ಹಂದಿ ದಾಳಿ: ಮೂವರಿಗೆ ಗಾಯ

Update: 2017-01-18 17:40 GMT

ದಾವಣಗೆರೆ, ಜ.18: ಹಂದಿಗಳ ನಿಯಂತ್ರಣಕ್ಕೆ ಪಾಲಿಕೆವಿಫಲವಾರುವ ಮಧ್ಯೆಯೇ ಬುಧವಾರ ಸಂಜೆ ಹಂದಿಯೊಂದು ಇಬ್ಬರು ಹೆಣ್ಣು ಮಕ್ಕಳುಸೇರಿದಂತೆ ಮೂವರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿರುವಘಟನೆನಿಟುವಳ್ಳಿಯ ಇಎಸ್‌ಐ ಆಸ್ಪತ್ರೆ ಬಳಿಯ ಸರಕಾರಿ ಶಾಲೆ ಮುಂಭಾಗದಲ್ಲಿ ನಡೆದಿದೆ.


ರಸ್ತೆ ಪಕ್ಕದಲ್ಲಿಯೇ ಬೀಡುಬಿಟ್ಟಿದ್ದ ಈ ಹಂದಿ, ಬುಧವಾರ ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ಬಾಲಕಿಯರು ಮತ್ತು ಓರ್ವ ಬಾಲಕನ ಮೇಲೆ ಎರಗಿ ಮೂವರನ್ನೂ ಕಚ್ಚಿದೆ.


ಬಳಿಕ ಗಾಯಾಳು ಮಕ್ಕಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಮಾಯಿಸಿದ ಗಾಯಾಳುಗಳ ಪೋಷಕರು ಮತ್ತು ನಾಗರಿಕರು ಮಹಾನಗರ ಪಾಲಿಕೆಯ ಕಾರ್ಯವೈಖರಿ ವಿರುದ್ಧ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News