ಓ ಮೆಣಸೇ...

Update: 2016-12-25 18:39 GMT

  *ನೋಟು ಅಮಾನ್ಯಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ.

- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  
ಮತ್ತು ದೇಶದ ಉಳಿದೆಲ್ಲೆಡೆ ಅಶಾಂತಿ ಸ್ಫೋಟಗೊಂಡಿದೆ.

---------------------  

ವೈ.ಎಸ್.ಮೇಟಿ ರಾಸಲೀಲೆ ಪ್ರಕರಣ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ.

- ಶೋಭಾ ಕರಂದ್ಲಾಜೆ, ಸಂಸದೆ
  
ಬಹುಶಃ ತಮ್ಮ ಹಳೆಯದು ನೆನಪಾಗಿ ಬಿಜೆಪಿಯ ನಾಯಕರು ನಾಚಿ ತಲೆತಗ್ಗಿಸಿರಬೇಕು.

---------------------

ಸಿದ್ದರಾಮಯ್ಯ ಸದ್ದಾಂ ಹುಸೈನ್ ಆಡಳಿತ ಜಾರಿ ಮಾಡುತ್ತಿದ್ದಾರೆ.

- ನಳಿನ್ ಕುಮಾರ್ ಕಟೀಲು, ಸಂಸದ
  
ರಾಸಾಯನಿಕ ಅಸ್ತ್ರ ಬಚ್ಚಿಟ್ಟಿದ್ದಾರೆ ಎಂಬ ಆರೋಪ ಒಂದು ಬಾಕಿ ಇದೆ.

---------------------
  

ದೇಶಕ್ಕೆ ಕೊಡುಗೆ ನೀಡುವುದೇ ನಿಜವಾದ ದೇಶಪ್ರೇಮ.

- ಯು.ಟಿ.ಖಾದರ್, ಸಚಿವ

ಹೋಗಿ ಎಟಿಎಂ ಮುಂದೆ ಕ್ಯೂ ನಿಂತರಾಯಿತು. 

--------------------

  ಸಿದ್ದು ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ.
 
  -ಜಗದೀಶ್ ಶೆಟ್ಟರ್, ವಿ.ಸಭೆ, ವಿ.ನಾಯಕ

ಅಂದರೆ ಮುಂದಿನ ಎಲ್ಲ ಸಾಲಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ?
---------------------

 ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪ್ರಹ್ಲಾದ್ ಜೋಷಿ ಬ್ರಾಹ್ಮಣರ ಹಾಗೂ ಯಡಿಯೂರಪ್ಪ ಲಿಂಗಾಯತರ ಸಮಾವೇಶ ಮಾಡಬಹುದು. ಆದರೆ ನಾನೇಕೆ ‘ಹಿಂದ’ ಸಮಾವೇಶ ಮಾಡಬಾರದು.

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  
ಯಾಕೆಂದರೆ, ಅವರು ಬ್ರಾಹ್ಮಣರು. ನೀವು ಕುರುಬರು. ಅದಕ್ಕೆ.

---------------------

ಪುತ್ರ ಕುಮಾರಸ್ವಾಮಿಯನ್ನು ಸಿಎಂ ಮಾಡುವ ಉದ್ದೇಶವಿಲ್ಲ.

- ದೇವೇಗೌಡ,ಮಾಜಿ ಪ್ರಧಾನಿ
  ಜನರಿಗೂ ಇದ್ದಂತಿಲ್ಲ.
---------------------

  ಕೆಲವೊಂದು ವಿಕೃತಿಯಲ್ಲೇ ನಾವು ಆನಂದ ಪಡುತ್ತಿದ್ದೇವೆ.
 - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
  
ಹೌದು. ನಿಮ್ಮ ಆನಂದಕ್ಕಾಗಿ ಹಲವರ ಬದುಕು ನುಚ್ಚು ನೂರಾಗಿರುವುದು ದುಃಖದ ಸಂಗತಿ.

