×
Ad

ಮಹಾತ್ಮಗಾಂಧಿ ಉದ್ಯಾನವನ ಅಭಿವೃದ್ಧಿಗೆ ಡಿಸಿ ಸತ್ಯವತಿ ಸೂಚನೆ

Update: 2016-08-16 22:18 IST

ಚಿಕ್ಕಮಗಳೂರು.ಆ.16: ನಗರದ ಹೊರವಲಯದ ರತ್ನಗಿರಿ ಬೋರೆಯಲ್ಲಿರುವ ಮಹಾತ್ಮ ಗಾಂಧಿ ಉದ್ಯಾನವನವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಮಂಗಳವಾರ ತಮ್ಮ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ರತ್ನಗಿರಿ ಗಾರ್ಡನ್ ಟ್ರಸ್ಟ್‌ನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಹಾತ್ಮ ಗಾಂಧಿ ಉದ್ಯಾನವನವು ಒಂದು ಸುಂದರ ಪ್ರಕೃತಿ ತಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅದರ ಸುತ್ತಮುತ್ತಲಿನ ಪರ್ವತ ಶ್ರೇಣಿಗಳನ್ನು ಜನರು ಕಣ್ದುಂಬಿಕೊಳ್ಳಲು ಅವಕಾಶ ಕಲ್ಪಿಸುತ್ತಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹಾಗೂ ಜನ ಸಾಮಾನ್ಯರಿಗೆ ಅಗತ್ಯ ಮೂಲ ಸೌಕ ರ್ಯಗಳನ್ನು ಒದಗಿಸಬೇಕೆಂದು ಅವರು ತಿಳಿಸಿದರು. ಉದ್ಯಾನ ವನದಲ್ಲಿ ಮಕ್ಕಳ ಆಟೋಪಕರಣಗಳ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಸರಿಪಡಿಸಬೇಕು. ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಉದ್ಯಾನವನವನ್ನು ಪುನಶ್ಚೇತನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

ಉದ್ಯಾನವನದ ಕೆಲವು ನಿರ್ವಹಣೆಗಳನ್ನು ಬ್ಯಾಂಕಿನವರು ವಹಿಸಿಕೊಳ್ಳುವುದರೊಂದಿಗೆ ಅವುಗಳ ಮೇಲುಸು್ತವಾರಿಯನ್ನು ಅವರೇ ನಿರ್ವಹಿಸಲು ಮುಂದಾಗಬೇಕು. ಉದ್ಯಾನ ವನದಲ್ಲಿರುವ ಉಪಾಹಾರ ಕೊಠಡಿಯನ್ನು ಮೇಲ್ದರ್ಜೆಗೇರಿಸಿ ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಿದರು.

 ರಾಮನಹಳ್ಳಿಯ ಮುಖ್ಯ ರಸ್ತೆಯಿಂದ ಉದ್ಯಾನವನಕ್ಕೆ ಹೋಗುವ ರಸ್ತೆಯ ಕಾಮಗಾರಿಯನ್ನು ನಗರಸಭೆಯ ವತಿಯಿಂದ ಕೈಗೊಳ್ಳಬೇಕು ಹಾಗೂ ಉದ್ಯಾನವನಕ್ಕೆ ವಿದ್ಯುತ್ ವ್ಯವಸ್ಥೆ   ಯನ್ನು ಮೆಸ್ಕಾಂ ಅಧಿಕಾರಿ ಶೀಘ್ರ ಕಲ್ಪಿಸಬೇಕೆಂದು ಡಿಸಿ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ದೇವರಾಜ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರೇಗೌಡ, ಟ್ರಸ್ಟ್ ಕಾರ್ಯದರ್ಶಿ ಕೆ.ಮೋಹನ್, ಸದಸ್ಯ ಡಿ.ಎಚ್. ನಟರಾಜ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಜಾಗಿಂಗ್ ಕಮಿಟಿಯ ಸದಸ್ಯೆ ಯಮು ನಾ ಚನ್ನಬಸಪ್ಪಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಕೆ.ಟಿ. ರಾಧಾಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

   ಪುಟಾಣಿ ರೈಲಿನ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಿಸಬೇಕು ಹಾಗೂ ರೈಲು ಟ್ರ್ಯಾಕಿನ ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು ಎಂದ ಅವರು, ವಯಸ್ಸಾದವರಿಗೆ ರೈಲು ಟಿಕೆಟ್‌ನ ದರವನ್ನು ರೂ.15 ಹಾಗೂ ಮಕ್ಕಳಿಗೆ ರೂ.5 ನಿಗದಿಪಡಿಸಬೇಕು. ಉದ್ಯಾನವನದ ಪ್ರವೇಶ ದರವನ್ನು ವಯಸ್ಕರಿಗೆ ರೂ. 10, ಮಕ್ಕಳಿಗೆ ರೂ.5 ನಿಗದಿಗೊಳಿಸಬೇಕು. ಇಲ್ಲಿ ಸುಲಭ ಶೌಚಾಲಯದ ನಿರ್ವಹಣೆಯನ್ನು ಉತ್ತಮವಾಗಿ ನಿರ್ವಹಿಸಲು ಏಜೆನ್ಸಿಯವರನ್ನು ನೇಮಕಾತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸತ್ಯವತಿ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News