×
Ad

​ಸಾಲಬಾಧೆ: ಗುಡಿಸಲಿಗೆ ಬೆಂಕಿ ಹಚ್ಚಿ ಸಜೀವ ದಹನಗೊಂಡ ರೈತ

Update: 2016-12-26 23:01 IST

ಕಡೂರು, ಡಿ.26: ಸಾಲಬಾಧೆಯಿಂದ ರೈತನೋರ್ವ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಸಜೀವ ದಹನಗೊಂಡ ಘಟನೆ ಮಾಚಗೊಂಡನಹಳ್ಳಿ ಎಂಬಲ್ಲಿ ನಡೆದಿದೆ.
ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯ ಈರಪ್ಪ(68)ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.


 ತಮ್ಮ ಪುತ್ರ ಎಂ.ಇ. ಈಶ್ವರಪ್ಪರೊಂದಿಗೆ ಡಿ.ಕಾರೇಹಳ್ಳಿ ಗ್ರಾಮದ ಸ.ನಂ.101 ರಲ್ಲಿ ಹಾಗೂ ಇತರ ಜಮೀನಿನಲ್ಲಿ 5 ಬೋರ್‌ವೆಲ್‌ಗಳನ್ನು ಕೊರೆಸಲು 1,80,000 ರೂ. ಸಾಲವನ್ನು ಮಾಡಿದ್ದರು.
  ಕೇವಲ ಒಂದು ಬೋರ್‌ವೆಲ್‌ನಲ್ಲಿ ನೀರು ಬಂದಿದ್ದು, ಉಳಿದ 4 ಬೋರ್‌ವೆಲ್‌ನಲ್ಲಿ ನೀರು ಬಾರದ ಕಾರಣ ಜಮೀನಿಗೆ ಹಾಕಿದ್ದ ಕಲ್ಲಂಗಡಿ ಹಾಗೂ ಟೊಮಟೊ ಬೆಳೆ ಒಣಗಿ ಹೋಗಿವೆ. ಇದರಿಂದ ಮನನೊಂದು ಈರಪ್ಪಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ.


ಈ ಬಗ್ಗೆ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News