ಬಿಸಿಲ ಬೇಗೆಗೆ ಕರಗುವ ರಸ್ತೆ, ಜನ ಕಂಗಾಲು
Update: 2016-05-22 20:23 IST
ಹೊಸದಿಲ್ಲಿ, ಮೇ 22: ಭಾರತದ ವಿವಿಧ ಭಾಗಗಳಲ್ಲಿ ರಣ ಬಿಸಿಲಿನ ಕಾರಣದಿಂದಾಗಿ ಡಾಂಬಾರು ರಸ್ತೆಗಳು ಕರಗತೊಡಗಿದೆ, ಜನ ಕಂಗಾಲಾಗಿದ್ದಾರೆ. ರಸ್ತೆಯಲ್ಲಿ ಕಾಲಿಟ್ಟರೆ ಶೂ, ಚಪ್ಪಲಿಗಳು ಡಾಂಬಾರ್ನಲ್ಲಿ ಅಂಟಿಕೊಂಡು ಜನಸಾಮಾನ್ಯರು ಒದ್ದಾಡುವಂತಾಗಿದೆ.
ರಾಜಸ್ಥಾನದ ಚುರು ಮತ್ತು ಗಂಗಾನಗರಲ್ಲಿ ತಾಪಮಾನ 49.2 ಸೆಲ್ಸಿಯಸ್ಗೆ ಮುಟ್ಟಿದೆ. ವಿದರ್ಭ, ಜಮ್ಮು -ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಉಷ್ಣಾಂಶ ಏರಿದೆ. ದಿಲ್ಲಿಯಲ್ಲಿ ಶನಿವಾರ ದಿನದ ತಾಪವಾನ 41.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.