---------------------
 
ರಾಜ್ಯದ ಅಥವಾ ದೇಶದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಸ್ವರ್ಗ.

- ಯು.ಟಿ.ಖಾದರ್, ಸಚಿವ
  
ಸಂಘಪರಿವಾರದ ಪಾಲಿನ ಸ್ವರ್ಗ.

---------------------

ನೋಟು ಅಮಾನ್ಯ ನಿರ್ಧಾರವನ್ನು ಇಡೀ ದೇಶದ ಹಿತದೃಷ್ಟಿಯಿಂದ ಮಾಡಲಾಗಿದೆ.

- ರಾಜನಾಥ್‌ಸಿಂಗ್, ಕೇಂದ್ರ ಸಚಿವ
  
ದೃಷ್ಟಿ ದೋಷ ಹೊಂದಿದವರ ಮಾತು.

---------------------

ಬಿಜೆಪಿ ಆಳ್ವಿಕೆಯಡಿ ಬದುಕಲು ದಲಿತ ಸಮುದಾಯದ ಜನ ಹೆದರುತ್ತಿದ್ದಾರೆ.

- ಅಶೋಕ್ ಗೆಹ್ಲೋಟ್,ರಾಜಸ್ಥಾನ ಮಾಜಿ ಸಿಎಂ
  
ಕಾಂಗ್ರೆಸ್‌ನವರು ಬಿಜೆಪಿಗೆ ಹೆದರಿ ಪಕ್ಷವನ್ನೇ ತೊರೆಯುತ್ತಿರುವ ಸುದ್ದಿಯಿದೆ.

---------------------

  ಡಿ.30 ರ ನಂತರ ನೋಟಿನ ಸಮಸ್ಯೆ ಇರದು.

- ಅರುಣ್ ಜೇಟ್ಲಿ, ಕೇಂದ್ರ ಸಚಿವ
  ರಾಜಕೀಯ ಪಕ್ಷಗಳಿಗೆ ಸಮಸ್ಯೆ ಇಲ್ಲ ಬಿಡಿ, ಜನಸಾಮಾನ್ಯರ ಕತೆ ಏನು?
---------------------

  ಮೋದಿ ಗಂಗೆಯಷ್ಟೇ ಪವಿತ್ರ.
-ರವಿಶಂಕರ್ ಪ್ರಸಾದ್,ಕೇಂದ್ರ ಸಚಿವ
  ಮೋದಿಯ ಶುಚಿತ್ವಕ್ಕೆ ಇನ್ನೆಷ್ಟು ಕೋಟಿ ಸುರಿಯಬೇಕು?
---------------------

  ಇಂದು ಪ್ರಶಸ್ತಿಗಾಗಿ ಒತ್ತಡಗಳು ಹೆಚ್ಚುತ್ತಿವೆ
- ಉಮಾಶ್ರೀ, ಸಚಿವೆ
  ನಟಿಯಾಗಿದ್ದಾಗ ತಾವು ಹಾಕಿದ ಒತ್ತಡಗಳು ಕಡಿಮೆಯೇ?
---------------------

 ಅಲ್ಪಸಂಖ್ಯಾತರಲ್ಲಿ ಬಹಳಷ್ಟು ಜನ ಬಿಜೆಪಿ ಪರವಾಗಿದ್ದಾರೆ.

- ಎಸ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ
ದಲಿತರೇನು ಕಡಿಮೆ ಸಂಖ್ಯೆಯಲ್ಲಿದ್ದಾರೆಯೇ? ಶೋಷಿತರು ಶೋಷಕನನ್ನು ಹುಡುಕಿಕೊಂಡು ಹೋಗುವುದು ಇಂದು ನಿನ್ನೆಯ ವ್ಯಥೆಯೇನೂ ಅಲ್ಲ.
---------------------

ನಾನು ಯಡಿಯೂರಪ್ಪ ಅಭಿಮಾನಿ.

