ನೋಟು ರದ್ದತಿ ಅವಾಂತರಕ್ಕೆ ಕನ್ನಡಿ ಹಿಡಿದ ತನ್ಮಯ್ ಭಟ್ ವೈರಲ್ ವೀಡಿಯೊ

Update: 2016-12-05 17:03 GMT

ಹಾಸ್ಯದ ಮೂಲಕ ಗಂಭೀರ ವಿಷಯಗಳನ್ನು ವಿಮರ್ಶೆ ಮಾಡುವ ಎಐಬಿಯ ತನ್ಮಯ್ ಭಟ್ ಅವರು ಇದೀಗ ನೋಟು ರದ್ದತಿ ಬಳಿಕದ ಪರಿಣಾಮಗಳ ಕುರಿತು ಒಂದು ವೀಡಿಯೊ ಬಿಡುಗಡೆ ಮಾಡಿದ್ದಾರೆ.  ಹೆಸರಿಗೆ ಇದು ಹಾಸ್ಯ ವಿಡಿಯೊ ಆಗಿದ್ದರೂ ನೋಟು ರದ್ದತಿ ಹಾಗೂ ಸಮಾಜದ ಜನಸಾಮಾನ್ಯರ ಮೇಲೆ ಅದರ ಪರಿಣಾಮಗಳ ಬಗ್ಗೆ ಚಿಂತನೆಗೆ ಹಚ್ಚುವ ವೀಡಿಯೊ ಇದು.

ಸರಕಾರದ ನಿರ್ಧಾರವನ್ನು ಕುರುಡಾಗಿ ಸಮರ್ಥಿಸಿಕೊಳ್ಳುವ ಉಳ್ಳವರು, ದೇಶಭಕ್ತಿಯ ಹೆಸರಲ್ಲಿ ಬಡವರ ಶೋಷಣೆ, ಸೈನಿಕರ ಹೆಸರಲ್ಲಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವುದು ಇತ್ಯಾದಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ತನ್ಮಯ್ ಭಟ್.

ಕೇವಲ ಎರಡು ದಿನಗಳೊಳಗೆ ಈ ವೀಡಿಯೋ ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. 

ಇದು ಕಣ್ಣು ತೆರೆಸುವ ವೀಡಿಯೊ. ನೋಡಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor