ಜೂಜಾಟ: 4 ಮಂದಿ ವಶ
Update: 2017-01-24 23:09 IST
ಮುಂಡಗೋಡ,ಜ.24: ಅಂದರ್-ಬಾಹರ್ ಆಡುತ್ತಿದ ವರನ್ನು ಬಂಧಿಸಿ ಬಂಧಿತರಿಂದ ಹಣ,ಆಟಕ್ಕೆ ಬಳಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಇಂದೂರ ಗ್ರಾಮದ ಕಲ್ಲಿನಕೊರೆ ಹತ್ತಿರ ಸಂಭವಿಸಿದೆ.
ಬಂಧಿತರನ್ನು ಇಂದೂರ ಪಂಚಾಯತ್ ವ್ಯಾಪ್ತಿಯ ಲಾಲ ಬಾದ್ಷಾ ಸೈಯದ್, ಇಮಾಮ ಸಾಬ ಸೈಯದ್, ಶರೀಫ್ ಸಾಬ ಇಂದೂರ ಹಾಗೂ ಸಿದ್ದಪ್ಪ ಗಲಿಬಿ ಎಂದು ತಿಳಿದುಬಂದಿದೆ.
ಬಂಧಿತರಿಂದ 3,150 ರೂ. ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.