"ಯೆ ಪೈಸಾ ಕಾ ಖೇಲ್‌ ಕುಚ್‌ ನಹೀ ಹೇ " : ಝಮೀರ್ ಅಹ್ಮದ್‌

Update: 2016-06-11 10:46 GMT

ಬೆಂಗಳೂರು, ಜೂ.11: ರಾಜ್ಯಸಭೆಯ ಚುನಾವಣೆಯಲ್ಲಿ ಜೆಡಿಎಸ್‌ನ ಎಂಟು ಶಾಸಕರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ. ಜೆಡಿಎಸ್‌ನ ಏಜೆಂಟ್‌ ಎಚ್‌.ಡಿ.ರೇವಣ್ಣ  ಅವರಿಗೆ  ಮತಪತ್ರವನ್ನು ತೋರಿಸಿಯೇ ಕಾಂಗ್ರೆಸ್‌ಗೆ  ಮತ ಚಲಾಯಿಸಿರುವುದಾಗಿ ಜಾಮರಾಜಪೇಟೆ ಶಾಸಕ ಝಮೀರ‍್ ಅಹ್ಮದ್‌ ಖಾನ್‌ ಹೇಳಿಕೆ ನೀಡಿದ್ದಾರೆ.

ಜೆಡಿಎಸ್‌ನಲ್ಲಿ ಹಲವು ಮಂದಿ ಮುಸ್ಲಿಂ ಮುಖಂಡರಿದ್ದಾರೆ. ಆದರೆ ಅವರಿಗೆ ಅವಕಾಶ ನೀಡದೆ ಜೆಡಿಎಸ್‌ನ ವರಿಷ್ಠರು ಕಾಂಗ್ರೆಸ್‌ನ ಬಿ.ಎಂ.ಫಾರೂಕ್‌ಗೆ ರಾಜ್ಯಸಭಾ ಟಿಕೆಟ್‌ ನೀಡಿದ್ದಾರೆ. ಜೆಡಿಎಸ್ ನ ವರಿಷ್ಠರ ನಿರ್ಧಾರದಿಂದ ನೊಂದು ಕಾಂಗ್ರೆಸ್ ಗೆ ಮತ ಚಲಾಯಿಸಿರುವುದಾಗಿ ಝಮೀರ‍್ ಅಹ್ಮದ್‌ ಖಾನ್‌ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News