​ ಆಕಸ್ಮಿಕ ಬೆಂಕಿ: ಲಕ್ಷ ರೂ. ವೌಲ್ಯದ ಭತ್ತ ಸಹಿತ ಹುಲ್ಲು ಬಣವೆ ಭಸ್ಮ

Update: 2017-01-11 17:51 GMT

ತರೀಕೆರೆ, ಜ.11: ಬೆಂಕಿ ಆಕಸ್ಮಿಕದಿಂದಾಗಿ ತರೀಕೆರೆ ತಾಲೂಕಿನ ಎ.ರಂಗಾಪುರದ ಸ.ನಂ.145 ರಲ್ಲಿ ಎ.ಪ್ರಹ್ಲಾದ್ ಬಿನ್ ಕರಿಯಪ್ಪಎಂಬವರ ಸುಪಾರತ್ತಿನಲ್ಲಿರುವ ಜಮೀನಿನಲ್ಲಿ ಸುಮಾರು 1 ಲಕ್ಷ ರೂ. ವೌಲ್ಯದ ಭತ್ತದ ತೆನೆಯಿರುವ ಹುಲ್ಲು ಸುಟ್ಟು ಕರಕಲಾದ ಘಟನೆ ನಡೆದಿದೆ.
ಗ್ರಾಮದ ಜನರು, ತರೀಕೆರೆಯ ಅಗ್ನಿ ಶಾಮಕ ದಳ ತಕ್ಷಣ ಬಂದು ಬೆಂಕಿಯನ್ನು ಆರಿಸಿದರಾದರೂ ಹುಲ್ಲು ಬವಣೆ ಬಹುತೇಕ ಸುಟ್ಟು ಕರಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ಸರಕಾರದಿಂದ ಪರಿಹಾರಕ್ಕೆ ರೈತ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News