ಜುಲೈ 4ರಿಂದ ವಿಧಾನಸಭೆ ಅಧಿವೇಶನ: ಎಸ್.ಮೂರ್ತಿ

Update: 2016-06-17 13:12 GMT

ಬೆಂಗಳೂರು, ಜೂ. 17: ವಿಧಾನಸಭೆಯ ಮಳೆಗಾಲದ ಅಧಿವೇಶನ ಜು.4ರ ಬೆಳಗ್ಗೆ 11ಗಂಟೆಯಿಂದ ಆರಂಭವಾಗಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜು.4ರಿಂದ 29ರ ವರೆಗೆ ಶನಿವಾರ, ರವಿವಾರ ಹಾಗೂ ರಂಝಾನ್ ಹಬ್ಬದ ರಜೆಯನ್ನು ಹೊರತುಪಡಿಸಿ ಒಟ್ಟು 19 ದಿನಗಳ ಕಾಲ ಕಾರ್ಯ ಕಲಾಪಗಳು ನಡೆಯಲಿವೆ ಎಂದು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News