ನುಡಿ ಜಾತ್ರೆಯಲ್ಲಿ ಕಿಟ್ ಸಿಗದ ಸರಕಾರಿ ನೌಕರರ ಪ್ರತಿಭಟನೆ
Update: 2016-12-03 06:05 GMT
ರಾಯಚೂರು, ಡಿ.3: ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಶುಕ್ರವಾರ ಆರಂಭಗೊಂಡ 82ನೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಿಟ್ ಸಿಗದಕ್ಕೆ ಚಿತ್ರದುರ್ಗ ಜಿಲ್ಲೆಯ ಸರಕಾರಿ ನೌಕರರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಇಂದು ಬೆಳಗ್ಗೆ ಸರಕಾರಿ ನೌಕರರು ವೇದಿಕೆಯ ಬಳಿ ಪ್ರತಿಭಟನೆ ನಡೆಸಿ ಕಿಟ್ಗಾಗಿ ಒತ್ತಾಯಿಸಿದ ರೆನ್ನಲಾಗಿದೆ. ಈ ಹಂತದಲ್ಲಿ ಆಯೋಜಕರು ಮತ್ತು ಸರಕಾರಿ ನೌಕರರ ನಡುವೆ ಮಾತಿನ ಚಕಮಕಿ ನಡೆಯಿತೆಂದು ತಿಳಿದು ಬಂದಿದೆ.