ಚಲೋ ಉಡುಪಿ:ಉದಾರ ದೇಣಿಗೆ ನೀಡಲು ದ್ವಾರಕನಾಥ್ ಕರೆ
ಆತ್ಮೀಯರೆ,
"ಚಲೋ ಉಡುಪಿ" ದಲಿತ ಅಸ್ಮಿತೆಯನ್ನು ಸಾಬೀತುಪಡಿಸುವ, ಮನುವಾದದ ವಿರುದ್ದ ಎಲ್ಲಾ ಪ್ರಗತಿಪರ ಹಾಗೂ ಮಾನವೀಯ ಶಕ್ತಿಗಳು ಒಂದೆಡೆ ಸೇರಿ ರೂಪಿಸುತಿರುವ ಐತಿಹಾಸಿಕ ಕಾರ್ಯಕ್ರಮ. ಇದರ ವಿಶೇಷವೆಂದರೆ ಯುವಕ,ಯುವತಿಯರೇ ಇದರ ಮುಂಚೂಣಿಯಲ್ಲಿದ್ದು ಹಗಲುರಾತ್ರಿಯೆನ್ನದೆ, ಅನ್ನ ನೀರು ನಿದ್ದೆ ಬಿಟ್ಟು ಸಂಘಟಿಸುತ್ತಿರುವ ಅಭೂತಪೂರ್ವ ಹೋರಾಟವಿದು.
ದುರಂತವೆಂದರೆ ಹಣದ ಮುಗ್ಗಟ್ಟಿನಿಂದ ಇಡೀ ಕಾರ್ಯಕ್ರಮಕ್ಕೇ ಮುಕ್ಕಾಗುವಂತಿದೆ. ಆ ಹುಡುಗರ ಮನವಿಗೆ ಅನೇಕರು ಸ್ಪಂದಿಸುತ್ತಿಲ್ಲ, ನಾನು ಜೀವನದಲ್ಲೇ ಯಾರನ್ನೂ ಹಣ ಕೇಳಿಲ್ಲ ಆದರೂ ಸಿಕ್ಕಸಿಕ್ಕವರಿಗೆಲ್ಲಾ ಪೋನ್ ಮಾಡಿ ವಿನಂತಿಸುತಿದ್ದೇನೆ, ಕೆಲವರು ಕೊಡುವುದಾಗಿ ಆಶ್ವಾಸನೆ ನೀಡುತಿದ್ದಾರೆ, ಕೆಲವರು ಸ್ಪಂದಿಸುತ್ತಿಲ್ಲ. ನನ್ನ ಅನೇಕ ಬರಹಗಳಿಗೆ, ಕಾರ್ಯಗಳಿಗೆ ಹೃದಯತುಂಬಿ ಸ್ಪಂದಿಸುವ ನಿಮ್ಮಂತವರು ನಿಮ್ಮ ಕೈಲಾದಷ್ಟು ಮಟ್ಟಿಗೆ ಈ ಕೆಳಕಂಡ ಮನವಿಗೆ ಸ್ಪಂದಿಸಿ ಹಣ ನೀಡಿ. ನಾವು ಭ್ರಷ್ಟರ ಹತ್ತಿರ, ಜಾತಿವಾದಿ ರಾಜಕಾಣಿಗಳ ಹತ್ತಿರ ನಮ್ಮ ಆತ್ಮಗೌರವ ಬಿಟ್ಟು ಕೈಚಾಚಲಾರೆವು.. ನಮ್ಮ ಹುಡುಗರು ತಾವು ಮಾಡಬೇಕಿದ್ದ ಖರ್ಚನ್ನು ಅರ್ಧಕ್ಕೆ ಇಳಿಸಿದ್ದಾರೆ.
ನೀವು ಕೊಡುವ ಹಣ ಅನ್ನಕ್ಕೆ, ನೀರಿಗೆ, ನೆರಳಿಗೆ, ಕರಪತ್ರಕ್ಕೆ, ಮೈಕು, ವೇದಿಕೆ ಯಂತಹ ಉಪಯುಕ್ತ ಅನಿವಾರ್ಯ ಕೆಲಸಗಳಿಗೆ ಮಾತ್ರ ವಿನಿಯೋಗವಾಗುತ್ತದೆ. ದಯವಿಟ್ಟು ಧನ ಸಹಾಯ ಮಾಡುವ ಮೂಲಕ ಈ ಐತಿಹಾಸಿಕ ಚಳುವಳಿಯಲ್ಲಿ ಪಾಲ್ಗೊಳ್ಳಿ... ಪ್ಲೀಸ್..
ನೀವು ಹಣ ಕಳುಹಿಸಬಹುದಾದ ವಿವರಗಳ ಮನವಿ ಇಂತಿದೆ
ಚಲೋ ಉಡುಪಿ ಆಂದೋಲನಕ್ಕೆ ಉದಾರ ದೇಣಿಗೆ ನೀಡಲು ಮನವಿ
ಆತ್ಮೀಯರೆ,
"ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮಹಕ್ಕು" ಘೋಷಣೆಯಡಿ ಅ.4 ರಿಂದ 9ರವರೆಗೆ ನಾವು ಹಮ್ಮಿಕೊಂಡಿರುವ ಚಲೋ ಉಡುಪಿ ಜಾಥಾ ಹಾಗೂ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅ.9ರ ಉಡುಪಿ ಸಮಾವೇಶಕ್ಕೆ ಗುಜರಾತಿನ ಉನಾ ಹೋರಾಟದ ರೂವಾರಿ ಜಿಗ್ನೇಶ್ ಮೆವಾನಿ ಭಾಗವಹಿಸಲಿದ್ದಾರೆ.
