ಓ ಮೆಣಸೇ...!

Update: 2016-08-21 18:34 GMT

  ಗೋರಕ್ಷಕರ ಬಗ್ಗೆ ಮೋದಿ ಹೇಳಿಕೆ ಸಂಕಟ ತಂದಿದೆ

  -ಪ್ರವೀಣ್ ತೊಗಾಡಿಯಾ,

ವಿಹಿಂಪ ಅಧ್ಯಕ್ಷ ಗೋವುಗಳಿಗೆ ಖುಷಿ ತಂದಿದೆಯಂತೆ.
---------------------
  ದಲಿತರ ಮೇಲಿನ ಹಲ್ಲೆ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿದೆ
-ಪ್ರಣವ್ ಮುಖರ್ಜಿ, ರಾಷ್ಟ್ರಪತಿ
  ಸಂವಿಧಾನ ತಿದ್ದುಪಡಿ ಮಾಡಿದರಾಯಿತು ಎನ್ನುತ್ತಿದ್ದಾರೆ ಆರೆಸ್ಸೆಸ್ ನಾಯಕರು.
---------------------
  ದೇಶದ ನಾಗರಿಕರು ಅತ್ಯಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು.
-ಅಮಿತಾಭ್ ಬಚ್ಚನ್, ನಟ
  ಅತ್ಯಾಚಾರ ಮುಕ್ತ ಸಿನೆಮಾ ಮಾಡುವುದಕ್ಕೆ ತಾವೇಕೆ ಪ್ರತಿಜ್ಞೆ ಮಾಡಬಾರದು?
---------------------
  ಕಾಶ್ಮೀರಕ್ಕಾಗಿ ಸಾವನ್ನಪ್ಪಿದವರ ಬಲಿದಾನ ವ್ಯರ್ಥವಾಗುವುದಿಲ್ಲ
-ಅಬ್ದುಲ್ ಬಾಸಿತ್, ಪಾಕ್ ರಾಯಭಾರಿ
  ಪಾಕಿಸ್ತಾನಕ್ಕಾಗಿ ಮಾಡಿದ ಬಲಿದಾನ ವ್ಯರ್ಥವಾದ ಬಗ್ಗೆ ತುಸು ಯೋಚಿಸಿ.
---------------------
  ಜೀವಿಗಳಲ್ಲಿ ಗೋವು ಶ್ರೇಷ್ಠ.
-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಗೋವು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದಿಲ್ಲ.
---------------------
  ದೇಶವಿರೋ ಚಟುವಟಿಕೆ ನಡೆಸುತ್ತಿರುವ ಸಂಘಟನೆಗಳನ್ನು ಸಮಾಜ ಸಹಿಸುವುದಿಲ್ಲ.
-ಸುನೀಲ್ ಕುಮಾರ್, ಶಾಸಕ
  ಹೌದು. ಅದರಿಂದಲೇ ನೀವು ಸದ್ಯ ಸಮಾಜದಿಂದ ದೂರವಾಗುತ್ತಿರುವುದು.
---------------------
  ದೇಶಕ್ಕಾಗಿ ಒಬ್ಬ ಮಗನನ್ನು ಸಂತ ಅಥವಾ ಸೈನಿಕನನ್ನಾಗಿ ಮಾಡಿ
-ವಿಶ್ವೇಶ ತೀರ್ಥಸ್ವಾಮೀಜಿ, ಪೇಜಾವರ ಮಠ
  ತಮ್ಮ ಮಗನನ್ನು ಏನು ಮಾಡಿದ್ದೀರಿ ಎನ್ನುವುದನ್ನು ದೇಶಕ್ಕೆ ಮೊದಲು ತಿಳಿಸಿ.

---------------------
 ಕಾಶ್ಮೀರವನ್ನು ಮತ್ತೊಂದು ಸಿರಿಯಾ ಆಗಲು ಬಿಡುವುದಿಲ್ಲ.
-ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ
  ಸದ್ಯಕ್ಕೆ ಇನ್ನೊಂದು ಕಾಶ್ಮೀರ ಆಗದ ಹಾಗೆ ನೋಡಿಕೊಳ್ಳಿ.

---------------------
 ವಾಜಪೇಯಿ ಹಾಗೂ ಮೋದಿ ನೇತೃತ್ವದ ಆಡಳಿತಾವ ಶ್ರೇಷ್ಠ ಯುಗವಾಗಿದೆ
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
  ತ್ರೇತಾಯುಗದ ಶ್ರೀರಾಮ ನಿಮ್ಮ ಮಾತಿಗೆ ಅಚ್ಚರಿಗೊಂಡಿರಬೇಕು.
---------------------
 ನಮ್ಮ ಮಕ್ಕಳು ಹಾಗೂ ಯುವ ಜನಾಂಗಕ್ಕೆ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದವರ ಬಗ್ಗೆ ತಿಳಿಯಪಡಿಸಬೇಕಾಗಿದೆ
-ಶೋಭಾ ಕರಂದ್ಲಾಜೆ, ಸಂಸದೆ
  ಯಡಿಯೂರಪ್ಪರ ಬಲಿದಾನಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿದರಾಯಿತು.

---------------------
  ಬಿಜೆಪಿ ನನಗೆ ತಾಯಿ ಇದ್ದಂತೆ
-ಈಶ್ವರಪ್ಪ, ಮೇಲ್ಮನೆ ಪ್ರ.ಪ.ನಾಯಕ
  ಮೊಲೆ ಹಾಲು ಕುಡಿಯುವುದು ಇನ್ನೂ ಬಿಟ್ಟಿಲ್ಲ ಎನ್ನುವುದು ವರಿಷ್ಠರ ಆರೋಪ.

