ಬಿಬಿಎಂಪಿ ಆರ್ ಐ ಅನುಮಾನಾಸ್ಪದ ಸಾವು

Update: 2017-01-17 06:49 GMT

ಬೆಂಗಳೂರು, ಜ.17: ಬೆಂಗಳೂರಿನಲ್ಲಿ ಬಿಬಿಎಂಪಿ ರೆವಿನ್ಯೂ ಇನ್ಸ್‌‌‌ಪೆಕ್ಟರ್   ಶ್ರೀನಿವಾಸ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ

ಸೋಮವಾರ  ಸಂಜೆ ಐದು ಗಂಟೆ ಹೊತ್ತಿಗೆ  ಶ್ರೀನಗರದಲ್ಲಿರುವ ತಾವು ವಾಸವಿದ್ದ ಮನೆಯಲ್ಲಿ ಶ್ರೀನಿವಾಸ್ ಸಾವಿಗೀಡಾಗಿದ್ದಾರೆ.
 ವರ್ಗಾವಣೆಯಿಂದ ಬೇಸತ್ತು ಶ್ರೀನಿವಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.  ಜೆಪಿ ನಗರ ವಾರ್ಡ್ ಗೆ ಒಂದು ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿದ್ದ ಶ್ರೀನಿವಾಸ್ ಕಳೆದ 15 ದಿನಗಳಿಂದ ಕೆಲಸಕ್ಕೆ ಹಾಜರಾಗಿರಲಿಲ್ಲ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News