×
Ad

ಧನ ದಾಹದಿಂದ ಮಾನ­ವೀಯ ವೌಲ್ಯ ಕುಸಿತ: ದೇವರಾಜ್

Update: 2016-09-10 22:24 IST

ಚಿಕ್ಕ­ಮ­ಗ­ಳೂರು, ಸೆ.10: ಮನುಷ್ಯ ಹಣದ ಹಿಂದೆ ಓಡ­ಲಾ­ರಂ­ಭಿ­ಸಿದ್ದು, ಮಾನ­ವೀಯ ವೌಲ್ಯ­ಗಳು ಕುಸಿದು ವೃದ್ಧಾ­ಶ್ರಮ, ಅನಾ­ಥಾ­ಶ್ರ­ಮ­ಗಳ ಸಂಖ್ಯೆ ಅಧಿ­ಕ­ವಾ­ಗಿದೆ ಎಂದು ನಗ­ರ­ಸಭಾಧ್ಯಕ್ಷ ದೇವ­­ರಾಜ್ ಶೆಟ್ಟಿ ವಿಷಾ­ಧಿ­ಸಿ­ದ್ದಾರೆ.

ಇಲ್ಲಿನ ರಾಮೇ­ಶ್ವರ ನಗರ ಬಡಾ­ವ­ಣೆ­ಯಲ್ಲಿ ರಾಮೇ­ಶ್ವರ ನಗರ ಹಿತ­ರ­ಕ್ಷಣಾ ಸಮಿತಿ ಹಾಗೂ ಸಾಂಸ್ಕೃ­ತಿಕ ಸಂಘದ ಆಶ್ರ­ಯ­ದಲ್ಲಿ ಪ್ರತಿ­ಷ್ಠಾ­ಪಿ­ಸಿ­ರುವ 13ನೆ ವರ್ಷದ ಗಣೇ­ಶೋ­ತ್ಸ­ವ­ದಲ್ಲಿ ಭಾಗ­ವ­ಹಿಸಿ ಅವರು ಮಾತನಾಡಿದರು.

ಉತ್ತಮ ವಿದ್ಯಾ­ಭ್ಯಾಸದ ಜೊತೆಗೆ ಒಳ್ಳೆಯ ಸಂಸ್ಕಾ­ರ­ವನ್ನ್ನು ಹೊಂದು­ವುದು ಅಗತ್ಯ. ಹೆಚ್ಚಿನ ಶಿಕ್ಷಣ ಪಡೆ­ದ­ವರು ಉದ್ಯೋಗ ಅರಸಿ ಬೇರೆ ಊರು­ಗ­ಳಿಗೆ ಹೋಗು­ವುದು ಅನಿ­ವಾರ್ಯ. ಅಂದ ಮಾತ್ರಕ್ಕೆ ತಮ್ಮನ್ನು ಸಾಕಿ­ದ­ವ­ರನ್ನು, ಸಮಾ­ಜ­ವನ್ನು ಮರೆ­ಯು­ವುದು ಸರಿ­ಯಲ್ಲ. ಹಣದ ಹಿಂದೆ ಬಿದ್ದಿ­ರು­ವು­ದ­ರಿಂದ ನೆಮ್ಮದಿ ನಾಶ­ವಾ­ಗಿದೆ ಎಂದು ತಿಳಿ­ಸಿ­ದರು.

ಬ್ರಿಟಿ­ಷರ ವಿರುದ್ಧ ಸಂಘ­ಟಿತ ಹೋರಾಟ ನಡೆ­ಸುವ ಸಾಧ­ನ­ವಾಗಿ ಗಣೇಶ ಉತ್ಸ­ವ­ವನ್ನು ಆರಂಭಿ­ಸಿದೆ. ನಿರ್ದಿಷ್ಟ ಉದ್ದೇಶ ಸಾಧಿಸು­ವಲ್ಲಿ ಇದು ಯಶ­ಸ್ವಿ­ಯಾ­ಯಿ­ತ­ಲ್ಲದೆ ಎಲ್ಲ­ರನ್ನು ಬೆಸೆ­ಯುವ ಸಾಧನವಾಯಿತು. ಸಾಮ­ರ­ಸ್ಯದ ಬದು­ಕಿನ ಮೂಲಕ ಸಂಬಂ­ಧ­ಗಳು ಗಟ್ಟಿ­ಯಾ­ಗ­ಬೇಕು, ಪ್ರೀತಿ ವಿಶ್ವಾ­ಸ­ದಿಂದ ಜೀವನ ನಡೆ­ಸ­ಬೇಕು. ರಾಮೇ­ಶ್ವರ ನಗರ ಬಡಾ­ವ­ಣೆಗೆ ತಮ್ಮ ಅವ­ಧಿ­ಯಲ್ಲಿ ಸಾಕಷ್ಟು ಕೆಲ­ಸ­ಗಳು ನಡೆ­ದಿದ್ದು, ಮುಂದಿನ ದಿನ­ಗ­ಳ­ಲ್ಲಿಯೂ ಇಲ್ಲಿನ ಜನರ ಜೊತೆಗೆ ಇರು­ವು­ದಾಗಿ ಹೇಳಿ­ದರು.

ಇದೇ ಸಂದರ್ಭದಲ್ಲಿ ಪ್ರತಿ­ಭಾವಂತ 7 ವಿದ್ಯಾ­ರ್ಥಿ­ಗ­ಳನ್ನು ಗೌರ­ವಿ­ಸ­ಲಾ­ಯಿತು. ಆಟೋಟ ಸ್ಪರ್ಧೆ­ಗ­ಳ ವಿಜೇ­ತ­ರಿಗೆ ಬಹು­ಮಾನ ವಿತ­ರಿ­ಸ­ಲಾ­ಯಿತು. ಇಂದು ಮಧ್ಯಾಹ್ನ ನಡೆದ ರಂಗೋಲಿ ಸ್ಪರ್ಧೆ­ಯಲ್ಲಿ ಸಾಕಷ್ಟು ಸಂಖ್ಯೆ­ಯಲ್ಲಿ ಮಹಿ­ಳೆ­ಯರು ಭಾಗ­ವ­ಹಿಸಿ ಬಣ್ಣ­ಬ­ಣ್ಣದ ಚಿತ್ತಾರ ಬಿಡಿಸಿ ಗಮನ ಸೆಳೆ­ದರು.

ಸಂಘದ ಕಾರ್ಯ­ದರ್ಶಿ ಆನಂ­ದ­ರಾಜ್ ಅರಸ್ ಸ್ವಾಗ­ತಿಸಿ, ಸಹ ಕಾರ್ಯ­ದರ್ಶಿ ಸಂತೋಷ್ ಜೈನ್ ವಂದಿ­ಸಿ­ದರು. ಖಜಾಂಚಿ ದಿನೇಶ ಪಟ­ವ­ರ್ಧನ್, ಸ್ಥಾಪಕಾಧ್ಯಕ್ಷ ಕರು­ಣಾ­ಕರ ಹೆಗ್ಡೆ ಮಾತ­ನಾ­ಡಿ­ದರು. ಅಧ್ಯಕ್ಷ ಗಿರೀಶ್ ಭಟ್ ಅಧ್ಯ­ಕ್ಷತೆ ವಹಿ­ಸಿ­ದ್ದರು. ಯು.ಟಿ.ನಾಗ­ರಾಜ್, ಮಹಾ­ದೇವಿ ನಿಲ­ಗುಂದ ಉಪ­ಸ್ಥಿ­ತ­ರಿ­ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News