ಹುಟ್ಟೂರಿನಲ್ಲಿ ಡಿವೈಎಸ್ಪಿ ಗಣಪತಿ ಅಂತ್ಯಸಂಸ್ಕಾರ
Update: 2016-07-08 16:49 IST
ಡಿವೈಎಸ್ಪಿ ಗಣಪತಿಯವರ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಶುಕ್ರವಾರ ನೆರವೇರಿತು.
ಹುಟ್ಟೂರು ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ತೋಟವೊಂದರಲ್ಲಿ ಕೊಡವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದ್ದು, ಹಿರಿಯ ಪುತ್ರ ನೇಹಲ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.