ಜಿಂಕೆಯನ್ನು ಕೊಂದ ಆರೋಪಿ ಅರಣ್ಯ ಇಲಾಖೆ ಬಲೆಗೆ

Update: 2017-01-07 09:26 GMT

ಮುಂಡಗೋಡ, ಜ.7: ಜಿಂಕೆಯನ್ನು ಕೊಂದು ಸಾಗಿಸಲೆತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ತಾಲೂಕಿನ ನಂದಿಗಟ್ಟಾ ಅರಣ್ಯದಲ್ಲಿ ಇಂದು ಮುಂಜಾವ ನಡೆದಿದೆ.

ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಅರಣ್ಯಪಾಲಕರು, ಉಗ್ಗಿನಕೇರಿ ನಿವಾಸಿ ಕೇಶವ ಯಶವಂತ ತಾಂಬೆ(35) ಎಂಬಾತನನ್ನು ಬಂಧಿಸಿದ್ದಾರೆ. ಈತನ ಜೊತೆಗಿದ್ದ ಇನ್ನೋರ್ವ ಆರೋಪಿ ಹಸನ್ ಸಾಬ ಹುಸೈನ್ ಸಾಬ ಮುಲ್ಲಾ(35) ಎಂಬಾತ ಪರಾರಿಯಾಗಿದ್ದಾನೆ.

ಬಂಧಿತ ಆರೋಪಿಯಿಂದ ಜಿಂಕೆಯ ಶವ, ಬಂದೂಕು, ಕಾಡತೋಸು, ಚಾಕು, ಬ್ಯಾಟರಿ ಯನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದ ಆರೋಪಿಯನ್ನು ಬಂದಿಸಲು ಜಾಲ ಬೀಸಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ

ಅರಣ್ಯಾಧಿಕಾರಿ ಈರೇಶ ಕಬ್ಬಿನ ಮಾರ್ಗದರ್ಶನದಲ್ಲಿ ಇಂಧೂರ ಸೆಕ್ಷನ್ ಫಾರೆಸ್ಟರ್ ಬಸವರಾಜ ಪೂಜಾರ, ಗಾರ್ಡ್ ನಿಂಗಪ್ಪ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News