ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಹಳಬರು ಮೂಲೆಗುಂಪಾಗಿದ್ದಾರೆ : ಕೆ.ಎಸ್ ಈಶ್ವರಪ್ಪ

Update: 2017-01-18 12:04 GMT

ತುಮಕೂರು , ಜ.18 : ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಹಳಬರು ಮೂಲೆಗುಂಪಾಗಿದ್ದಾರೆ ಎಂದು ಬಿಜೆಪಿಯ ನಾಯಕ  ಕೆ.ಎಸ್ ಈಶ್ವರಪ್ಪ ಹೇಳುವ ಮೂಲಕ ತನ್ನ ಪಟ್ಟನ್ನು ಬಿಗಿಗೊಳಿಸಿದ್ದಾರೆ.

ತುಮಕೂರಿನಲ್ಲಿ ಸಭೆಯ ಬಳಿಕ ಸುದ್ದಿಗಾರರೋದಿಗೆ ಮಾತನಾಡಿದ ಅವರು , ಯಡಿಯೂರಪ್ಪನವರು ಹೊಸಬರಿಗೆ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ಅವರಿಗೆ ಪಕ್ಷದ ಹಿರಿಯ ನಾಯಕರ ಪರಿಚಯವಿಲ್ಲ. ಕೆಲವು ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಬದಲಾವಣೆಯಾಗಬೇಕು. ಅಭಿಪ್ರಾಯ ಹೇಳಿದರೆ ಅಮಿತ್ ಷಾ ಬಳಿ ಹೋಗಿ ಎಂದು ಯಡಿಯೂರಪ್ಪ ಹೇಳಬಾರದು ಎಂದು ಹೇಳಿದರು.

ಜ.26 ರಂದು ರಾಯಣ್ಣ ಬಲಿದಾನ ದಿನಾಚರಣೆ ಆಚರಿಸುತ್ತೇವೆ . ಸುಮಾರು 2 ಲಕ್ಷ ಜನ ಸೇರಲಿದ್ದಾರೆ, ಹಲವು ಮಠಾಧೀಶರು ಭಾಗವಹಿಸುತ್ತಿದ್ದಾರೆ

ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News