ರಾಮನಗರ: ಚಲಿಸುತ್ತಿದ್ದ ಬಸ್‌ಗೆ ಬೆಂಕಿ

Update: 2016-12-03 09:10 GMT

ರಾಮನಗರ, ಡಿ.3: ಚನ್ನಪಟ್ಟಣ ತಾಲೂಕಿನ ಮುದಗೆರೆ ಬಳಿ ಶಾಲಾ ಮಕ್ಕಳ ಪ್ರವಾಸ ಹೊರಟಿದ್ದ ಬಿಎಂಟಿಸಿ ಬಸ್ಸೊಂದು  ಹೊತ್ತಿ ಉರಿದ ಘಟನೆ ಇಂದು  ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.  
ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನ ಬಿಎಂಎಲ್ ಶಾಲೆಯ ವಿದ್ಯಾರ್ಥಿಗಳು   ಮೈಸೂರಿಗೆ ಬಸ್‌ನಲ್ಲಿ ಪ್ರವಾಸ ಹೋಗುತ್ತಿದ್ದ ವೇಳೆ  ಈ ದುರಂತ ಸಂಭವಿಸಿದೆ. ಬಸ್‌ ಮುದಗೆರೆ ತಲುಪುವ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್‌ ಸಂಪೂರ್ಣ ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ. ಬೆಂಕಿಗಾವುತಿಯಾದ  ಬಸ್‌ನಲ್ಲಿ ಸುಮಾರು 52 ಹೈಸ್ಕೂಲ್‌ ವಿದ್ಯಾರ್ಥಿಗಳಿದ್ದರು ಎಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News