ಓ... ಮೆಣಸೆ...

Update: 2016-10-02 18:35 GMT

 ಭಜನೆಯಲ್ಲಿ ಜಾತೀಯತೆ ವಿಷಯ ಬಾರದೆ, ಸಮಾಜ ಒಗ್ಗೂಡುವಿಕೆ ಸಾಧ್ಯವಾಗಬೇಕು
- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
  ಪಾಡ್ದನಗಳ ಗತಿ ಏನಾಗಬೇಕು?

---------------------
  ದೇಹದ ಯಾವುದೇ ಅಂಗಕ್ಕೆ ಗಾಯವಾದರೆ ಇಡೀ ದೇಹಕ್ಕೆ ನೋವಾಗುತ್ತದೆ
-ನರೇಂದ್ರ ಮೋದಿ, ಪ್ರಧಾನಿ
  ಗುಜರಾತ್‌ನ ನಾಯಿಮರಿಯ ಗಾಯ ವಾಸಿಯಾಗಿದೆಯೇ?

---------------------
  ಕಾವೇರಿ ನದಿನೀರು ಬಿಕ್ಕಟ್ಟು ಕುರಿತು ಪ್ರಧಾನಿ ಮೋದಿ ಯಾಕೆ ಮಧ್ಯೆ ಪ್ರವೇಶಿಸುತ್ತಿಲ್ಲ ಎಂಬುದರ ಮರ್ಮವನ್ನು ಸಮಯ ಬಂದಾಗ ಬಿಚ್ಚಿಡುತ್ತೇನೆ
-ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ
  ಅಷ್ಟರಲ್ಲಿ ಕಾವೇರಿ ಕೊಳ್ಳ ಬರಿದಾಗಿರುತ್ತದೆ.

---------------------
  ವೈದ್ಯರು ಚಿಕಿತ್ಸೆ ನೀಡಿ ಪ್ರಾಪ್ತಿಸಿಕೊಳ್ಳುವ ಪ್ರಯತ್ನಕ್ಕೆ ವೌಲ್ಯ ಕಟ್ಟಬಾರದು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ದೇವಸ್ಥಾನದ ಅರ್ಚಕರಿಗೂ ಇದನ್ನೇ ಬೋಧಿಸಬಾರದೇ?

---------------------
  ವಿದ್ಯಾವಂತರು ಜ್ಯೋತಿಷಿಗಳನ್ನು ಆದರ್ಶವಾಗಿ ಪರಿಗಣಿಸಬಾರದು
-ವೀರಪ್ಪ ಮೊಯ್ಲಿ, ಸಂಸದ
  ರಾಜಕಾರಣಿಗಳಿಗಷ್ಟೇ ಅವರು ಆದರ್ಶವೆ?

---------------------
  ನನಗೆ ರಾಜಕೀಯ ಸೇರುವ ಆಸೆ ಇಲ್ಲ
-ಶಿವರಾಜ್‌ಕುಮಾರ್, ನಟ
  
ಇದ್ದ ಬಿದ್ದ ಆಸೆಗಳೆಲ್ಲ ಕಳೆದ ಚುನಾವಣೆಯಲ್ಲಿ ಕೊಚ್ಚಿ ಹೋಗಿರಬೇಕು. 

---------------------
  ಪಾಕ್ ಕಾಶ್ಮೀರವನ್ನು ಪಡೆಯುವ ಕನಸು ಕಾಣುವುದನ್ನು ಬಿಡಬೇಕು
-ಸುಶ್ಮಾ ಸ್ವರಾಜ್, ಕೇಂದ್ರ ಸಚಿವ
  
ಕಾಶ್ಮೀರಿಗಳ ಕನಸುಗಳ ಬಗ್ಗೆ ಒಂದಿಷ್ಟು ಮಾತನಾಡಿ. 

---------------------
  ಯಾವತ್ತೂ ನ್ಯಾಯಕ್ಕೆ ಗೆಲುವಾಗುತ್ತದೆ
-ಕೆ.ಜೆ. ಜಾರ್ಜ್, ಸಚಿವ
  ಮತ್ತೆ ಕಾವೇರಿಯಲ್ಲಿ ಯಾಕೆ ನ್ಯಾಯ ನಮಗೆ ಉಲ್ಟಾ ಹೊಡೆಯಿತು?

---------------------
  ಉರಿ ದಾಳಿ ಬಗ್ಗೆ ಜಾಗತಿಕ ತನಿಖೆಯಾಗಲಿ
-ಸರ್ತಾಜ್ ಅಝೀಝ್, ಪಾಕ್ ಪ್ರಧಾನಿ ಸಲಹೆಗಾರ
  
ಮೈಯುರಿಯ ಹೇಳಿಕೆ. 

---------------------

  ದಿಲ್ಲಿ ಸರಕಾರದ ಆಡಳಿತದಿಂದ ಜನರನ್ನು ದೇವರೇ ಕಾಪಾಡಬೇಕು
-ವಿಜಯ್ ಗೋಯಲ್, ಕೇಂದ್ರ ಸಚಿವ
  
ಕೇಂದ್ರದಲ್ಲಿರುವ ದೆವ್ವದ ಕಾಟವಿರಬೇಕು. 

---------------------
  ಅಧಿಕಾರ ಇಲ್ಲದೆಯೂ ಜನಸೇವೆ ಮಾಡಲು ಸಾಧ್ಯ
-ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
  
ಅಧಿಕಾರವಿಲ್ಲದೇ ಇದ್ದಾಗಷ್ಟೇ ಅದು ಸಾಧ್ಯ. 

---------------------
  ವಿಧಾನಸಭೆ ಚುನಾವಣೆಗೆ ಆರು ತಿಂಗಳ ಮೊದಲೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
-ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
  ಕಾವೇರಿ ಹೋರಾಟದ ಧೈರ್ಯದಿಂದಲೇ?

