​ಚಿರತೆ ಚರ್ಮ ವಶ: ಆರೋಪಿ ಬಂಧನ

Update: 2017-01-05 17:37 GMT

ತರೀಕೆರೆ,ಜ.5: ಬುಧವಾರ ಪಟ್ಟಣದ ತುದಿಪೇಟೆ ಮತ್ತು ದುಗ್ಲಾಪುರ ಮಾರ್ಗ ಮಧ್ಯದ ಎಸ್‌ಎನ್‌ಆರ್ ಬಡಾವಣೆಯ ಬಳಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಸೈ ನಂದಿನಿ ನೇತೃತ್ವದ ತಂಡ ದಾಳಿ ನಡೆಸಿ ಚಿರತೆ ಚರ್ಮ ಮತ್ತು ಆರೋಪಿ ಇಂದಿರಾ ನಗರದ ನಿವಾಸಿ ಟಿ.ಆರ್.ನಾಗರಾಜ್ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.


ಉಳಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಸುರೇಶ ಮತ್ತು ರವಿ ಪರಾರಿಯಾಗಿದ್ದಾರೆ. ಈ ವೇಳೆ ಆರೋಪಿಯಿಂದ ಚಿರತೆ ಚರ್ಮ ಮತ್ತು ಕೃತ್ಯಕ್ಕಾಗಿ ಬಳಸಲಾಗಿರುವ ಮೋಟಾರ್ ಬೈಕನ್ನು ವಶಕ್ಕೆ ಪಡೆದು ತಲೆಮರೆಸಿ ಕೊಂಡವರ ಶೋಧ ಕಾರ್ಯ ಚುರುಕು ಗೊಳಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ತರೀಕೆರೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಕುಮಾರ, ಪೂರ್ಣೇಶ, ದಶರಥ,ಚಂದ್ರೇಗೌಡ, ರಂಗಯ್ಯ ಮತ್ತು ಕೃಷ್ಣರಾಜ ಅರಸ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News