×
Ad

ಗ್ರಾಮೀಣ ಕ್ರೀಡೆಗೆ ಉತ್ತೇಜನ ಅಗತ್ಯ: ಜಿಲ್ಲಾಧಿಕಾರಿ ನಕುಲ್

Update: 2016-09-25 22:15 IST

 ಕಾರವಾರ, ಸೆ.25: ಗ್ರಾಮೀಣ ಕ್ರೀಡೆಗಳು ಜನರನ್ನು ಸಂಘಟಿಸಿ ಸೌಹಾರ್ದ ಬೆಳೆಸಲು ಅನುಕೂಲವಾಗಿದ್ದು, ಇಂತಹ ಕ್ರೀಡೆಗಳಿಗೆ ಉತ್ತೇಜನ ನೀಡುವ ಆವಶ್ಯಕತೆಯಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

ತಾಲೂಕಿನ ಖಾರ್ಗಾದ ಮಾಂಡೆಬೋಳ ಗ್ರಾಮದಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಖಾರ್ಗಾ ಗ್ರಾಮಸ್ಥರ ಸಹಯೋಗದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ದೇಶದ ಕ್ರೀಡಾಪಟುಗಳು ಇನ್ನಷ್ಟು ಸಾಧನೆ ಮಾಡಲು ಆರಂಭದಿಂದಲೇ ಪ್ರೋತ್ಸಾಹ ಸಿಗಬೇಕಿದೆ. ಗ್ರಾಮೀಣ ಕ್ರೀಡೆಗಳು ಈ ನಿಟ್ಟಿನಲ್ಲಿ ಆಟಗಾರರ ಮನೋಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ಕ್ರೀಡಾ ಮನೋಭಾವನೆ ವೃದ್ಧಿಸುತ್ತವೆ. ಕ್ರೀಡಾಪಟುಗಳ ಜೊತೆಗೆ, ದೇಶ ಸೇವೆಗೈದ ಮಾಜಿ ಸೈನಿಕರನ್ನು ಗೌರವಿಸುತ್ತಿರುವ ಕಾರ್ಯಕ್ರಮ ಶ್ಲಾಘನೆಗೆ ಅರ್ಹವಾಗಿದೆ ಎಂದರು.

ಮಾಜಿ ಸೈನಿಕರಿಗೆ ಸನ್ಮಾನ:

ಸೈನಿಕರ ಗ್ರಾಮವೆಂದೆ ಖ್ಯಾತಿಗಳಿಸಿದ ಖಾರ್ಗಾದ ಮಾಂಡೇಬೋಳದ ಸುಮಾರು 17ಜನ ಸೈನಿಕರನ್ನು ಸನ್ಮಾನಿಸಲಾಯಿತು. ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ಶಾಂತಾ ಕೆ.ಸಾವಂತ, ರಮಾಕಾಂತ ಎಂ.ಸಾವಂತ, ಸಾಯಿನಾಥ ಸಾವಂತ, ಸುರೇಂದ್ರ ಸಾವಂತ, ಉತ್ತಮ ಕೆ.ಸಾವಂತ, ಉಲ್ಲಾಸ ಬಿ. ಸಾವಂತ, ಮಲ್ಲೂ ಜಿ.ಸಾವಂತ, ವಿನಯ ಕೆ.ಸಾವಂತ, ಸೈರೋಬಾ ವಿ.ಸಾವಂತ, ಮಧುಕರ ದೇವದಾಸ, ಪಾಂಡುರಂಗ ಸಾವಂತ, ಸದಾನಂದ ಸಾವಂತ, ಪ್ರೇಮಾನಂದ ನಾಯ್ಕ, ಮುರಳಿ ನಾಯ್ಕ, ಶಾಂತಾರಾಮ ಶೇಟ್, ರತ್ನಾಕರ ನಾಯ್ಕ, ಭಾಸ್ಕರ ನಾಯ್ಕರನ್ನು ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಜೈ ಜವಾನ್ ಜೈ ಕಿಸಾನ್:

 ದೇಶದ ಗಡಿಕಾಯ್ದ ಸೈನಿಕರಂತೆ ದೇಶಕ್ಕೆ ಅನ್ನ ನೀಡಿ ಹಸಿವು ನೀಗಿಸುವ ರೈತರನ್ನು ಸನ್ಮಾನಿಸುವ ಮೂಲಕ ಮತ್ತೊ ಂದು ಅಪರೂಪದ ಕ್ಷಣಕ್ಕೆ ಕಾರ್ಯ ಕ್ರಮ ಸಾಕ್ಷಿಯಾಯಿತು. ಪ್ರಗತಿಪರ ರೈತರಾದ ದತ್ತಾ ಆರ್.ಸಾವಂತ, ಸುರೇಶ ಎನ್.ಸಾವಂತ ಹಾಗೂ ಉಲ್ಲಾಸ ವಿ.ಬಾಂದೇಕರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಪಂ ಸದಸ್ಯೆ ಚೈತ್ರಾ ಸಿ.ಕೊಠಾರಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ನಗರಸಭೆ ಸದಸ್ಯ ದೇವಿದಾಸ ನಾಯ್ಕ, ವೈಲವಾಡಾ ಗ್ರಾಪಂ ಅಧ್ಯಕ್ಷೆ ಸೌಭಾಗ್ಯಾ ವಿ.ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ ಗುನಗಿ, ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ದೇವಿದಾಸ ಬೆಳೂರಕರ, ಶಿಕ್ಷಣ ಇಲಾಖೆ ಅಧಿಕಾರಿ ರಾಮಕೃಷ್ಣನಾಯಕ, ವೈಲವಾಡಾ ಗ್ರಾಪಂ ಸದಸ್ಯೆ ದೀಪಾ ಹುಲಸ್ವಾರ, ಮಾಜಿ ಸೈನಿಕ ಶಾಂತಾ ಸಾವಂತ, ವಿದ್ಯಾ ಪಾವಸ್ಕರ್, ರವಿಕಾಂತ ಸಾವಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಂದೀಪ್ ಸಾಗರ್ ನಿರೂಪಿಸಿದರು. ಸಂಘದ ಖಜಾಂಚಿ ಸುಭಾಷ್ ಧೂಪದಹೊಂಡ ಸನ್ಮಾನಿತರ ಪರಿಚಯ ಮಾಡಿ, ಕಾರ್ಯಕ್ರಮ ನಿರ್ವಹಿಸಿದರು. ಅಚ್ಚುತಕುಮಾರ್ ವಂದನಾರ್ಪಣೆ ಮಾಡಿದರು.

ವಿವಿಧ ಕೃಷಿ ಸಲಕರಣೆಗಳು ಹಾಗೂ ಗ್ರಾಮೀಣ ಭಾಗದ ಮನೆಗಳಲ್ಲಿ ಬಳಸುವ ವಿವಿಧ ನಮೂನೆಯ ಸಾಂಪ್ರದಾಯಿಕ ಪರಿಕರಗಳ ವಸ್ತು ಪ್ರದರ್ಶನ, ಗದ್ದೆ ಉಳುಮೆ ಮಾಡಲು ಬಳಸುವ ನೇಗಿಲು, ಗೊರಬು, ಮಜ್ಜಿಗೆ ಕಡೆಯುವ ಕುಡುಗೋಲು, ಬುಟ್ಟಿಗಳು ಸೇರಿದಂತೆ ವಿವಿಧ ವಸ್ತುಗಳು ನೆರೆದ ಜನರಿಗೆ ಪ್ರಧಾನ ಆಕರ್ಷಣೆೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News