×
Ad

ಟಿಪ್ಪು ಜಯಂತಿ ಬೇಡ: ಸಿಎಸ್‌ಗೆ ಮನವಿ ಸಲ್ಲಿಕೆ

Update: 2016-11-04 12:50 IST

ಬೆಂಗಳೂರು, ನ.4: ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಬೇಡ ಎಂದು ಕೊಡವ ಸಮುದಾಯದ ಮಂಜುನಾಥ್ ಇಂದು ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್‌ ಗುರುವಾರ ನೀಡಿರುವ ನಿರ್ದೇಶನದಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಯಾ ಅವರಿಗೆ ಮನವಿ ಸಲ್ಲಿಸಿರುವುದಾಗಿ ಮಂಜುನಾಥ್ ಅವರು ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ರಾಜ್ಯ ಸರಕಾರದ ವಿರುದ್ಧ ಸಲ್ಲಿಸಿರುವ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಇತ್ಯರ್ಥಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮೂರ್ತಿ ಅವರು ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ಅಡ್ವೊಕೇಟ್‌ ಜನರಲ್ ಅವರಲ್ಲಿ ಗುರುವಾರ ವಿವರಣೆ ಕೇಳಿದ್ದರು..  ಆದರೆ ಅಡ್ವೊಕೇಟ್‌ ಜನರಲ್‌ ಅವರು ಕಾಲಾವಕಾಶ ಕೋರಿದರು.
ವಕೀಲ ಸಜನ್‌ ಪೂವಯ್ಯ ಅವರು ಅರ್ಜಿದಾರರ ಪರ ವಾದ ಮಂಡಿಸಿ  ದೇಶದ ಇತರ ರಾಜರುಗಳ  ಜನಮ ಜಯಂತಿ ಯಾಕಿಲ್ಲ ? . ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಬೆಳಗ್ಗೆ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚಿಸಿತ್ತು.. ನ.೮ರ ಮೊದಲು ಮನವಿ ಪರಿಶೀಲಿಸಿ ಕ್ರಮ ಕೈಕೊಳ್ಳುವಂತೆ ಆದೇಶ ನೀಡಿತ್ತು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News