ಓ ಮೆಣಸೇ...

Update: 2016-09-18 18:45 GMT

*ದಿನವೂ ಸುದ್ದಿಗೋಷ್ಠಿ ಮಾಡಿ ಬ್ರೇಕಿಂಗ್ ಸುದ್ದಿ ಕೊಡುತ್ತೇನೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
 ನಿರುದ್ಯೋಗ ತೀವ್ರವಾಗಿ ಕಾಡುತ್ತಿದ್ದರೆ, ಯಾವುದಾದರೂ ಟಿವಿ ಚಾನೆಲ್‌ಗೆ ಆ್ಯಂಕರ್ ಆಗಿ ಸೇರಬಹುದಲ್ಲವೇ?
---------------------
  ಹಿಂದೂ ಸಮಾಜದ ಆಚರಣೆಗಳು ಗೊಂದಲಕಾರಿಯಾಗಿವೆ
-ಡಾ.ಜಿ. ಪರಮೇಶ್ವರ್, ಗೃಹ ಸಚಿವ
  ಗೃಹ ಇಲಾಖೆಯ ವರ್ತನೆಗಳು ಕೂಡ.

---------------------
  ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು
-ಕೆ.ಎಸ್. ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ
  ಶೋಭಾ ಕರಂದ್ಲಾಜೆಯನ್ನು ಸೆಳೆಯುವ ಯತ್ನವೇ?
---------------------
  ಕಮ್ಯುನಿಷ್ಟರು ಕೇರಳದಲ್ಲಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ
-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ  
ಉಡುಪಿಯಲ್ಲಿ ಪ್ರವೀಣ್ ಪೂಜಾರಿಯ ಹತ್ಯೆಯ ಕುರಿತಂತೆ ಯಾರು, ಯಾರಿಗೆ ಮನವಿ ಕೊಡಬೇಕು ಎನ್ನುವುದನ್ನೂ ತಾವೇ ಹೇಳಿ ಬಿಡಿ.

---------------------
  ಜೈಲಿಗೆ ಹೋದರೂ ಸರಿ, ತಮಿಳುನಾಡಿಗೆ ನೀರು ಬಿಡಬೇಡಿ
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ತಾವು ಜೈಲಿಗೆ ಯಾವಾಗ ಹೋಗುತ್ತೀರಿ ಎನ್ನುವುದನ್ನು ಮೊದಲು ತಿಳಿಸಿ.

---------------------
   ಯಡಿಯೂರಪ್ಪರನ್ನು ಹದ್ದು ಬಸ್ತಿನಲ್ಲಿಡಲು ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿದ್ದಾರೆ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
 ಸಿದ್ದರಾಮಯ್ಯ ಅವರನ್ನು ಹದ್ದು ಬಸ್ತಿನಲ್ಲಿಡಲು ಪೂಜಾರಿಯವರು ಕೋಟಿ ಚೆನ್ನಯ ಬ್ರಿಗೇಡ್ ರಚಿಸಲು ಹೊರಟಿದ್ದಾರಂತೆ.

---------------------
  ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ ರೂಪದ ವಿಷಗಳಾಗಿವೆ
-ಕಂ.ವೀರಭದ್ರಪ್ಪ, ಸಾಹಿತಿ
 ಸಾಹಿತಿಗಳ ಪಕ್ಷಗಳ ಕುರಿತಂತೆಯೂ ಒಂದಿಷ್ಟು ಹೇಳಿ.

---------------------
  ಅಲ್ ಖಾಯಿದಾ, ಐಸಿಸ್‌ನಂತಹ ಸಂಘಟನೆಗಳಿಗೆ ಅಮೆರಿಕದಂತಹ ಮಹಾನ್ ದೇಶವನ್ನು ಸೋಲಿಸಲು ಎಂದಿಗೂ ಆಗದು
-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ
  ಅಮೆರಿಕವನ್ನು ಸೋಲಿಸಲು ಅಮೆರಿಕವೇ ಸಾಕು.

---------------------
   ಪ್ರಧಾನಿ ಮೋದಿ ತನ್ನ 15 ಲಕ್ಷದ ಸೂಟ್‌ಗೆ ಕೊಳೆಯಾಗುತ್ತದೆ ಎಂಬ ಕಾರಣಕ್ಕೆ ಬಡವರನ್ನು ಭೇಟಿಯಾಗುವುದಿಲ್ಲ
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ವಿದೇಶಗಳಲ್ಲಿ ಭಾರತದ ಬಡವರು ಇಲ್ಲದಿರುವುದು ಇನ್ನೊಂದು ಕಾರಣ.

---------------------
  ಶೀಘ್ರದಲ್ಲೇ ‘ಪತಂಜಲಿ ಜೀನ್ಸ್’ ಮಾರುಕಟ್ಟೆಗೆ
-ಬಾಬಾ ರಾಮ್‌ದೇವ್, ಯೋಗ ಗುರು
 ಇನ್ನು ಮುಂದೆ ತಾವು ಜೀನ್ಸ್ ಹಾಕಿಯೇ ಯೋಗ ಮಾಡಬಹುದು.

