ಮುಂಡಗೋಡ: ಗಣೇಶೋತ್ಸವ ಮೆರವಣಿಗೆ ವೇಳೆ ಕುಸಿದುಬಿದ್ದು ಯುವಕ ಮೃತ್ಯು

Update: 2016-09-15 14:30 GMT

ಮುಂಡಗೋಡ, ಸೆ.15: ಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಯುವಕ ದಿಢೀರನೆ ಕುಸಿದುಬಿದ್ದು ಮೃತಪಟ್ಟ ಘಟನೆ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮೃತಪಟ್ಟ ಯುವಕನನ್ನು ಮೂಲತಃ ಮುಂಡಗೋಡದ, ಹಳೆಹುಬ್ಬಳ್ಳಿಯ ಸಿದ್ದಾರ್ಥ ಕಾಲೋನಿ ಮೇದಾರ ಓಣಿಯ ನಿವಾಸಿ ಕಿರಣ ಛಲವಾದಿ(20) ಎಂದು ಗುರುತಿಸಲಾಗಿದೆ.

ಈತ ಹುಬ್ಬಳ್ಳಿಯಿಂದ ಗಣಪತಿ ಹಬ್ಬವನ್ನು ಆಚರಿಸಲು ಮುಂಡಗೋಡ ಸಂಬಂಧಿಕರ ಮನೆಗೆ ಆಗಮಿಸಿದ್ದ ಎಂದು ಹೇಳಲಾಗಿದೆ. ಅಂಬೇಡ್ಕರ್ ಓಣಿಯ ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿಯುತ್ತಿದ್ದ ವೇಳೆ ದಿಢೀರನೆ ಕುಸಿದು ಬಿದ್ದ ಎನ್ನಲಾಗಿದ್ದು, ತಕ್ಷಣ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದನೆಂದು ಹೇಳಲಾಗಿದೆ.

ಈ ಕುರಿತು ಮುಂಡಗೋಡ ಪೊಲೀಸ ಠಾಣೆ ಎಸ್ಸೈ ಲಕ್ಕಪ್ಪನಾಯಕ ದೂರು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News