ಸಾಬಿಯನ್ನು ನೋಡಿದ ಕೂಡಲೇ ಚಚ್ಚಿಬಿಡಬೇಕು, ಒಬ್ಬೊಬ್ಬರಾಗಿ ಕೊಂದು ಬಿಡಬೇಕು ಅನ್ಸುತ್ತೆ !
ಬೆಂಗಳೂರು, ಆ. 9 : ಯಾರಾದರೂ ನಿಮ್ಮ ಗಡ್ಡದ ಬಗ್ಗೆ ಕೇಳಿದರೆ ನಿಮಗೆ ಯಾವ ಯೋಚನೆ ಬರುತ್ತದೆ ? ಅದಕ್ಕೆ ಉತ್ತರಿಸುವ ಮೊದಲು ಕಬೀರ್ ಅಹ್ಮದ್ ಎಂಬವರು ನಮ್ಮದೇ ರಾಜ್ಯದ ತುಮಕೂರಿನ ಬಳಿ ಎದುರಿಸಿದ ಪ್ರಶ್ನೆ ಹಾಗು ಸಂದರ್ಭವನ್ನು ಓದಿಕೊಳ್ಳಿ. ನಮ್ಮ ಸಮಾಜದಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬ ಅಪಾಯದ ಅರಿವು ನಿಮಗಾಗುತ್ತದೆ.
ಹಂಪಿಗೆ ಹೋಗಿದ್ದ ಕಬೀರ್ ಹಿಂದಿರುಗುವಾಗ ಮೂತ್ರ ವಿಸರ್ಜನೆಗೆಂದು ತುಮಕೂರು ರಸ್ತೆಯಲ್ಲಿರುವ ಸಿಟ್ರಿಯ ಸ್ಟಾರ್ ಹೋಟೆಲ್ ಗೆ ಹೋದರು. ಅಲ್ಲಿನ ಶೌಚಾಲಯದಲ್ಲಿ ಮೂತ್ರ ಮಾಡುತ್ತಿರುವಾಗ ಪಕ್ಕದಲ್ಲಿ ಮೂತ್ರ ಮಾಡುತ್ತಿದ್ದ ವ್ಯಕ್ತಿ ಕಬೀರ್ ರನ್ನು ದುರುಗುಟ್ಟಿ ನೋಡತೊಡಗಿದ. ಬಳಿಕ ಕಬೀರ್ ರ ಗಡ್ಡದ ಕುರಿತು ಪ್ರಶ್ನಿಸಿದ. " ವಿಶೇಷ ಏನೂ ಇಲ್ಲ... ಹೀಗೇ ಬಿಟ್ಟೆ ಗುರೂ.. " ಎಂದು ಕಬೀರ್ ನೀಡಿದ ಹಾರಿಕೆಯ ಉತ್ತರದಿಂದ ಆ ವ್ಯಕ್ತಿಗೆ ತೃಪ್ತಿಯಾಗಲಿಲ್ಲ. ಮತ್ತೆ ಅದನ್ನೇ ಕೆದಕಿದ. ಆಗ ಸುಮ್ಮನೆ ಕತೆ ಕಟ್ಟಿದ ಕಬೀರ್ " ಸನ್ಯಾಸಿ ಆಗುವ ಮನಸ್ಸಾಗಿದೆ... ಅದಕ್ಕೆ ಹೀಗೆ " ಎಂದು ಹೇಳಿದ. ಅದನ್ನು ಸ್ವಲ್ಪ ನಂಬಿದ ವ್ಯಕ್ತಿ " ನಿನ್ನ ಗಡ್ಡ ನೋಡಿ ನೀನು ಗ್ಯಾರಂಟಿ ಮುಸ್ಲಿಂ ಆಗಿರಬೇಕು ಎಂದು ನನ್ನ ರಕ್ತ ಕುದಿಯತೊಡಗಿತು. ಅವರನ್ನು ಸರಿಯಾಗಿ ಚಚ್ಚಬೇಕು. ಎಲ್ಲ ಹಾಳು ಮಾಡಿ ಹಾಕಿದ್ದಾರೆ. ಒಬ್ಬೊಬ್ಬರಾಗಿ ಕೊಂದು ಬಿಡಬೇಕು ಎಂದು ಅನ್ಸುತ್ತೆ " ಎಂದು ಅಬ್ಬರಿಸಿದ.
ಅಲ್ಲೇ ಪಕ್ಕದಲ್ಲಿದ್ದ ಇತರ ಇಬ್ಬರು ಅದು ಹೌದು ಎಂಬಂತೆ ತಲೆಯಾಡಿಸಿದರು. ಆಗ ಕಬೀರ್ ಗೆ ಅಪಾಯದ ಅರಿವಾಯಿತು. ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಲು ಹೊರಡುವಾಗ ಅವರಲ್ಲೊಬ್ಬ ಕಬೀರ್ ನನ್ನ ನಿಲ್ಲಿಸಿ ನಿನ್ನ ಹೆಸರೇನು ಎಂದು ಕೇಳಿಯೇ ಬಿಟ್ಟ ! ತಕ್ಷಣ ಜಾಗೃತನಾದ ಕಬೀರ್ ನಾನು ರಘು ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ.
ಕಬೀರ್ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ :