ಡಿಕೆಶಿ, ಮಂಜು ವಿರುದ್ಧ ಜೆಡಿಎಸ್ ದೂರು
Update: 2016-06-11 11:44 GMT
ಬೆಂಗಳೂರು, ಜೂ.11: ರಾಜ್ಯಸಭೆಯ ಚುನಾವಣೆಯ ಮತಗಟ್ಟೆಗೆ ಅನಗತ್ಯವಾಗಿ ಪ್ರವೇಶಿಸಿ ತಾವು ಸೂಚಿಸಿದ ಅಭ್ಯರ್ಥಿಗೆ ಮತಹಾಕುವಂತೆ ಶಾಸಕರ ಮೇಲೆ ಒತ್ತಡ ಹಾಕಿದ್ದಾರೆಂದು ಆರೋಪಿಸಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಪಶು ಸಂಗೋಪನಾ ಸಚಿವ ಎ.ಮಂಜು ವಿರುದ್ಧ ಜೆಡಿಎಸ್ ಚುನಾವಣಾಧಿಕಾರಿಗೆ ದೂರು ನೀಡಿದೆ.
ಡಿಕೆಶಿ ಹಾಗೂ ಮಂಜು ಅವರು ಸಚಿವರಾಗಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿದ್ದಾರೆಂದು ಜೆಡಿಎಸ್ ನ ಚುನಾವಣಾ ಏಜೆಂಟ್ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಡಿಕೆಶಿ ಹಾಗೂ ರೇವಣ್ಣ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.