ಪೊಲೀಸ್ ಫೈರಿಂಗ್ ಗೆ ಓರ್ವ ಬಲಿ
Update: 2016-11-07 18:05 GMT
ಬೆಂಗಳೂರು, ನ. 7: ಪೊಲೀಸ್ ಫೈರಿಂಗ್ ಗೆ ರೌಡಿಶೀಟರ್ ಒಬ್ಬರು ಬಲಿಯಾದ ಘಟನೆ ಅನ್ನಪೂರ್ಣೇಶ್ವರಿನಗರದಲ್ಲಿ ಸೋಮವಾರ ಸಂಜೆ ನಡೆದಿದೆ.
ರೌಡಿ ಶೀಟರ್ ಆಶಿಕ್(19) ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ.
ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಭರಮಪ್ಪ ಮಲ್ಲೂರ್ ಅವರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದಾಗ ಆಶಿಕ್ ಸ್ಥಳದಲ್ಲೇ ಮೃತಪಟ್ಟನು ಎಂದು ತಿಳಿದು ಬಂದಿದೆ.
ಆಶಿಕ್ ಮಚ್ಚಿನಿಂದ ನಡೆಸಿದ ದಾಳಿಗೆ ಇನ್ಸ್ ಪೆಕ್ಟರ್ ಭರಮಪ್ಪ ಮಲ್ಲೂರ್ ಮತ್ತು ಪಿಎಸ್ಐ ರೂಪಾ ತಂಬದ್ ಅವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
.