×
Ad

ಓಟಿಗಾಗಿ ನೋಟು ಆಮಿಷದ ಚುನಾವಣೆ : ಸಿಬಿಐ ತನಿಖೆ ಆದೇಶಕ್ಕೆ ಹೆಚ್.ಡಿ. ರೇವಣ್ಣ ಆಗ್ರಹ

Update: 2016-06-04 16:29 IST

ಹಾಸನ: ಆಮಿಷದ ಮೂಲಕ ಚುನಾವಣೆ ಗೆಲ್ಲಿಸಲು ರಾಜ್ಯ ಸರ್ಕಾರ ಹೊರಟಿದ್ದು, ಈ ಬಗ್ಗೆ ಕೇಂದ್ರ ಚುನಾವಣ ಆಯೋಗ ಗಮನಹರಿಸಿ ಕೂಡಲೇ ಚುನಾವಣೆ ಮುಂದೂಡಿ ಸಿಬಿಐ ತನಿಖೆ ಆದೇಶ ಮಾಡುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.

        ನಗರದ ಕೆ.ಆರ್. ಪುರಂನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸಭೆಗೆ ನಡೆಯುವ ಚುನಾವಣೆಯಲ್ಲಿ ಬಹಿರಂಗವಾದ ಓಟಿಗಾಗಿ ನೋಟು ಪ್ರಕರಣದಲ್ಲಿ ಕೆಲ ಮುಖಂಡರು ಶಾಮೀಲಾಗಿದ್ದು ಕಂಡುಬಂದಿದ್ದರು ಸಹ ರಾಜ್ಯ ಚುನಾವಣಾ ಆಯೋಗ ಕಣ್ಮಚ್ಚಿ ಕುಳಿತ್ತಿದ್ದು ರಾಜ್ಯ ಕಾಂಗ್ರೆಸ್‌ನ ಎಂಜೆಟ್‌ನಂತೆ ವರ್ತಿಸುತ್ತಿದೆ. ಈ ಕೊಡಲೇ ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಪ್ರಕರಣವನ್ನು ಸಿ,ಬಿ.ಐಗೆ ಒಪ್ಪಿಸುವ ಮೂಲಕ ತನಿಖೆ ನಡೆಸಬೇಕು ಎಂದರು.

ರಾಜ್ಯ ಸರಕಾರಿ ನೌಕರಿಗೆ ಧಮ್ಕಿ ಹಾಕುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುಲು ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು. ಚುನಾವಣಾ ಅಕ್ರಮಗಳಲ್ಲಿ ಭಾಗವಯಿಸಿಸಲು ಒತ್ತಾಯಿಸಲಾಗುತ್ತದೆ ಎಂದ ಅವರು ಮುಕ್ತವಾದ ಚುನಾವಣೆ ನಡೆಸಲು ಈ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ ಹಾಗಾಗೀ ಕೇಂದ್ರ ಸರ್ಕಾರದ ಚುನಾವಣಾ ಆಯೋಗವೇ ಮಧ್ಯ ಪ್ರವೇಶಿಸಿ ಚುನಾವಣೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.

 ಈಗಾಗಲೇ ಕಾರ್ಯಚರಣೆಯಲ್ಲಿ ಬಹಿರಂಗಗೊಂಡ ಓಟಿಗಾಗಿ ನೋಟು ಪ್ರಕರಣದ ಬಗ್ಗೆ ಮಾತನಾಡಿ, ರಾಜ್ಯ ಸಭೆಗೆ ನಡೆಯುವ ಚುನಾವಣೆ ಸಂಭಂಧ ಕೆಲ ನಾಯಕರು ಓಟಿಗಾಗಿ ಕೋಟಿಗಟ್ಟಲೆ ಡಿಮ್ಯಾಂಡ್ ಮಾಡಿರುವುದು ಬಹಿರಂಗಗೊಂಡಿದರು ಸಹ ರಾಜ್ಯ ಚುನಾವಣೆ ಆಯೋಗ ಕಣ್ಮಚ್ಚಿ ಕುಳಿತುಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್‌ನ ಎಜೆಂಟ್‌ನಂತೆ ವರ್ತಿಸುತ್ತಿದೆ. ಇನ್ನೊಂದು ಕಡೆ ರಾಜ್ಯ ಸರ್ಕಾರ ಹಣದ ಹೊಳೆ ಹರಿಸುವ ಮೂಲಕ ಮತವನ್ನು ಖರೀದಿಸಲು ಮುಂದಾದರೆ ಮತ್ತೊಂದು ಕಡೆ ಪಕ್ಷಂತಾರ ಅಭ್ಯರ್ಥಿಗಳ ಒಲೈಕೆಯಲ್ಲಿ ತೊಡಗಿದೆ ಎಂದು ದೂರಿದರು. ಒಟ್ಟಾರೆ ಯಾವ ಪಕ್ಷದವರಾಗಲಿ ಎಲ್ಲಾವನ್ನು ಸಿಬಿಐಗೆ ಒಪ್ಪಿಸಿ ಸತ್ಯಾಂಶ ಹೊರ ಬರುವಂತೆ ಸಲಹೆ ನೀಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಜೆಡಿಎಸ್ ಮುಗಿಸುವುದೆ ಗುರಿ ಹೊಂದಿದ್ದಾರೆ. ಯಾವ ಅಭಿವೃದ್ಧಿಗೆ ಗಮನ ನೀಡದ ಇವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೊನೆ ದಿನ ಎಣಿಸುತ್ತಿದ್ದಾರೆ ಎಂದು ಅವರದೇ ಪಕ್ಷದ ಮಾಜಿ ಸಚಿವರಾದ ಜನಾರ್ಧನ ಪೂಜಾರಿರವರೇ ಹೇಳಿರುವುದು ನೂರಕ್ಕೆ ನೂರರಷ್ಟು ನಿಜವಾಗಿದೆ ಎಂದರು.

 ಇದೆ ವೇಳೆ ಕ್ಷೇತ್ರದ ಶಾಸಕರಾದ ಹೆಚ್. ಎಸ್ ಪ್ರಕಾಶ್. ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News