×
Ad

ಮೇಟಿ ರಾಸಲೀಲೆ ಪ್ರಕರಣ : ಆಕ್ಷೇಪಣಾ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ ಸಿಐಡಿ ತಂಡ

Update: 2016-12-28 18:12 IST

ಬೆಂಗಳೂರು, ಡಿ. 28 : ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ  ಮೇಟಿ ವಿರುದ್ದ ಆರೋಪ ಮಾಡುವಂತೆ ಸಂತ್ರಸ್ಥ ಮಹಿಳೆಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು , ಅದರ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಲು ಸಿಐಡಿ ತಂಡ ಕಾಲಾವಕಾಶ ಕೋರಿದೆ.

ಆರೋಪಿಗಳ  ನಿರೀಕ್ಷಣಾ ಜಾಮೀನು ಅರ್ಜಿಗೆ  ಆಕ್ಷೇಪಣೆ ,ತಕರಾರು ಇದ್ದರೆ ಅರ್ಜಿ ಸಲ್ಲಿಸಲು ಬಾಗಲಕೋಟೆ ಜಿಲ್ಲಾ ನ್ಯಾಯಾಲಯ  ಸಿಐಡಿ ಗೆ ಸೂಚಿಸಿತ್ತು . ಅದರಂತೆ  ಸಿಐಡಿ ಡಿವೈ ಎಸ್ ಪಿ ರವಿಶಂಕರ್ ನೇತೃತ್ವದ ತಂಡ ವು ಜ.4 , 2017ರವರೆಗೆ ಕಾಲಾವಕಾಶ ಕೋರಿದೆ.

ಇದು ಸಂತ್ರಸ್ಥ ಮಹಿಳೆಯು  ನವನಗರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 17, 2016 ರಲ್ಲಿ  ದಾಖಲಿಸಿದ್ದ ದೂರು ಪ್ರಕರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News