‘ಕೊಲೆ ಆಗಿರುತ್ತದೆ, ಆದರೆ,ಸಾಕ್ಷಾಧಾರ ಕೊರತೆ ಇರುತ್ತದೆ’

Update: 2016-10-26 10:14 GMT

ಬೆಂಗಳೂರು, ಅ.26:‘‘ಕೊಲೆ ಆಗಿರುತ್ತದೆ. ಆದರೆ,ಸಾಕ್ಷಾಧಾರಗಳ ಕೊರತೆೆ ಇರುತ್ತದೆ. ಹಾಗಾದರೆ ಕೊಲೆ ಆಗಿರುವುದು ಸುಳ್ಳಾ’’ ಎಂದು ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಟ್ಯಂತರ ರೂ. ಕಿಕ್‌ಬ್ಯಾಕ್ ಪಡೆದ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್‌ನಿಂದ ಇಂದು ಕ್ಲೀನ್‌ಚಿಟ್ ಪಡೆದ ಬಳಿಕ ‘ತನ್ನ ವಿರುದ್ಧ ಆರೋಪ ರಾಜಕೀಯ ಪ್ರೇರಿತವಾಗಿತ್ತು’ಎಂದು ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಅವರ ‘ರಾಜಕೀಯ ಪ್ರೇರಿತ’ಎಂಬ ಹೇಳಿಕೆಗೆ ಸಿಎಂ ಮೇಲಿನಂತೆ ಪ್ರತಿಕ್ರಿಯಿಸಿದರು.

 ‘‘ಸಿಎಂ ಅವರ ಹಗುರ ಮಾತಿನಿಂದಲೇ ಕಾಂಗ್ರೆಸ್ ನೆಲಕಚ್ಚುತಿದೆ’’ ಎಂದು ಸಿದ್ಧರಾಮಯ್ಯರ ‘ಮರ್ಡರ್’ ಹೇಳಿಕೆಗೆ ಯಡಿಯೂರಪ್ಪ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News