ವ್ಯಕ್ತಿ ನಾಪತ್ತೆ

Update: 2017-01-08 18:07 GMT

ಚಿಕ್ಕಮಗಳೂರು, ಜ.8: ಚಿಕ್ಕಮಗಳೂರು ತಾಲೂಕು, ಪೆನ್‌ಷನ್‌ಮೊಹಲ್ಲಾ, 3ನೆ ಕ್ರಾಸ್ ನಿವಾಸಿ ಸಂತೋಷ್ ಸಿ.ಆರ್.(36) ನಾಪತ್ತೆಯಾಗಿರುವ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ಇತ್ತೀಚೆಗೆ ಹೆಂಡತಿಯೊಂದಿಗೆ ಜಗಳವಾಡಿ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ. ಗೋಧಿ ಮೈ ಬಣ್ಣ, ದೃಢಕಾಯ ಶರೀರ, ಕಪ್ಪುತಲೆಗೂದಲು, ಕನ್ನಡ ಭಾಷೆ ಮಾತನಾಡುವವರಾಗಿದ್ದಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ 100, ದೂ.ಸಂ.08262-235608 ಮತ್ತು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News