ಪಿ. ಎ. ರೈ

Update: 2016-11-13 19:01 GMT

 *ಮದ್ಯ ಮಾರಾಟದಿಂದಲೇ ಸರಕಾರ ನಡೆಯುತ್ತಿದೆ ಎಂಬುದು ಸುಳ್ಳು
-ಎಚ್.ವೈ.ಮೇಟಿ, ಸಚಿವ
  ಇನ್ನೂ ಏನೇನೆಲ್ಲ ಮಾರಾಟ ಮಾಡಿ ಸರಕಾರವನ್ನು ನಡೆಸುತ್ತಿದ್ದೀರಿ ಎನ್ನುವುದನ್ನು ಹೇಳಿ.
---------------------
  ಕಾಂಗ್ರೆಸ್ ಕೋಮು ಭಾವನೆ ಸೃಷ್ಟಿಸುವುದಿಲ್ಲ
-ಸತೀಶ್ ಜಾರಕಿಹೊಳಿ, ಮಾಜಿ ಸಚಿವ
  ಬಿಜೆಪಿ ಸೃಷ್ಟಿಸುತ್ತದೆ. ಕಾಂಗ್ರೆಸ್ ಅದನ್ನು ಪೋಷಿಸುತ್ತದೆ.

---------------------
  ಬಿಜೆಪಿ ಮತ್ತು ಅದರ ಕೋಮುವಾದಿ ಶಕ್ತಿಗಳನ್ನು ಮಣಿಸಲು ಎಲ್ಲಾ ಪಕ್ಷಗಳು ಒಂದಾಗಬೇಕು
-ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ
ಐನೂರು, ಒಂದು ಸಾವಿರ ನೋಟುಗಳ ನಿಷೇಧದ ಪರಿಣಾಮ.

--------------------
  ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಮಾಡಿದಷ್ಟು ಕೆಲಸ ಇತರ ಯಾವುದೇ ಪಕ್ಷಗಳು ಮಾಡಿಲ್ಲ
-ರಮಾನಾಥ ರೈ, ಸಚಿವ
ಇಂದಿರಾಗಾಂಧಿ, ಸೋನಿಯಾ ಗಾಂಧಿಯೇ ಅದಕ್ಕೆ ಉದಾಹರಣೆ.

---------------------
  ಹಿಲರಿ ಕ್ಲಿಂಟನ್‌ಗೆ ಇಡೀ ಜಗತ್ತನ್ನು ಕಾಪಾಡುವ ಶಕ್ತಿ ಇದೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
 ನೀವು ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದೇ ಸೋಲಿಗೆ ಕಾರಣ.

---------------------
  ವೇದ ಕಾಲದಿಂದಲೂ ಗೋಹತ್ಯೆ ಮತ್ತು ಗೋಮಾಂಸಗಳನ್ನು ನಿಷೇಧಿಸಲಾಗಿದೆ
-ರಾಜನಾಥ್ ಸಿಂಗ್, ಕೇಂದ್ರ ಸಚಿವ
  ನೀವು ಓದಿರುವ ವೇದದ ಹೆಸರನ್ನಾದರೂ ಹೇಳಬಾರದೇ?
---------------------
  ರಸ್ತೆ ಗುಣಮಟ್ಟಕ್ಕೆ ಗುತ್ತಿಗೆದಾರರೇ ಹೊಣೆ
-ಕೆ.ಜೆ ಜಾರ್ಜ್, ಸಚಿವ
  ಅಯೋಗ್ಯರಿಗೆ ಗುತ್ತಿಗೆ ನೀಡಿದವರೂ ಅರ್ಧ ಹೊಣೆಯನ್ನು ಹೊತ್ತುಕೊಳ್ಳಬೇಕು.

---------------------
  ಸಂಸದೆ ಶೋಭಾ ಕರಂದ್ಲಾಜೆ ಯೋಚನೆ ಮಾಡಿ ಮಾತನಾಡುವುದನ್ನು ಕಲಿಯಬೇಕು
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಯಡಿಯೂರಪ್ಪ ಯೋಚನೆ ಮಾಡುತ್ತಾರೆ. ಕರಂದ್ಲಾಜೆ ಮಾತನಾಡುತ್ತಾರೆ.