ಆದರೆ ಈ ಇಡೀ ಆಂದೋಲನವನ್ನು ನಡೆಸಲು ಕೇವಲ ತನು- ಮನದ ಬೆಂಬಲ ಮಾತ್ರ ಸಾಲುವುದಿಲ್ಲ. ಬೆಂಗಳೂರಿನಲ್ಲಿ ಜಾಥಾ ಉದ್ಘಾಟನಾ ಸಮಾವೇಶ, 200ಕ್ಕೂ ಹೆಚ್ಚು ಕಾರ್ಯಕರ್ತರು ನಡೆಸುವ ಆರು ದಿನಗಳ ವಾಹನ ಜಾಥಾ, ಸಾಂಸ್ಕೃತಿಕ ಪರಿಕರಗಳು, ಉಡುಪಿಯ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಸುಮಾರು 25,000 ಜನರಿಗೆ ಊಟ, ವೇದಿಕೆಯ ಖರ್ಚು, ಸಂವಹನ - ಸಂಪರ್ಕಗಳ ಖರ್ಚು, ಹೀಗೆ ನಾನಾ ಖರ್ಚುವೆಚ್ಚಗಳಿಗೆ ಅಪಾರ ಪ್ರಮಾಣದ ಹಣಬೆಂಬಲವೂ ಅತ್ಯಗತ್ಯವಾಗಿದೆ. ಇದಕ್ಕಾಗಿ ನಾವು ಶ್ರೀಮಂತರನ್ನೂ, ನಮ್ಮ ಸಿದ್ಧಾಂತ ವಿರೋಧಿಗಳನ್ನೂ, ರಾಜಕಿಯ ಪಕ್ಷಗಳನ್ನೂ ನೆಚ್ಚಿಕೊಂಡಿಲ್ಲ. ಅದರೆ ಇಷ್ಟು ದೊಡ್ಡ ಮೊತ್ತದ ಹಣಕಾಸು ಹೊಂದಿಸುವುದು ನಮಗೆ ಸಾಹಸದ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮೆಲ್ಲರಲ್ಲಿ ಮನವಿ.
ನಮ್ಮ ಈ ಆಂದೋಲನಕ್ಕೆ ಕೈ ಜೋಡಿಸಿರುವ ನೀವೆಲ್ಲಾ ಉದಾರವಾಗಿ ನಿಮ್ಮಿಂದ ಸಾಧ್ಯವಾಗುವ ಗರಿಷ್ಠ ಮಟ್ಟದ ಹಣ ಸಹಾಯವನ್ನು ನೀಡಿದರೆ ನಾವು ಈ ಚಳವಳಿಗೆ ಬೇಕಾದ ಹಣವನ್ನು ಸಂಗ್ರಿಸಬಹುದೆಂಬ ವಿಶ್ವಾಸ ಹೊಂದಿದ್ದೇವೆ. ನಮ್ಮ ಚಲೋ ಉಡುಪಿ ಫೇಸ್ ಬುಕ್, ವಾಟ್ಸಾಪ್ ಗ್ರೂಪುಗಳಲ್ಲಿ ಇರುವ ಪ್ರತಿಯೊಬ್ಬರೂ ತಾವು ಹಣ ಸಹಾಯ ಮಾಡುವ ಜೊತೆಗೆ ತಮ್ಮ ಸ್ನೇಹಿತರಿಗೂ ಚಲೋ ಉಡುಪಿಗೆ ದೇಣಿಗೆ ನೀಡಲು ಪ್ರೇರೇಪಿಸಿದರೆ ಅದೇ ಸಾಕಷ್ಟಾಗುತ್ತದೆ.
ಇದಕ್ಕಾಗಿ ನಾವಿಂದು ಬ್ಯಾಂಕ್ ಖಾತೆ ತೆರೆದಿದ್ದೇವೆ. ಅದಕ್ಕೆ ನೀವು ಜಮೆ ಮಾಡಬಹುದು. ಲೆಕ್ಕಪತ್ರಗಳೆಲ್ಲವೂ ಪಾರದರ್ಶಕವಾಗಿರುತ್ತವೆ. ಇದೊಂದು ವಿನೂತನ ಪ್ರಯೋಗ. ಇದು ಯಶಸ್ವಿಯಾದರೆ ಕಂಡಕಂಡವರ ಮುಂದೆ ಕೈಚಾಚುವ ಮುಜುಗರದಿಂದ ಚಳುವಳಿಗಾರರು ಪಾರಾಗಿ ಸ್ವಾಭಿಮಾನದಿಂದ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಿದೆ. ಹಣಸಹಾಯ ಮಾಡುವ ಮೂಲಕ ಈ ಚಳವಳಿ ಬೆಂಬಲಿಸಿ. ಸ್ವಾಭಿಮಾನಿ ಸಂಘರ್ಷವನ್ನು ಯಶಸ್ವಿಗೊಳಿಸಲು ನೆರವಾಗಿ
ಇಂತಿ,
ಚಲೋ ಉಡುಪಿ ಬಳಗ
ನೀವು ಹಣ ಜಮೆ ಮಾಡಬೇಕಾದ ಬ್ಯಾಂಕ್ ಖಾತೆಯ ವಿವರ:
SB Account Number
0413101503582
Name: DALITHA DAMANITHARA SWABHIMANI HORATA SAMITHI
Bank Name: Canara Bank, Town Hall Branch, Bangalore
IFSC code: CNRB0000413 MICR
ಸಂಪರ್ಕ: ಅಖಿಲಾ- 9845250955