4 ಟನ್ ರಕ್ತಚಂದನ ದಿಮ್ಮಿಗಳ ವಶ

Update: 2016-05-24 06:53 GMT

ಬೆಂಗಳೂರು, ಮೇ 24: ಬೆಂಗಳೂರು  ಗ್ರಾಮಾಂತರದ ತಿರುಮಲಶೆಟ್ಟಿಹಳ್ಳಿ ಪೊಲೀಸರು   ನಡೆಸಿದ ಕಾರ್ಯಾಚರಣೆಯಲ್ಲಿ  ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 4 ಟನ್ ರಕ್ತಚಂದನ  ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ತೋಟದ ಬಾವಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ರಕ್ತಚಂದನ  ದಿಮ್ಮಿಗಳು ಪತ್ತೆಯಾಗಿದೆ. ಆರೋಪಿ ಅಯಾಝ್  ಪರಾರಿ ಯಾಗಿದ್ದಾನೆ.

ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News