---------------------
  ರಾಜ್ಯದಲ್ಲಿ ಯಾರೇ ಸತ್ತರೂ ಆತ ಬಿಜೆಪಿ ಕಾರ್ಯಕರ್ತ ಎಂದು ಬಿಜೆಪಿ ಹೋರಾಟ ನಡೆಸುತ್ತಿರುವುದು ಯಾಕೆ?
-ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
  ಕೊಂದವನು ಮುಸ್ಲಿಮನಾಗುವುದು ಎಲ್ಲಕ್ಕಿಂತ ಮುಖ್ಯ.

---------------------
  ಸಿಧು ಒಬ್ಬ ಕಾಮಿಡಿಯನ್
-ಸುಖಬೀರ್ ಬಾದಲ್, ಪಂಜಾಬ್ ಉಪ ಮುಖ್ಯಮಂತ್ರಿ
ನರೇಂದ್ರ ಮೋದಿಯ ಟ್ರಾಜಿಡಿಗಳಿಗಿಂತ ವಾಸಿ.

---------------------
  ಪ್ರಜಾಪ್ರಭುತ್ವ ಕರಾಳ ದಿನಗಳತ್ತ ಸಾಗುತ್ತಿದೆ
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
  ಒಂದು ದಿನ ಕ್ಯೂ ನಿಂತ ಅನುಭವಕ್ಕೆ ಈ ಮಾತೇ?
---------------------
  ಜೀವನದಲ್ಲಿ ಗೊತ್ತಿಲ್ಲದೆ ಅನೇಕ ರೀತಿಯ ಕೊಳೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಇದೀಗ 500 ಮತ್ತು ಸಾವಿರ ರೂಪಾಯಿಯ ಕೊಳೆಗಳನ್ನು ಶುಚಿಗೊಳಿಸುವ ಕಷ್ಟ ಬಂದಿದೆಯೆ?
---------------------
  ಪ್ಲಾಸ್ಟಿಕ್ ಸೇವಿಸಿದ ಹಸುಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಅದಕ್ಕೆ ಆಹಾರ ಹಾಕದಿದ್ದರೆ ಪಾಪ ಪ್ಲಾಸ್ಟಿಕ್ ತಿನ್ನದೆ ಇನ್ನೇನು ಮಾಡೀತು?
---------------------
  ರಾಜ್ಯದಲ್ಲಿ 14 ಹಿಂದೂ ಮುಖಂಡರ ಹತ್ಯೆಯಾಗಿದ್ದರೂ ಸರಕಾರ ವೌನವಾಗಿರುವುದು ನಮಗೆ ಚಿಂತೆಯಾಗಿದೆ
-ಶೋಭಾ ಕರಂದ್ಲಾಜೆ, ಸಂಸದೆ
  ಕ್ಯೂನಲ್ಲಿ ನಿಂತು ಮೃತಪಟ್ಟವರೆಲ್ಲ ಹಿಂದೂಗಳೇ ಆಗಿದ್ದಾರಲ್ಲ?
 

ಜನತಾ ಪರಿವಾರ ಒಂದುಗೂಡಿದರೆ ಅದು ಸರಕಾರ ಮಾಡಿದಕ್ಕಿಂತ ದೊಡ್ಡ ಸಾಧನೆ
-ಬಸವರಾಜ ಹೊರಟ್ಟಿ, ಎಂಎಲ್ಸಿ
  ಬಳಿಕ ಸಂಘಪರಿವಾರದ ಜೊತೆ ಸೇರಿ ಸರಕಾರ ರಚಿಸುವುದಕ್ಕಾಗಿಯೇ?
---------------------
  ಜ್ಯೋತಿಷಿಯೊಬ್ಬರು ಗ್ರಹಗತಿ ಸರಿಯಿಲ್ಲವೆಂದು ಉಂಗುರ ತೊಡಲಿಕ್ಕೆ ಹೇಳಿದ್ದಕ್ಕಾಗಿ ಚಿನ್ನದುಂಗುರ ತೊಟ್ಟಿದ್ದೇನೆ
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಆಕಾಶದಲ್ಲಿರುವ ಗ್ರಹಗಳೆಲ್ಲ ಈಗ ದಿಕ್ಕು ಬದಲಿಸಿ ಸುತ್ತ ತೊಡಗಿದೆಯಂತೆ.

