳಿಗೆ ಹೆಚ್ಚು ಒತ್ತು ನೀಡಬೇಕು. ಮದುವೆಗಳು ಸಾಮಾಜಿಕ ಅಸಮಾನತೆಗೆ ಕಾರಣವಾಗಬಾರದು. ಸರ್ಕಾರ ಅಶಕ್ತ ಯುವತಿಯರ ಮದುವೆಗಾಗಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದು. ಉಳ್ಳವರು ಇದರ ದುರುಪಯೋಗ ಮಾಡಬಾರದು ಎಂದರು

 ನಿವೃತ್ತ ವಿಜ್ಞಾನಿ ಅಬ್ದುಲ್ ಜಬ್ಬಾರ್ ಸಾಬ್ ಮಾತನಾಡಿ, ಇಸ್ಲಾಮ್ ಮಹಿಳೆ ಯರಿಗೆ ಎಲ್ಲಾ ರೀತಿಯ ಹಕ್ಕುಗಳ ಸ್ವಾತಂತ್ರ್ಯವನ್ನು ನೀಡಿದೆ. ಪವಿತ್ರ ಕುರ್‌ಆನ್ ತಾಯಿಯ ಮಹತ್ವವನ್ನು ಹೇಳುತ್ತದೆ. ಅಲ್ಲದೇ ಗೌರವವನ್ನು ಕಲಿಸುತ್ತದೆ. ಪ್ರವಾದಿ ಗಳ ಆಗಮನದ ಮುಂಚೆ ಹೆಣ್ಣನ್ನು ಜೀವಂತ ಸಮಾಧಿ ಮಾಡುವ ಹೇಯ ಕೃತ್ಯ ನಡೆ ಯುತ್ತಿತ್ತು. ಆದರೆ ಈಗ ಭ್ರೂಣ ಹತ್ಯೆಯ ಹೆಸರಲ್ಲಿ ಹೆಣ್ಣಿನ ಕೊಲೆ ನಡೆಯುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಸೈಯದ್ ಅನ್ಸಾರ್ ಕಲೀಂ, ದಾವಣಗೆರೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಸಿರಾಜ್, ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಮಸೂದ್ ಅಹ್ಮದ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದಾದಾಪೀರ್, ಶುಶ್ರೂಷಕಿ ಹಸೀನಾ ಖಾಲಿಕ್ ಅಹ್ಮದ್ ಇವರನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುತ್ತಾಹಿದಾ ಶಿವಮೊಗ್ಗ ವಿಭಾಗದ ಕಾರ್ಯದರ್ಶಿ ಹಾಮಿದ್ ಉಮ್ರೀ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉರ್ದು ಉಪನ್ಯಾಸಕ ಫಯಾಝುರ್ರಹ್ಮಾನ್, ಇತ್ತೇಹಾದ್ ಗ್ರೂಪ್ ಅಧ್ಯಕ್ಷ ಮುಹಮ್ಮದ್ ಯೂಸುಫ್, ಮುಖಂಡರಾದ ಇರ್ಫಾನ್ ಅಹ್ಮದ್ ಬೇಗ್, ಅಬ್ದುಲ್ ಶುಕೂರ್, ಇದ್ರೀಸ್ ಅಝ್ಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News