ಪೊಲೀಸರ ಮುಷ್ಕರ: ಶಿವಮೊಗ್ಗ ಜಿಲ್ಲೆಯಲ್ಲಿ ಏನಾಗಲಿದೆ?
ಶಿವಮೊಗ್ಗ, ಜೂ. 3: ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಹಾಕುವ ಮೂಲಕ ಪರೋಕ್ಷ ಪ್ರತಿಭಟನೆ ನಡೆಸಲಿದ್ದಾರಾ, ಇಲ್ಲವೇ ಎಂದಿನಂತೆ ಕರ್ತ ವ್ಯಕ್ಕೆ ಹಾಜರಾಗಲಿದ್ದಾರಾ, ಪೊಲೀಸರ ಮುಷ್ಕರ ಬೆಂಬಲಿಸಿ ಪ್ರತಿಭಟ ನೆಗಿಳಿಯುವ ಸಂಘಟ ನೆಗಳ್ಯಾವುವು, ಒಂದು ವೇಳೆ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಯಾವ ಸ್ಥಿತಿ ನಿರ್ಮಾಣವಾಗಲಿದೆ.
ಇದು, ನಾಗರಿಕ ವಲಯದಲ್ಲಿ ಮೂಡಿರುವ ಕುತೂಹಲಭರಿತ ಪ್ರಶ್ನೆಗಳು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ. 4ರಂದು ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಹಾಕುವ ಅಥವಾ ಕರ್ತವ್ಯ ಬಹಿಷ್ಕರಿಸಿ ನಡೆಸಲು ಉದ್ದೇಶಿಸಿರುವ ಮುಷ್ಕರ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲೆಯಾದ್ಯಂತ ಪೊಲೀಸರ ಮುಷ್ಕರದ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗುತ್ತಿದೆ. ಶನಿವಾರ ಏನಾಗಲಿದೆ ಎಂಬುವುದರತ್ತ ಚಿತ್ತ ನೆಟ್ಟಿದ್ದು, ಜಿಲ್ಲೆಯಲ್ಲಿ ಮುಷ್ಕರ ಯಶಸ್ವಿಯಾಗಲಿದೆಯಾ ಇಲ್ಲವೇ ಎಂಬುವುದು ಕುತೂಹಲ ಕೆರಳುವಂತೆ ಮಾಡಿದೆ.
ಯೂ ಟರ್ನ್: ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಸಿವಿಲ್, ಡಿಎಆರ್ನ ಹಲವು ಪೊಲೀಸ್ ಸಿಬ್ಬಂದಿ ಜೂ. 4ರಂದು ಸಾಮೂಹಿಕ ರಜೆ ಕೋರಿ ಮನವಿ ಸಲ್ಲಿಸುವ ಅಥವಾ ಗೈರು ಹಾಜರಾಗುವ ನಿರ್ಧಾರ ಮಾಡಿದ್ದರು. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಪೊಲೀಸ್ ಸಿಬ್ಬಂದಿ ತಂಡ, ತಂಡವಾಗಿ ತಮ್ಮ ಮೇಲಧಿಕಾರಿಗಳಿಗೆ ರಜೆ ಕೋರಿ ಮನವಿ ಪತ್ರ ಕೂಡ ಸಲ್ಲಿಸಿದ್ದಾರೆ. ಮತ್ತೊಂದೆಡೆ ಹಿರಿಯ ಪೊಲೀಸ್ ಅಧಿಕಾರಿಗಳು ಜೂ. 4ರಂದು ಉದ್ದೇಶಪೂರ್ವಕವಾಗಿ ರಜೆ ಹಾಕುವ ಅಥವಾ ಪ್ರತಿಭಟನೆ ನಡೆಸುವ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಾನೂನು ರೀತಿಯ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸುವ ಕಟ್ಟುನಿಟ್ಟಿನ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಪ್ರತ್ಯೇಕವಾಗಿ ಪೊಲೀಸ್ ಸಿಬ್ಬಂದಿಯ ಸಭೆ ನಡೆಸಿ ಮುಷ್ಕರ ನಡೆಸದಂತೆ ತಾಕೀತು ಕೂಡ ಮಾಡಲಾಗಿದೆ. ಮೆಮೋ ಕೂಡ ಹೊರಡಿಸಿದೆ. ಹಿರಿಯ ಅಧಿಕಾರಿಗಳ ಬಿಗಿ ನಿಲುವು, ಕಾನೂನು ಕ್ರಮದ ಎಚ್ಚರಿಕೆಯಿಂದ ಹಲವು ಪೊಲೀಸರು ’ಯೂ ಟರ್ನ್’ ತೆಗೆದುಕೊಂಡಿದ್ದು ತಾವು ಕೊಟ್ಟಿದ್ದ ರಜೆ ಮನವಿ ವಾಪಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮತ್ತೆ ಕೆಲ ಪೊಲೀಸರು ಗೊಂದಲಕ್ಕೆ ಸಿಲುಕಿ ದ್ದು, ಯಾವ ನಿರ್ಧಾರ ಕೈಗೊಳ್ಳಬೇಕು. ಎಂಬುವುದು ತಿಳಿಯದೆ ಪರಿತಪಿಸುತ್ತಿದ್ದಾರೆ. ಇತರೆ ಕೆಲ ಪೊಲೀಸರು ಮಾತ್ರ ಮುಷ್ಕರದ ಉಸಾಬರಿಯೇ ತಮಗೆ ಬೇಡ ಎಂದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಗೋಳು ಕೇಳುವವರ್ಯಾರು ಇಲ್ಲವಾಗಿದ್ದಾರೆ. ಹಲವು ವರ್ಷಗಳಿಂದ ಸಮಸ್ಯೆ ಪರಿಹರಿಸಿ ಎಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮುಷ್ಕರ ಮಾಡುತ್ತೇವೆ ಎಂದ ಕೂಡಲೇ ಕಾನೂನಿಗೆ ವಿರುದ್ಧ ಎಂದು ಬೆದರಿಸಲಾಗಿದೆ.
ಹಿರಿಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದ ಶಿಸ್ತುಕ್ರಮ ಜರಗಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ನಿಜಕ್ಕೂ ಇದು ಅಮಾನವೀಯವಾಗಿದೆ. ಏನೂ ಮಾಡಲು ಆಗದ ಸ್ಥಿತಿಯಲ್ಲಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಸಿಬ್ಬಂದಿಯೋರ್ವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅಧಿಕಾರಿಗಳ ಅಂತಿಮ ಕಸರತ್ತು..
.: ಪೊಲೀಸ್ ಸಿಬ್ಬಂದಿಯ ಮನವೊಲಿಕೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸು ತ್ತಿರುವ ಕಸರತ್ತು ಮುಂದುವರಿದಿದೆ. ಜೂ. 4ರಂದು ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಇನ್ನಿಲ್ಲದ ಕಾರ್ಯತಂತ್ರ ನಡೆಸುತ್ತಿದ್ದಾರೆ. ಸಿಬ್ಬಂದಿಯ ಮನವೊಲಿಸುವುದರ ಜೊತೆಗೆ, ಕರ್ತವ್ಯಕ್ಕೆ ಗೈರು ಹಾಜರಾದರೆ ಶಿಸ್ತುಕ್ರಮ ಜರಗಿಸುವ ಎಚ್ಚರಿಕೆಯನ್ನು ಕೂಡ ರವಾನಿಸುತ್ತಿದ್ದಾರೆ. ಠಾಣಾಧಿಕಾರಿಗಳು ತಮ್ಮ ಕೆಳ ಹಂತದ ಪ್ರತಿಯೋರ್ವ ಸಿಬ್ಬಂದಿಯ ಅಭಿಪ್ರಾಯ ಆಲಿಸುತ್ತಿದ್ದಾರೆ. ಯಾರ್ಯಾರು ಕರ್ತವ್ಯಕ್ಕೆ ಗೈರು ಹಾಜರಾಗಬಹುದು ಎಂಬ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈ ಸಿಬ್ಬಂದಿಯ ಚಲನವಲನಗಳ ಮೇಲೆಯೂ ಸದ್ದಿಲ್ಲದೆ ಕಣ್ಣಿಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದು ಪೊಲೀಸ್ ಸಿಬ್ಬಂದಿಯ ನಿದ್ದೆಗೆಡುವಂತೆ ಮಾಡಿದೆ.