ಭಟ್ಕಳ: ಮೀನುಗಾರಿಕಾ ಬೋಟ್ ಮುಳುಗಡೆ; ಓರ್ವ ನಾಪತ್ತೆ

Update: 2016-08-04 10:43 GMT

ಭಟ್ಕಳ, ಆ.4: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಒಂದು ಮುಳುಗಡೆಯಾಗಿ ಓರ್ವ ಮೀನುಗಾರ ಕಾಣೆಯಾಗಿದ್ದು ಏಳು ಮಂದಿ ತಮ್ಮ ಬದುಕಿ ದಡ ಸೇರಿದ ಘಟನೆ ಗುರುವಾರ ನಡೆದಿದೆ.

ಸಮುದ್ರದಲ್ಲಿ ಕಾಣೆಯಾದ ವ್ಯಕ್ತಿಯನ್ನು ಮಂಜುನಾಥ್ ಬಾಬು ಖಾರ್ವಿ(35) ಎಂದು ಗುರುತಿಸಲಾಗಿದೆ.

ಲಭ್ಯ ಮಾಹಿತಿಯಂತೆ ಎಂಟು ಜನ ಮೀನುಗಾರರು ಗುರು ಅನುಗ್ರಹ ಎಂಬ ಹಡಗಿನಲ್ಲಿ ಬುಧವಾರ ಮೀನುಗಾರಿಕೆಗೆ ತೆರಳಿದ್ದು ಸಂಜೆ 4:30ರ ಸುಮಾರೊಗೆ ಹವಾಮಾನ ವೈಪರೀತ್ಯದಿಂದಾಗಿ ಹಡಗು ಸಮುದ್ರದಲ್ಲಿ ಮುಳುಗಿತು ಎನ್ನಲಾಗಿದೆ. ಈ ಸಂದರ್ಭ ಬೋಟ್‌ನಲ್ಲಿದ್ದ ಮೀನುಗಾರರಾದ ಪಾಂಡುರಂಗ ನಾಗಪ್ಪಖಾರ್ವಿ(42), ಕೃಷ್ಣ ಚಂದ್ರಕಾಂತ್ ಖಾರ್ವಿ(26), ನಾಗೇಶ್ ಬಾಬು ಖಾರ್ವಿ(32), ರಮೇಶ್ ಮಾಸ್ತಿ ಖಾರ್ವಿ(38) ಮಾದೇವ್ ಕೃಷ್ಣ ಖಾರ್ವಿ(35), ಅಜೀತ್ ಗೋವಿಂದ್ ಖಾರ್ವಿ(26) ಹಾಗೂ ಸುಭಾಷ್ ಕೃಷ್ಣ ಖಾರ್ವಿ(32) ಎಂಬವರು ದೂರದಲ್ಲಿದ್ದ ಮತ್ತೊಂದು ಬೋಟ್‌ನ ಸಹಾಯದೊಂದಿಗೆ ದಡ ಸೇರಿದ್ದು, ಈ ಪೈಕಿ ತಂಡದಲ್ಲಿದ್ದ ಮಂಜುನಾಥ್ ಖಾರ್ವಿ ಎನ್ನುವವರು ಕಾಣೆಯಾಗಿದ್ದಾಗಿ ತಿಳಿದುಬಂದಿದೆ.

ದಡ ಸೇರಿದ 7 ಮಂದಿ ಮೀನುಗಾರರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News