ಮೀಟರ್ ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Update: 2016-08-07 13:59 GMT

ಹಾಸನ,ಆ.7: ಮೀಟರ್ ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತಡರಾತ್ರಿ ನಡೆದಿದೆ.

     ನಗರದ ತಣ್ಣಿರುಹಳ್ಳದಲ್ಲಿ ವಾಸವಾಗಿರುವ ಸಯ್ಯಿದ್ ಮುಬಾರಕ್ (34) ಎಂಬುವರು ಮಾಡಿದ ಸಾಲಕ್ಕೆ ಮೀಟರ್ ಬಡ್ಡಿದಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕ್ಯಾಂಟಿನ್ ಹಾಗೂ ಇತರೆ ಉದ್ದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ 3 ಲಕ್ಷದ 50 ಸಾವಿರ ರೂಗಳನ್ನು ಸಾಲವಾಗಿ ಪಡೆಯಲಾಗಿತ್ತು. ತಣ್ಣಿರುಹಳ್ಳದಲ್ಲಿ ಒಂದು ಕ್ಯಾಂಟಿನ್ ನಡೆಸುತ್ತಿದ್ದು, ಆದರೇ ಕೆಲ ತಿಂಗಳ ಹಿಂದೆ ಡೆಂಗ್ ಜ್ವರ ಬಂದಿದ್ದರಿಂದ ಆಸ್ಪತ್ರೆ ಸೇರಬೇಕಾಯಿತು. ಕ್ಯಾಂಟಿನ್ ನಡೆಸಲು ಸಾಧ್ಯವಾಗದೆ ಇದ್ದುದರಿಂದ ಸಲ್ಪ ಹಣಕಾಸಿನಲ್ಲಿ ವ್ಯತ್ಯಾಸವಾಗಿದೆ. ಸಾಲ ಪಡೆದವರಿಗೆ ಸರಿಯಾಗಿ ಬಡ್ಡಿ ನೀಡಿದರೂ ಕೂಡ ಆಗಾಗ್ಗೆ ಮನೆ ಬಾಗಿಲಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಲಾಗುತಿತ್ತು ಎಂದು ದೂರಿದರು. ಈ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ. ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿ, ಸ್ಪಂದಿಸದಿದ್ದರೇ ನಮಗೆ ತಿಳಿಸಬೇಕು ಎಂದು ಸಲಹೆ ನೀಡಿ ನಮ್ಮ ದೂರಿಗೆ ಸೂಚನೆ ಬರೆದು ಕಳುಹಿಸಲಾಗಿತ್ತು. ಅವರ ಸೂಚನೆಯಂತೆ ದೂರು ನೀಡಿ ಮೂರು ದಿವಸವಾದರೂ ಬಡ್ಡಿದಾರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿಲ್ಲ. ನಂತರ ಹಣ ನೀಡದವರು ಮೊಬೈಲಿಗೆ ಕರೆ ಹಾಗೂ ಮನೆಯತ್ತಿರ ಬಂದು ಹಿಂಸೆ ಕೊಡಲು ಮುಂದಾದಗ ಬೇಸರದಿಂದ ವಿಷ ಸೇವನೇ ಮಾಡಲು ಮುಂದಾಗಿರುವುದಾಗಿ ಇದೆ ವೇಳೆ ತಿಳಿಸಿದ್ದಾರೆ. ಈಗ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೊರಟ ನಡೆಸುತ್ತಿದ್ದಾರೆ.

     ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವನೆ ಮಾಡಿದ ಸಯ್ಯಿದ್ ಮುಬಾರಕ್ ಪತ್ರಕರ್ತರೊಂದಿದೆ ಮಾತನಾಡಿ, ಕ್ಯಾಂಟಿನ್ ಹಾಗೂ ಇತರೆ ಉದ್ದೇಶಕ್ಕೆ ಸಾಲವನ್ನು ಅಡ್ಲಿಮನೆ ನಿವಾಸಿ ಕೇಶವಮೂರ್ತಿ, ಆತನ ಮಗ ಮಧುಚಂದ್ರ, ಪೆನ್ಷನ್ ಮೊಹಲ್ಲಾ ನಿವಾಸಿ, ವೇಲು ಮತ್ತು ಆತನ ಮಗ ಮದನ್ ಹಾಗೂ ಹೊಳೆನರಸೀಪುರದ ನಿವಾಸಿ ಹೇಮರಾಜ್ ಇವರುಗಳಿಂದ ಪಡೆದಿದ್ದೇನೆ. ಸರಿಯಾದ ಸಮಯಕ್ಕೆ ಕಳೆದ ಎರಡು ವರ್ಷಗಳಿಂದಲೂ ಬಡ್ಡಿ ಕಟ್ಟುತ್ತಿದ್ದರೂ ಆಗಾಗ್ಗೆ ಬಂದು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರೂ. ಇವರ ಕಾಟ ತಾಳಲಾರದೆ ಎಸ್ಪಿ ಬಳಿ ದೂರು ನೀಡಿ ನನ್ನ ಅಳಲು ತೋಡಿಕೊಂಡಿದ್ದನು. ಸಿಟಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ದೂರು ನೀಡಿದರೂ ಇದುವರೆಗೂ ಸಾಲ ನೀಡಿದವರ ಮೇಲೆ ಯಾವ ಕ್ರಮವೂ ಜರುಗಿಸಿಲ್ಲ. ಪ್ರತಿನಿತ್ಯ ಮೀಟರ್ ಬಡ್ಡಿಗಾರರ ಹಿಂಸೆ ಸಹಿಸಲಾರದೆ, ಕ್ಯಾಂಟಿನ್ ನಡೆಸದೆ ಕದ್ದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬೇಸರದಿಂದ ವಿಷ ಸೇವನೆಗೆ ಮುಂದಾಗಿರುವುದಾಗಿ ಹೇಳಿಕೊಂಡರು. 

    ಸಯ್ಯದ್ ಮುಬಾರಕ್ ಪತ್ನಿ ಹೇಳುವಂತೆ ಕಳೆದ ಎರಡು ವರ್ಷಗಳ ಹಿಂದೆ ಒಂದುವರೆ ಲಕ್ಷ ರೂ.ಗಳನ್ನು ಕೆಲವರಿಂದ ಬಡ್ಡಿಗೆ ಸಾಲವನ್ನು ಕ್ಯಾಂಟಿನ್ ಮಾಡುವ ಉದ್ದೇಶದಲ್ಲಿ ಪಡೆದಿದ್ದರು. ಬಡ್ಡಿ ಮತ್ತು ಚಕ್ರ ಬಡ್ಡಿ ಸೇರಿ ಈಗ 7 ಲಕ್ಷ ರೂಗಳಾಗಿವೆ. ಮಧ್ಯೆ ಡೆಂಗ್ ಜ್ವರ ಬಂದಿದ್ದರಿಂದ ಹಣ ಕೊಡಲು ಕಷ್ಟವಾಯಿತು. ಸಾಲ ನೀಡಿದವರು ಕರೆ ಮಾಡಿ ಮತ್ತು ಮನೆಗೆ ಬಂದು ಹಿಂಸೆ ನೀಡಲಾಗುತ್ತಿತ್ತು. ಕೂಡಲೇ ಹಣ ನೀಡದಿದ್ದರೇ ನೀಡಲಾಗಿರುವ ಚೆಕನ್ನು ಕೋರ್ಟಿಗೆ ಹಾಕುವುದಾಗಿ ಬೆದರಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ನಮ್ಮ ನೋವು ಹೇಳಿಕೊಂಡಾಗ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಲು ಸಲಹೆ ನೀಡಿ, ನಿಮಗೆ ನ್ಯಾಯದೊರಕದಿದ್ದರೇ ಇಲ್ಲಿಗೆ ಮತ್ತೆ ಬರಲು ಹೇಳಿದ್ದರು. ಮೂರು ದಿನಗಳಾದರೂ ಪೊಲೀಸರು ಸ್ಪಂದಿಸಲಿಲ್ಲ.ಮೂರು ದಿನಗಳ ಹಿಂದೆ ಮತ್ತೆ ಹಿಂಸೆ ನೀಡಿದ್ದರಿಂದ ಮನನೊಂದು ರಾತ್ರಿ ಮನೆಯಿಂದ ಕೆಳಗೆ ಇಳಿದು ಕ್ಯಾಂಟಿನ್ ಬಳಿ ವಿಷ ಸೇವನೆ ಮಾಡಿರುವುದಾಗಿ ವಿವರ ತಿಳಿಸಿದರು.

    ನಗರದ ಸಿಟಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಿಂದ ವಿಚಾರ ತಿಳಿದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News