---------------------
  ಹಿಂದಿ ಚಿತ್ರೋದ್ಯಮದಲ್ಲಿ ಐಟಂ ಸಾಂಗ್‌ಗಳಿಂದಾಗಿ ಸುಂದರ ಮಹಿಳೆಯರ ವ್ಯಾಪಾರ ನಡೆಯುತ್ತದೆ
-ಜೂಹಿ ಚಾವ್ಲಾ, ನಟಿ
  ಒಂದು ಕಾಲದಲ್ಲಿ ವ್ಯಾಪಾರಕ್ಕೆ ಬಳಸಲ್ಪಟ್ಟ ಹಳೆ ಸರಕು.

---------------------
  ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ
-ನರೇಂದ್ರ ಮೋದಿ, ಪ್ರಧಾನಿ
  
ರಕ್ತವನ್ನು ಹೇಗೆ ಹರಿಸಬೇಕು ಎನ್ನುವುದರಲ್ಲಿ ನೀವು ಪ್ರವೀಣರು ಬಿಡಿ. 

---------------------
  ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ
-ವಿನಯ ಕುಮಾರ್ ಸೊರಕೆ, ಶಾಸಕ
  ಆ ಮುನ್ನೆಚ್ಚರಿಕೆಯ ಭಾಗವಾಗಿ ನಿಮ್ಮನ್ನು ಸಚಿವ ಸ್ಥಾನದಿಂದ ಕಿತ್ತೆಸೆಯಲಾಯಿತೇ?

---------------------
  ಶಾಲೆಯಲ್ಲಿ ನಾನು ಯಾವಾಗಲೂ ಲೆಕ್ಕದಲ್ಲಿ ಫೈಲ್ . ಪಾಸಾಗ್ತಿದ್ರೆ ಎಂ.ಪಿ. ಆಗ್ತಿರಲಿಲ್ಲ
-ನಳಿನ್‌ಕುಮಾರ್ ಕಟೀಲು, ಸಂಸದ
  
ಮತದಾರರ ಲೆಕ್ಕವೂ ತಪ್ಪಿದೆ ಬಿಡಿ. 

---------------------
  ಮಠವನ್ನು ಸರ್ವನಾಶ ಮಾಡಲು ಸರಕಾರ ಯತ್ನಿಸುತ್ತಿದೆ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಅದನ್ನು ಸರ್ವನಾಶ ಮಾಡಲು ಸರಕಾರ ಯಾಕೆ? ನೀವೇಸಾಕು.

---------------------
  ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ಕುರುಬರು ಹೋಗಬಾರದು
-ವರ್ತೂರು ಪ್ರಕಾಶ್, ಶಾಸಕ
  
ಜನರು ನಿಮ್ಮ ಮಾತನ್ನು ಕೇಳಲು, ತಾವೇನು ಆಧುನಿಕ ಸಂಗೊಳ್ಳಿ ರಾಯಣ್ಣನೇ? 

---------------------
  ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಯಾಚಿಸುತ್ತೇನೆ
-ಅಂಬರೀಷ್, ಮಾಜಿ ಸಚಿವ
  
ತಮ್ಮನ್ನು ಆಯ್ಕೆ ಮಾಡಿದ ತಪ್ಪಿಗೆ ಜನರು ನಿಮ್ಮನ್ನು ಕ್ಷಮಿಸಿದ್ದಾರೆ. 

---------------------
  ಹಗರಣ ಮಾಡಿ ಜೈಲಿಗೆ ಹೋಗಿದ್ದವರು ಅಭಿವೃದ್ಧಿ ಬಗ್ಗೆ ನಮ್ಮನ್ನೇ ಟೀಕಿಸುತ್ತಿದ್ದಾರೆ
-ಕೃಷ್ಣ ಭೈರೇಗೌಡ, ಸಚಿವ
  
ನೀವೇನೂ ಹಗರಣ ಮಾಡುತ್ತಿಲ್ಲವಲ್ಲ ಎಂಬ ಬೇಜಾರಿನಲ್ಲಿ ಟೀಕಿಸುತ್ತಿದ್ದಾರೆ. 

---------------------
  ಕಷ್ಟಪಟ್ಟು ಅಣೆಕಟ್ಟು ಕಟ್ಟಿದ್ದು ನಾವು. ಅದರ ಕೀಯನ್ನು ಬೇರೆಯವರಿಗೆ ಕೊಡಲ್ಲ
-ಡಿ.ಕೆ ಶಿವಕುಮಾರ್, ಸಚಿವ
  
ಅವರಿಗೆ ಕೀ ಬೇಡವಂತೆ, ನೀರು ಸಾಕಂತೆ. 

---------------------
   ಈ ರಾಜ್ಯದ ಜನರ ಹಿತಕ್ಕಾಗಿ (ಕಾವೇರಿ ನೀರಿಗಾಗಿ) ಜೈಲಿಗೆ ಹೋಗಲೂ ಸಿದ್ಧ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
  
ಆದರೆ ಕಾಂಗ್ರೆಸ್ ನಿಮಗಾಗಿ ವೃದ್ಧಾಶ್ರಮದಲ್ಲಿ ಜಾಗ ಸಿದ್ಧಪಡಿಸುತ್ತಿದೆ.

 ---------------------
  ಪಾಕ್ ನಟರು ಉಗ್ರರಲ್ಲ
-ಸಲ್ಮಾನ್ ಖಾನ್, ನಟ
  
ಹೌದು, ಕಂಠಪೂರ್ತಿ ಕುಡಿದು ಯಾರನ್ನೂ ಅವರು ಕಾರು ಹರಿಸಿ ಕೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...