×
Ad

ನಕಲಿ ದಾಖಲೆ ಸೃಷ್ಟಿಸಿ 60 ಲಕ್ಷ ರೂ. ಗೋಲ್‌ಮಾಲ್

Update: 2016-09-03 21:44 IST

ಶಿವಮೊಗ್ಗ, ಸೆ.3: ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ 60 ಲಕ್ಷ ರೂ. ಡ್ರಾ ಮಾಡಿ ಇಲಾಖೆಗೆ ವಂಚಿಸಿದ ಆರೋ ಪಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕ್ಯಾಷಿಯರ್ ಸೇರಿದಂತೆ ಇಬ್ಬರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಉಲ್ಲಾಸ್ (27) ಬಂಧಿತ ಕ್ಯಾಷಿಯರ್ ಎಂದು ಗುರುತಿಸ ಲಾಗಿದೆ. ಆರೋಪಿಯ ಕುಟುಂಬ ಒಡೆತನಕ್ಕೆ ಸೇರಿದ ಅಂಗಡಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿ.ಪಿ.ಶ್ರೀಧರ್‌ಮೂರ್ತಿ ಬಂಧಿತ ಮತ್ತೋರ್ವ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದ್ದು, ಇನ್ನಷ್ಟೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. ಬಂಧಿತ ಆರೋಪಿಗಳಿಬ್ಬರನ್ನು ಪೊಲೀಸರು ತೀವ್ರ ವಿಚಾರಣೆ ಗೊಳಪಡಿಸಿದ್ದಾರೆ. ಏನಿದು ವಂಚನೆ?: ಜಿಲ್ಲಾ ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕೈಗೊಳ್ಳುವ ಕುಡಿ ಯುವ ನೀರಿನ ಕಾಮಗಾರಿಗೆ ಸಂಬಂಧಿಸಿದ ಬಿಲ್‌ಗಳನ್ನು ಬೆಂಗಳೂರಿನಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಬಿಡಬ್ಲ್ಯೂಎಸ್‌ಎಸ್‌ಬಿ ಬ್ರ್ಯಾಂಚ್‌ನಿಂದ ಆರ್‌ಟಿಜಿಎಸ್ ಮುಖಾಂತರ

ಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಪಾವತಿ ಮಾಡಲಾಗುತ್ತದೆ. ಸದರಿ ಖಾತೆಯು ಇಲಾಖೆಯ ಆಯುಕ್ತರ ಹೆಸರಿನಲ್ಲಿ ತೆರೆಯಲಾಗಿದೆ. ಕಚೇರಿಯಿಂದ ಸಲ್ಲಿ ಸಿದ ಪಾವತಿ ಆದೇಶದ ನಂತರವೇ, ಬ್ಯಾಂಕ್‌ನಿಂದ ಗುತ್ತಿಗೆದಾರರ ಬ್ಯಾಂಕ್ ಖಾತೆ ಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗುತ್ತದೆ. ಆರ್‌ಟಿಜಿಎಸ್ ಮೂಲಕ ಪಾವತಿಸಿದ ವಿವರಗಳನ್ನು ಬ್ಯಾಂಕ್‌ನವರು ಪ್ರತೀ ತಿಂಗಳು ಕಚೇರಿಯ ಇ-ಮೇಲ್‌ಗೆ ಕಳುಹಿಸಿ ಕೊಡುತ್ತಾರೆ. ಅದರಂತೆ ಬೆಂಗಳೂರು ಸಿಂಡಿಕೇಟ್ ಬ್ಯಾಂಕ್ ಬಿಡಬ್ಲ್ಯೂಎಸ್‌ಎಸ್‌ಬಿ ಬ್ರ್ಯಾಂಚ್‌ನವರು 2016 ರ ಆಗಸ್ಟ್ ಮಾಹೆಯಲ್ಲಿ ಪಾವತಿಸಿದ ವಿವರಗಳನ್ನು ಇ-ಮೇಲ್ ಮೂಲಕ ಶಿವಮೊಗ್ಗ ಕಚೇರಿಗೆ ಸಲ್ಲಿಸಿದ್ದರು. ಸದರಿ ಮಾಹಿತಿಯಲ್ಲಿ ಕಚೇರಿಯಿಂದ ಬ್ಯಾಂಕ್‌ಗೆ ಸಲ್ಲಿಸಿದ ಪೇಮೆಂಟ್ ಅಡ್ವೈಸ್ ಮೊಬಲಗು ಹಾಗೂ ಬ್ಯಾಂಕ್‌ನವರು ಸಲ್ಲಿಸಿದ ಬ್ಯಾಂಕ್ ಖಾತೆಯಲ್ಲಿನ ಮೊಬಲಿಗೂ ವ್ಯತ್ಯಾಸವಿರುವುದು ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್‌ರವರ ಗಮನಕ್ಕೆ ಬಂದಿದೆ. ಈ ವೇಳೆ 25-7-2016 ರಂದು ಅನಾಮಧೇಯ ಬಿ.ಪಿ. ಶ್ರೀಧರ್‌ಮೂರ್ತಿ ಎಂಬವರ ಆಕ್ಸಿಸ್ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಹಣ ಪಾವತಿಯಾಗಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕಚೇರಿಯ ವಿಳಾಸ, ಉಳಿತಾಯ ಖಾತೆ, ಅಧಿಕಾರಿಗಳ ನಕಲು ಸಹಿ, ಕಚೇರಿಯ ನಕಲಿ ಪೇಮೆಂಟ್ ಅಡ್ವೈಸ್ ಆದೇಶ ಪತ್ರಗಳನ್ನು ಸೃಷ್ಟಿಸಿ ಬಿ.ಪಿ.ಶ್ರೀಧರ್‌ಮೂರ್ತಿ ಎಂಬವರ ಖಾತೆ ಸಂಖ್ಯೆ ನಮೂದಿಸಿ ಬೆಂಗಳೂರಿನ ಬ್ಯಾಂಕ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದರ ಆಧಾರದ ಮೇಲೆ ಬಿ.ಪಿ.ಶ್ರೀಧರ್‌ಮೂರ್ತಿಯ ಖಾತೆಗೆ 20,35,990 ರೂ. ಪಾವತಿಯಾಗಿದೆ. ಅಪರಿಚಿತ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯ

ಪಾಲಕ ಅಭಿಯಂತರ ಎಸ್.ಎಂ.ಹರೀಶ್‌ರವರು ಬ್ಯಾಂಕ್‌ನಿಂದ 2016-17 ನೆ ಸಾಲಿನ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಪರಿಶೀಲನೆಯ ವೇಳೆ 20-6-2016 ರಂದು 22,64,098 ರೂ., 28-6-2016 ರಂದು 17,59,912 ರೂ. ಡ್ರಾ ಮಾಡಿ ರುವುದು ಗೊತ್ತಾಗಿದೆ. ಒಟ್ಟಾರೆ 60,60,000 ರೂ. ಮೊತ್ತವು ಬಿ.ಪಿ.ಶ್ರೀಧರ್‌ಮೂರ್ತಿಯವರ ಖಾತೆಗೆ ವರ್ಗಾವಣೆಯಾಗಿರುವ

ಅಧಿಕೃತ ಮಾಹಿತಿ ಗೊತ್ತಾಗಿದೆ. ದೂರು ದಾಖಲು: ಇಲಾಖೆಯ ಹಣವು ಇಲಾಖೆಗೆ ಸಂಬಂಧ ಪಡದ ಅನಾಮಧೇಯ ವ್ಯಕ್ತಿ ಬಿ.ಪಿ.ಶ್ರೀಧರ್‌ಮೂರ್ತಿಯವರ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿರುವುದು ಹಾಗೂ ಕಚೇರಿಯ ನಕಲಿ ದಾಖಲೆ ಸೃಷ್ಟಿ ಮಾಡಿರುವುದು ಬೆಳಕಿಗೆ ಬರುತ್ತಿದ್ದಂತೆ ಕಾರ್ಯಕಪಾಲಕ ಎಂಜಿನಿಯರ್ ಎಸ್.ಎಂ.ಹರೀಶ್‌ರವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ ವೇಳೆ ಕಚೇರಿಯ ಕ್ಯಾಷಿಯರ್ ಉಲ್ಲಾಸ್ ಎಂಬಾತನೇ ವಂಚನೆಯ ಸೂತ್ರದಾರ ಎಂಬುವುದು ತಿಳಿದು ಬಂದಿದೆ. ಈತನ ಸಹಚರ ಬಿ.ಪಿ.ಶ್ರೀಧರ್‌ಮೂರ್ತಿಯ ಖಾತೆಗೆ, ಕಚೇರಿಯ ನಕಲಿ ದಾಖಲೆ ತಯಾರಿಸಿಬ್ಯಾಂಕ್‌ನಿಂದ ಇಲಾಖೆಯ ಹಣ ವರ್ಗಾವಣೆ ಮಾಡಿ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News