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ಹಾಗಾದರೆ ಯಡಿಯೂರಪ್ಪ ಹೆಸರಲ್ಲೇ ಬ್ರಿಗೇಡ್ ಕಟ್ಟಬಾರದೇ?
---------------------

  ಮೋದಿ ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ಪ್ರಥಮ ಪ್ರಧಾನಿ.
 - ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
  ಅಸೂಯೆಯೇ?
---------------------

ದರ ನಿಯಂತ್ರಣ ಮೀರಿ ಬಿಟ್ಟಿರುವುದರಿಂದ ಪಣಜಿಯಲ್ಲಿ ಒಂದು ಫ್ಲಾಟ್ ಕೊಳ್ಳಲು ನನ್ನಿಂದ ಸಾಧ್ಯವೇ ಆಗುತ್ತಿಲ್ಲ.

- ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
  ಛೆ, ಫ್ಲಾಟ್ ಇಲ್ಲದೆ ಸದ್ಯಕ್ಕೆ ಬೀದಿಯಲ್ಲೇ ಮಲಗುತ್ತಿರಬೇಕಲ್ಲ ತಾವು?
---------------------

  ನನ್ನ ರಕ್ತದಲ್ಲಿ ಇರುವ ಕಾಂಗ್ರೆಸನ್ನು ಕಿತ್ತೆಸೆಯಲು ಯಾರಿಂದಲೂ ಸಾಧ್ಯವಿಲ್ಲ.

- ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ
  ಡಯಾಲಿಸಿಸ್ ಮಾಡಿದರೆ ಹೇಗೆ?
---------------------

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮೂಢ ನಂಬಿಕೆ ನಿಷೇಧಿಸುವ ಧೈರ್ಯ ಇಲ್ಲ.

- ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  
ಮೊದಲು ನೀವು ಬೆದರಿಕೆ ಹಾಕುವುದನ್ನು ನಿಲ್ಲಿಸಿ.

---------------------

  ಜನರ ಬಳಿ ಹೋಗಿ ಜೆಡಿಎಸ್ ಉಳಿಸಿ ಎಂದು ಭಿಕ್ಷೆ ಬೇಡುತ್ತೇನೆ

- ದೇವೇಗೌಡ, ಮಾಜಿ ಪ್ರಧಾನಿ
  
ಈ ಹಿಂದೆ ಸನ್ಯಾಸಿಯ ವೇಷದಲ್ಲಿ ರಾವಣ ಭಿಕ್ಷೆ ಕೇಳಿ ಮಾಡಿದ್ದೇನು ಎನ್ನುವುದು ನಾಡಿನ ಜನತೆಗೆ ಇನ್ನೂ ನೆನಪಿದೆ.

---------------------

  ಯಡಿಯೂರಪ್ಪ ಭವಿಷ್ಯ ಹೇಳುವುದರಲ್ಲಿ ನಿಸ್ಸೀಮರು.
 - ಕಾಗೋಡು ತಿಮ್ಮಪ್ಪ, ಸಚಿವ
  
ಅವರು ಹೇಳಿದ ಭವಿಷ್ಯದಂತೆ ನೀವು ಸಚಿವರಾಗಿದ್ದಿರಬೇಕು.

---------------------

  ನಾವು ಬೇರೆಯಲ್ಲ, ನಮ್ಮ ವ್ಯಕ್ತಿತ್ವ ಬೇರೆಯಲ್ಲ.

- ಬಾಬಾ ರಾಮ್‌ದೇವ್, ಯೋಗಗುರು.
 ಅವೆರಡೂ ನಿಮ್ಮ ಪತಂಜಲಿ ಔಷಧಿಯ ಹಾಗೆ, ನಕಲಿ.

Writer - ಓ ಮೆಣಸೇ...

contributor

Editor - ಓ ಮೆಣಸೇ...

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!