---------------------
   ಪಾಕಿಸ್ತಾನಕ್ಕೆ ಭೇಟಿ ನೀಡುವುದೆಂದರೆ ನರಕಕ್ಕೆ ಹೋದಂತೆ
-ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
  ನರೇಂದ್ರ ಮೋದಿಯವರಿಗೆ ನರಕದ ಬಿರಿಯಾನಿ ಎಂದರೆ ತುಂಬಾ ಇಷ್ಟವಂತೆ.
---------------------
  ಭಾರತೀಯರು ಅಹಂ ಬಿಡಬೇಕು
-ನಾರಾಯಣ ಮೂರ್ತಿ, ಇನೊಓಂೀಸಿಸ್ ಸಹಸಂಸ್ಥಾಪಕ
ಅಹಂ ಬ್ರಹ್ಮಾಸ್ಮಿ ಎನ್ನುವ ಶಬ್ದಕ್ಕೆ ಭಾರತ ಪೇಟೆಂಟ್ ತೆಗೆದುಕೊಂಡಿದೆ.

---------------------
  ಮುಂದಿನ ದಿನಗಳಲ್ಲಿ ಯಮುನೆ ಮಾಲಿನ್ಯದಿಂದ ಮುಕ್ತಳಾಗಿ ಸುಂದರಿಯಾಗಲಿದ್ದಾಳೆ
-ನಿತಿನ್ ಗಡ್ಕರಿ, ಕೇಂದ್ರ ಸಚಿವ
  ಯಾವ ಕಂಪೆನಿಗೆ ಅವಳನ್ನು ಮದುವೆ ಮಾಡಿಕೊಡಬೇಕು ಎಂದಿದ್ದೀರಿ?
---------------------
  ಜನರ ಆಶೀರ್ವಾದ ಇದ್ದರೆ ಜೆಡಿಎಸ್ ಮತ್ತೆ ಅಕಾರಕ್ಕೆ ಬರುತ್ತೆ
-ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
  ಜನರು ಆಶೀರ್ವದಿಸದಿದ್ದರೆ, ಬಿಜೆಪಿಯ ಆಶೀರ್ವಾದದಿಂದಲಾದರೂ ಅಕಾರಕ್ಕೆ ಬರುವ ಯೋಜನೆ ಹಾಕಿಕೊಂಡಂತಿದೆ.
---------------------
  ನನ್ನನ್ನು ಸಂಪುಟದಿಂದ ಕೈ ಬಿಟಿದ್ದಕ್ಕೆ ಉಂಟಾಗಿರುವ ನೋವು ಇನ್ನೂ ಶಮನವಾಗಿಲ್ಲ
-ಖಮರುಲ್ ಇಸ್ಲಾಂ, ಮಾಜಿ ಸಚಿ
  ನೋವಿನ ಜಾಗಕ್ಕೆ ಪತಂಜಲಿ ಎಣ್ಣೆ ಹಚ್ಚಿ.

---------------------
  ಕಾಂಗ್ರೆಸ್ ಅಂಬಾನಿ ಜೇಬಿನಲ್ಲಿತ್ತು, ಮೋದಿ ಸರಕಾರ ಅದಾನಿ ಜೇಬಿನಲ್ಲಿದೆ
-ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
  ನಿಮಗೆ ಅವಿತುಕೊಳ್ಳಲು ಜೇಬುಗಳೇ ಇಲ್ಲ ಎಂಬ ಖೇದವೇ?
---------------------
  ಸಂಘಟನಾ ಶಕ್ತಿ ನಮ್ಮಲ್ಲಿದ್ದರೆ ಜನ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ
-ಆಸ್ಕರ್ ೆರ್ನಾಂಡಿಸ್, ರಾಜ್ಯ ಸಭಾ ಸದಸ್ಯ
  ಸದ್ಯಕ್ಕೆ ನೀವೇ ಜನರನ್ನು ಹುಡುಕಿಕೊಂಡು ಹೋಗುವ ಗತಿ ಬಂದಿದೆ.

---------------------
  ದೇಶ ವಿಭಜನೆಗೆ ಗಾಂೀಜಿ ಒಪ್ಪಿರಲಿಲ್ಲ
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
  ಅದಕ್ಕೆ ಅವರನ್ನು ಕೊಲ್ಲಿಸಲಾಯಿತೇ?
---------------------
  ನಾನು ಅಭಿವೃದ್ಧಿ ವಿರೋಯಲ್ಲ
-ದೇವೇಗೌಡ, ಮಾಜಿ ಪ್ರಧಾನಿ
  ಬರೇ ಸಿದ್ಧರಾಮಯ್ಯ ಅವರ ವಿರೋ ಮಾತ್ರ ಎಂದರ್ಥವೇೆ?
---------------------
  ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಕ್ಕೂ ಸಿದ್ಧ, ತತ್ವಗಳಲ್ಲಿ ಯಾವುದೇ ರಾಜಿ ಇಲ್ಲ
-ನರೇಂದ್ರ ಮೋದಿ, ಪ್ರಧಾನಿ
  ಇಷ್ಟು ಬೇಗ ಪ್ರಧಾನಿ ಹುದ್ದೆಯಿಂದ ಸುಸ್ತಾಗಿ ಹೋಯಿತೇ?
---------------------
  ಬಿಜೆಪಿ ಈಗ ಉತ್ತುಂಗದಲ್ಲಿದೆ
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಬೀಳುವ ಅಂತರ ಹೆಚ್ಚಾಗಿದೆ.

---------------------
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...