ದಿಡ್ಡಳ್ಳಿ ನಿರಾಶ್ರಿತರಿಗೆ ಲಾಟರಿ ಮೂಲಕ ಜಾಗ ನೀಡಲು ಕ್ರಮ: ಸಚಿವ ಎಂ.ಆರ್. ಸೀತಾರಾಂ
ನಾಪೊಕ್ಲು, ಫೆ.16: ದಿಡ್ಡಳ್ಳಿ ನಿರಾಶ್ರಿತರಿಗೆ ಜಿಲ್ಲಾಡಳಿತ ಮನೆ ನಿರ್ಮಿಸಲು ಜಾಗ ಗುರುತಿಸಿದ್ದು, ಫಲನುಭವಿಗಳಿಗೆ ಜಾಗವನ್ನು ಲಾಟರಿ ಮೂಲಕ ನೀಡಲು ಕ್ರಮ ಕೈಗೊಂಡಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.
ಅವರು ಕೊಡಗಿನ ಕುಲ ದೇವ ಇಗ್ಗುತ್ತಪ್ಪ ದೇವಾಲಯದ ರಸ್ತೆ ಕಾಂಕ್ರೇಟಿಕರಣದ ಸುಮಾರು 2.85 ಕೋಟಿ ರೂ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರ ದಿಡ್ಡಳ್ಳಿ ನಿರಾಶ್ರಿತರ ಬಗ್ಗೆ ಈಗಾಗಲೆ ಎಲ್ಲಾ ರೀತಿಯ ವ್ಯೆವಸ್ಥೆಯನ್ನು ಕೈಗೊಂಡಿದ್ದರೂ, ಕೆಲವರ ಮಾತುಗಳಿಂದ ಅಲ್ಲಿನವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದ ಅವರು, ರಾಜ್ಯದಲ್ಲಿ ಯಾರಿಗೂ ಅರಣ್ಯ ಜಾಗವನ್ನು ನೀಡಲು ಬರುವುದಿಲ್ಲಾ. ಅರಣ್ಯ ಭೂಮಿ ನೀಡಿದರೆ ಮಂತ್ರಿಗಳು, ಸರಕಾರ, ಆಡಳಿತ ಜೈಲಿಗೆ ಹೋಗಬೇಕಾಗುತ್ತದೆ ಎಂದರು.
ಯಾರ ಸುಳ್ಳು ಭರವಸೆಗೆ ಆಸ್ವದ ಇಲ್ಲಾ ಎಂದ ಅವರು, ಈ ಬಗ್ಗೆ ಟ್ರೈಬ್ ನಾಯಕರನ್ನು ಕರೆಸಿ ಪರಿಶೀಲಿಸಲಾಗಿದೆ ಎಂದರು.
ಕಕ್ಕಬ್ಬೆ ಸಮೀಪದ ತಾಮರ ಪಕ್ಕದಲ್ಲಿ ವಾಸವಾಗಿರುವ ಗಿರಿಜನರ ಸಮಸ್ಯೆಯನ್ನು ಗ್ರಾಮಸ್ಥರು ಮಂತ್ರಿಗಳ ಗಮನಕ್ಕೆ ತಂದಾಗ ಕೂಡಲೆ ಕಂದಾಯ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ ಸಚಿವರು, ಇವರಿಗೆ ದಾರಿಯ ಸಮಸ್ಯೆ ಬಗ್ಗೆ ಕೂಡಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು. ಮುಂದೆ ಇವರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಸುಮಾರು 3.45 ಕೋಟಿ ರೂ. ಮಲ್ನಾಡ್ ಅಭಿವೃದ್ಧಿ ನಿಗಮದಿಂದ ಹಣ ಮಂಜೂರಾಗಿದ್ದು ಮತ್ತು ಸರಕಾರ ಅನುದಾನ ಸೇರಿಸಿ ಕುಲ ದೇವ ಇಗ್ಗುತ್ತಪ್ಪ ದೇವಾಲಯ ರಸ್ತೆಗೆ ಕಾಂಕ್ರೀಟ್ ಹಾಕಲು 2.85 ಕೋಟಿ ರೂ. ಬೇತು ಗ್ರಾಮದ ಮಕ್ಕಿ ದೇವಾಲಯ ರಸ್ತೆಗೆ ಡಾಮರೀಕರಣ 1.1 ಕೋಟಿ ರೂ. ನಾಪೊಕ್ಲು ನಗರದಿಂದ ಬೇತು ಜಂಕ್ಷನ್ ರಸ್ತೆ ಡಾಮರೀಕರಣಕ್ಕೆ 40 ಲಕ್ಷ ರೂ ಮೊದಲಾದ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಟಿ.ಪಿ. ರಮೇಶ್, ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ಡಿಸೋಜಾ, ಉಪ ವಿಭಾಧಿಕಾರಿ ನಂಜುಡೇಗೌಡ, ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಕಲಾ, ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪರದಂಡ ಕಾವೇರಪ್ಪ, ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ ಸಣ್ಣುವಂಡ ಕಾವೇರಪ್ಪ, ಕಳಿಯಂಡ ಹ್ಯಾರಿ ಮಂದಣ್ಣ, ನಾಪೋಕ್ಲು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್. ಕಕ್ಕಬ್ಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಬಾಚಮಂಡ ಲವ, ಕುಲ್ಲೇಟಿರ ಅರುಣ್ ಬೇಬ, ಬೊಪ್ಪಂಡ ಬೊಳ್ಳಮ್ಮ, ಅರೆಯಡ ಸೋಮಪ್ಪ, ನಾಪೋಕ್ಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಳೆಯಂಡ ತಿಮ್ಮಯ್ಯ, ವಿ.ಪಿ. ಶಶೀಧರ್, ಎಂ.ವಿ. ಲೋಕೇಶ್, ಗಣ್ಯಾತಿಗಣ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.