---------------------
  ಲೈಟ್ ಆಫ್ ಮಾಡಿ ಹಣ್ಣಿನ ರಸ ಹೀರಿದರೂ ಒಂದು ಪೆಗ್ ಹಾಕಿದ ಅನುಭವ ಸಿಗುತ್ತೆ
-ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
 ಬಹುಶಃ ಲೈಟ್ ಆಫ್ ಮಾಡಿ ಹಣ್ಣಿನ ರಸ ಹೀರುತ್ತಾ ನೀಡಿರುವ ಹೇಳಿಕೆ ಇದು.

---------------------
  ಈ ಬಾರಿಯ ಬಕ್ರೀದ್ ಅನ್ನು ಕಾಶ್ಮೀರಿ ಜನತೆಗೆ ಅರ್ಪಿಸುತ್ತೇವೆ
-ನವಾಝ್ ಶರೀಫ್, ಪಾಕ್ ಪ್ರಧಾನಿ
  ಅಂದರೆ ಅವರನ್ನೇ ಈದ್‌ಗೆ ಬಲಿಕೊಡಬೇಕು ಎಂದಿದ್ದೀರಾ?
---------------------
  ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ
-ದೇವೇಗೌಡ, ಮಾಜಿ ಪ್ರಧಾನಿ
  ತಾವು ಮುಖ್ಯಮಂತ್ರಿಯಾಗಿದ್ದಾಗ ಈ ಕಾರಣಕ್ಕಾಗಿ ರಾಜೀನಾಮೆ ನೀಡಿರಲಿಲ್ಲವೇ?
---------------------
  ಕಾವೇರಿ ವಿವಾದದಿಂದ ತುಂಬಾ ನೋವಾಗಿದೆ
-ನರೇಂದ್ರ ಮೋದಿ, ಪ್ರಧಾನಿ
  ಗುಜರಾತ್ ಹತ್ಯಾಕಾಂಡದಿಂದಲೂ ನಿಮಗೆ ತುಂಬಾ ನೋವಾಗಿರಬೇಕಲ್ಲ?
---------------------
  ಪತ್ರಕರ್ತರು ಜಾತಿ, ಧರ್ಮ, ಪ್ರಾದೇಶಿಕತೆ ಹೆಸರಿನಲ್ಲಿ ಭಯೋತ್ಪಾದನೆ ಬಿತ್ತಬಾರದು
-ವೆಂಕಯ್ಯನಾಯ್ಡು, ಕೇಂದ್ರ ಸಚಿವ
  ಭಯೋತ್ಪಾದನೆ ಬಿತ್ತದೇ ಪತ್ರಿಕೋದ್ಯಮವನ್ನು ಬೆಳೆಸುವ ಬಗೆ ಹೇಗೆ?
---------------------
  ಅರುಣಾಚಲದ ಈಗಿನ ಸರಕಾರ ಬಿಜೆಪಿಯ ಅಕ್ರಮ ಸಂತಾನ
-ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
  ತಮ್ಮ ಸಕ್ರಮ ಸಂತಾನಗಳೆಲ್ಲ ಏನಾದವು?
---------------------
  ಕರಾವಳಿಯ ಯುವಕರು ಕೋಮುವಾದಿಗಳ ಕೈವಶವಾಗುತ್ತಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
  ರಾಜಕಾರಣಿಗಳು ಕೋಮುವಾದಿಗಳ ಕೈಗೆ ಒಪ್ಪಿಸುತ್ತಿದ್ದಾರೆ ಎಂದರೆ ಉತ್ತಮ.

---------------------
  ಸಮಾಜವಾದಿ ಪಕ್ಷ ಒಂದು ಕುಟುಂಬವಿದ್ದಂತೆ
-ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖ್ಯಸ್ಥ
  ಅವಿಭಕ್ತ ಕುಟುಂಬ ಒಡೆಯುವುದು ಸಹಜ ಅಂತೀರಾ?
---------------------
  ನೈಜ ರಾಜಕಾರಣಿ ಪಾತ್ರದಲ್ಲಿ ನಾನು ವಿಫಲವಾದೆ
-ಅಮಿತಾಭ್ ಬಚ್ಚನ್, ನಟ
 ನಟಿಸುವಲ್ಲಿ ವಿಫಲವಾದೆ ಎಂದರೆ ಚೆನ್ನಾಗಿತ್ತು.

---------------------
  ಎಲ್ಲ ಪ್ರಾಕೃತಿಕ ಸಂಪತ್ತುಗಳು ನಮ್ಮ ಆವಶ್ಯಕತೆಗೆ ಅನುಗುಣವಾಗಿದೆ
-ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
  ಎಲ್ಲವೂ ನಿಮ್ಮ ಆವಶ್ಯಕತೆಗೆ ಅನುಗುಣವಾಗಿದ್ದರೆ, ಬಡವರು ತಮ್ಮಿಂದ ಬಡ್ಡಿಗೆ ಪಡೆದು ಅದನ್ನು ಬಳಸಬೇಕೇ?
---------------------
  ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ಜಾರಿಯಾಗಲಿದೆ
-ಯು.ಟಿ ಖಾದರ್, ಸಚಿವ
  ಕಾಂಗ್ರೆಸ್‌ನ ಅಳಿದುಳಿದ ನಿರ್ಗತಿಕರಿಗೆ?
---------------------
  ಗೋವನ್ನು ರಾಜಕೀಯದಿಂದ ಮುಕ್ತಗೊಳಿಸಬೇಕು
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಆಮೇಲೆ ನಿಮಗೇನು ಕೆಲಸ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...