---------------------
  ಇಸ್ಲಾಂ ಧರ್ಮದಲ್ಲಿ ಜನ್ಮದಿನ ಆಚರಿಸುವಂತಹ ಪದ್ಧತಿ ಇಲ್ಲ
-ನಳಿನ್ ಕುಮಾರ್ ಕಟೀಲು, ಸಂಸದ
  ಹಾಗೆಂದು ದೇಶ ಗಾಂಧಿ ಜಯಂತಿಯನ್ನು ಆಚರಿಸುತ್ತಿಲ್ಲವೆ?
---------------------
ಕೊಲೆ, ಅತ್ಯಾಚಾರಗಳಂತಹ ಘಟನೆ ಮುಖ್ಯಮಂತ್ರಿಯವರ ಕುಟುಂಬದಲ್ಲಿ ನಡೆದರೆ ಅವರು ಸುಮ್ಮನಿರುತ್ತಿದ್ದರೇ? -ಕೆ.ಎಸ್.ಈಶ್ವರಪ್ಪ, ವಿ.ಪ.ಪ್ರ.ಪ.ನಾಯಕ
  ನಿಮ್ಮ ಕುಟುಂಬದಲ್ಲಿ ಯಾರ ಕೊಲೆ ನಡೆದಿದೆ? ಯಾರ ಮೇಲೆ ಅತ್ಯಾಚಾರ ನಡೆದಿದೆ?
---------------------
  ಭಯೋತ್ಪಾದನೆ ನಿಗ್ರಹಿಸಲೆಂದೇ 500, 1000ರೂ. ನೋಟುಗಳನ್ನು ರದ್ದು ಪಡಿಸಲಾಗಿದೆ
-ಬಾಬಾ ರಾಮ್‌ದೇವ್, ಯೋಗಗುರು
  ನಕಲಿ ಬಾಬಾಗಳಿರುವವರೆಗೆ ನಕಲಿ ಹಣವನ್ನು ತಡೆಯುವುದು ಕಷ್ಟ ಸಾಧ್ಯ.

---------------------
  ನಾನೂ 100ರೂ. ನೋಟಿಗಾಗಿ ಮನೆಯಲ್ಲಿ ಹುಡುಕುತ್ತಿದ್ದೇನೆ
-ಡಿ.ಕೆ.ಶಿವಕುಮಾರ್, ಸಚಿವ
ಬರೇ ಸಾವಿರ ರೂಪಾಯಿ ನೋಟುಗಳಷ್ಟೇ ಗುಡ್ಡೆ ಬಿದ್ದಿರಬೇಕು.

---------------------
  ವಿರೋಧಕ್ಕೆ ಹೆದರಿದರೆ ಸರಕಾರ ನಡೆಸಲು ಸಾಧ್ಯವಿಲ್ಲ
-ಕೆ.ಜೆ.ಜಾರ್ಜ್, ಸಚಿವ
  
ಜನರ ವಿರೋಧಕ್ಕೆ ಹೆದರದೇ ಸರಕಾರ ನಡೆಸುವುದು ಸಾಧ್ಯವಿಲ್ಲ.

---------------------
  ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಾಮೈತ್ರಿಯ ಪ್ರಶ್ನೆಯೇ ಇಲ್ಲ
-ಮುಲಾಯಂ ಸಿಂಗ್ ಯಾದವ್, ಎಸ್ಪಿ ಅಧ್ಯಕ್ಷ

ಯಾರೂ ತಮ್ಮ ಪಕ್ಷದ ಜೊತೆಗೆ ಮೈತ್ರಿಗೆ ಸಿದ್ಧವಿಲ್ಲವೆಂದು 
  

Writer - ಪಿ. ಎ. ರೈ

contributor

Editor - ಪಿ. ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...