ಮಾಸ್ತಿಗುಡಿ ಚಿತ್ರದ ಸಾಹಸ ನಿರ್ದೇಶಕ ರವಿ ವರ್ಮಾ ಸೇರಿದಂತೆ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2016-11-12 11:54 GMT
ಸಾಹಸ ನಿರ್ದೇಶಕ ರವಿವರ್ಮಾ

ಬೆಂಗಳೂರು, ನ.12: ಹೆಲಿಕಾಪ್ಟರ‍್ ನಿಂದ ಬಿದ್ದು ಮಾಸ್ತಿಗುಡಿ ಚಿತ್ರದ ನಟರಿಬ್ಬರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ  ಸಾಹಸ ನಿರ್ದೇಶಕ ರವಿವರ್ಮಾ, ನಿರ್ದೇಶಕ ನಾಗಶೇಖರ‍್, ಸಹ ನಿರ್ದೇಶಕ ಸಿದ್ದು ಅವರಿಗೆ ಮಾಗಡಿ ಎರಡನೆ ಜೆಎಂಎಫ್ ನ್ಯಾಯಾಲಯ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಸಾಹಸ ನಿರ್ದೇಶಕ ರವಿವರ್ಮಾ, ನಿರ್ದೇಶಕ ನಾಗಶೇಖರ‍್, ಸಹ ನಿರ್ದೇಶಕ ಸಿದ್ದು ಅವರು ಮಾಗಡಿ ಪೊಲೀಸ್‌ ಠಾಣೆಗೆ ಶರಣಾಗಿದ್ದರು.  ದುನಿಯಾ ವಿಜಯಾ ಉಪಸ್ಥಿತಿಯಲ್ಲಿ ಠಾಣೆಗೆ ಇಂದು ಬೆಳಗ್ಗೆ ಮೂವರು ಶರಣಾಗಿದ್ದರು. ಬಳಿಕ ಪೊಲೀಸರು  ಸಾಹಸ ನಿರ್ದೇಶಕ ರವಿವರ್ಮಾ, ನಿರ್ದೇಶಕ ನಾಗಶೇಖರ‍್, ಸಹ ನಿರ್ದೇಶಕ ಸಿದ್ದು ಅವರನ್ನು ಮಾಗಡಿಯ ಎರಡನೆ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶೆ ರೇಖಾ ಅವರು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.

ಮಾಸ್ತಿ ಗುಡಿ ಚಿತ್ರದ ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದು, ಸಾಹಸ ನಿರ್ದೇಶಕ ರವಿವರ್ಮಾ, ಯುನಿಟ್ ಮ್ಯಾನೇಜರ್ ಎಸ್.ಭರತ್ ಹಾಗೂ ಇತರರ ವಿರುದ್ಧ ಐಪಿಸಿ ಸೆಕ್ಷನ್ 304, 188, ಸಹ ಕಲಂ 34ರಡಿ ದೂರು ದಾಖಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News