×
Ad

ಚಲೋ ಉಡುಪಿ: ಭಾವಲಹರಿಯಲ್ಲಿ ಇಮಾಮ್ ಗೋಡೆಕಾರ

Update: 2016-10-08 18:03 IST

ಬುಲ್ಲೇಷಾಗೊಂದು ದೂರು

ಕಾರಣ ಬೇಕಿಲ್ಲ ನಮ್ಮನ್ನು ಕೊಲ್ಲೋಕೆ ಓ ಬುಲ್ಲೇಷಾ,
ತಿನ್ನುವ ಅನ್ನವೇ ಕುತ್ತಾಯ್ತು
ಜೀವಕೆ ಈ ಜಗದಲಿ. 

ಹಾಲು ಹೈನದ ದನ ದೇವರಾಯ್ತು ಓ ಬುಲ್ಲೇಷಾ,
ಚಿನ್ನವಾಯ್ತು ಅದರ ಹಳದಿ ಮೂತ್ರ.

ಊಟಕೆ ಕೂತವನ ಮಾತಿಗೇ ಕರೆಯಲ್ಲ ಓ ಬುಲ್ಲೇಷಾ,
ಆದರೂ ಎಳೆದೊಯ್ದು ಹೆಣ ಕೆಡವಿದರೋ.  

ದೇವರು ಕರುಣಾಮಯಿ ಎಂದರು ಓ ಬುಲ್ಲೇಷಾ,
ಅವನ ದರ್ಶನಕೆ ಹೋದವನ ಸುಟ್ಟರೋ ಅಂಗಳದಲಿ.

ಇದು ಗದ್ದುಗೆ ಹಿಡಿದವರ ರಾಜಧರ್ಮವಂತೆ ಓ ಬುಲ್ಲೇಷಾ,
ಮೆಟ್ಟಿಲುಗಳಾದವು ನನ್ನ ಜನರ ಹೆಣಗಳು ರಾಜಕೀಯದಲಿ.

ಚದರಂಗವಾಯ್ತು ಬದುಕೆಂಬುದು ಓ ಬುಲ್ಲೇಷಾ,
ಅರಸನಿಗಾಗಿ ಸಾಯಬೇಕು ಸೈನಿಕ ಯದ್ಧದಲಿ.

ಜಗಕೆ ಹಂಚಿದಷ್ಟೂ ಉಳಿವ ಪ್ರೀತಿ ನನ್ನ ಜನರದ್ದು ಓ ಬುಲ್ಲೇಷಾ,
ಆದರೂ ಸತ್ತರೆ ಹೂಳಲು ಜಾಗವಿಲ್ಲ  ಈ ಭುವಿಯಲಿ. 

ಇಮಾಮ್ ಗೋಡೆಕಾರ 
ಪತ್ರಕರ್ತರು
ಸತ್ಯನಾರಾಯಣ ಪೇಟೆ, ಬಳ್ಳಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor