ಮಹಿಳೆಯರು ರಾಜಕಾರಣ ಮಾಡುವುದು ಬಹಳ ಕಷ್ಟ.

Update: 2017-02-19 18:36 GMT

 *ಮಹಿಳೆಯರು ರಾಜಕಾರಣ ಮಾಡುವುದು ಬಹಳ ಕಷ್ಟ.

-ವಿ.ಕೆ. ಶಶಿಕಲಾ, ಎಐಎಡಿಎಂಕೆ ಪ್ರ.ಕಾರ್ಯದರ್ಶಿ

ಖಜಾನೆ ದೋಚುವಷ್ಟು ಸುಲಭವಲ್ಲ ಎನ್ನಬಹುದಿತ್ತು.

---------------------

ಕಳ್ಳರು ಮತ್ತೊಬ್ಬರನ್ನು ನಂಬುವುದಿಲ್ಲ, ಯಡಿಯೂರಪ್ಪನವರದ್ದು ಅದೇ ಕತೆ

- ಸಿದ್ದರಾಮಯ್ಯ, ಮುಖ್ಯಮಂತ್ರಿ

ನೀವು ಹಾಗಾದರೆ ಯಡಿಯೂರಪ್ಪರನ್ನು ನಂಬುತ್ತೀರಾ?

---------------------
  ಗುರಿ ತಲುಪುವವರೆಗೂ ನಾನು ವಿರಮಿಸುವುದಿಲ್ಲ.

- ನರೇಂದ್ರ ಮೋದಿ , ಪ್ರಧಾನಿ
  ದೇಶ ನಾಶ ಮಾಡಿದ ಬಳಿಕವೇ ವಿಶ್ರಾಂತಿಯೇ?
---------------------
   ಇನ್ನೊಬ್ಬರ ದೇಶ ಭಕ್ತಿಯನ್ನು ಅಳೆಯುವ ಅಧಿಕಾರ ಯಾರಿಗೂ ಇಲ್ಲ
- ಮೋಹನ್ ಭಾಗವತ್, ಆರೆಸ್ಸೆಸ್ ಮುಂಖಡ
  ಅದರ ಸಂಪೂರ್ಣ ಪೇಟೆಂಟ್ ನೀವು ತೆಗೆದುಕೊಂಡಿದ್ದೀರಾ?
---------------------
  ಗೋರಕ್ತ ಮುಕ್ತ ಭಾರತ ನಮ್ಮ ಧ್ಯೇಯ.

- ರಾಘವೇಶ್ವರ ಸ್ವಾಮೀಜಿ , ರಾಮಚಂದ್ರಾಪುರ ಮಠ
  ಗೋರಕ್ತಕ್ಕೂ ವಿದೇಶಗಳಲ್ಲಿ ಬೇಡಿಕೆ ಶುರುವಾಗಿದೆಯೇ?
---------------------
  ಸ್ಲಂ ಮುಕ್ತ ಭಾರತ ಪ್ರಧಾನಿ ಮೋದಿಯ ಕನಸು

- ಶೋಭಾ ಕರಂದ್ಲಾಜೆ, ಸಂಸದೆ
ಇತ್ತೀಚೆಗೆ ಸ್ಲಂಗಳಿಗೆ ಆಕಸ್ಮಿಕ ಬೆಂಕಿ ಬೀಳುತ್ತಿರುವುದು ಗಮನಿಸುತ್ತಿದ್ದರೆ, ಕನಸು ಬೇಗ ನನಸಾಗಲಿದೆ. ---------------------
  ಪ್ರಪಂಚ ಆರ್ಥಿಕ ಕುಸಿತದ ಹಾದಿಯಲ್ಲಿದ್ದರೂ ಭಾರತದ ಮೇಲೆ ಪರಿಣಾಮ ಬೀರಿಲ್ಲ.
- ಅರುಣ್ ಜೇಟ್ಲಿ, ಕೇಂದ್ರ ಸಚಿವ
ನಿಮ್ಮ ಭಾರತ ಎಲ್ಲೋ ವಿದೇಶದಲ್ಲಿರಬೇಕು.

---------------------
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ - ಜನಾರ್ದನ ಪೂಜಾರಿ,

ಕಾಂಗ್ರೆಸ್ ಮುಖಂಡ ಕಾಂಗ್ರೆಸ್ ನಾಯಕರೆಲ್ಲ ಮೋದಿಯನ್ನು ಗೆಲ್ಲಿಸಲು ಒಂದಾಗುತ್ತಿದ್ದಾರಂತೆ.

---------------------

ಕಾಂಗ್ರೆಸ್ ತಿರಸ್ಕೃತ ಸರಕುಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ

- ಬಸವನಗೌಡ ಪಾಟೀಲ ಯತ್ನಾಳ್, ಶಾಸಕ

ಬಿಜೆಪಿಯ ತಿರಸ್ಕೃತ ಸರಕುಗಳು ಕಾಂಗ್ರೆಸ್ ಸೇರಿದರಾಯಿತು.

---------------------
  ಪ್ರಾಣಿ ಹಿಂಸೆ ಎಂದರೇನು ಎಂಬುವುದೇ ದೊಡ್ಡ ಗೊಂದಲವಾಗಿಬಿಟ್ಟಿದೆ
- ಶಕುಂತಲಾ ಶೆಟ್ಟಿ, ಶಾಸಕಿ
  ಬಿಜೆಪಿಯ ಮೆದುಳು, ಕಾಂಗ್ರೆಸ್ ದೇಹ ಇದ್ದಾಗ ಇಂತಹ ಸಂಘರ್ಷ ಸಹಜ. -

--------------------
  ರಾಷ್ಟ್ರೀಯ ಪಕ್ಷಗಳಲ್ಲಿ ಕಪ್ಪ ಒಪ್ಪಿಸುವ ಮತ್ತು ವಸೂಲಿ ಮಾಡುವ ಚಾಳಿ ಬಹಳ ಹಳೆಯದು

- ದೇವೇಗೌಡ, ಮಾಜಿ ಪ್ರಧಾನಿ

ಹಿರಿಯರ ಅನುಭವದ ಮಾತು.

---------------------

  ನಾನು ಸದ್ಯಕ್ಕೆ ಸಿಎಂ ರೇಸ್‌ನಲ್ಲಿ ಇಲ್ಲ
 - ಡಿ.ಕೆ. ಶಿವಕುಮಾರ್ , ಸಚಿವ
 ಸದ್ಯಕ್ಕೆ ಕುದುರೆ ರೇಸ್‌ನಲ್ಲಿ ಹಣ ತೊಡಗಿಸಿಕೊಂಡಿರುವ ಹಾಗಿದೆ.

---------------------
  ಕುಮಾರ ಬಂಗಾರಪ್ಪ ಬಿಜೆಪಿಗೆ ಬಂದರೆ ಪಕ್ಷಕ್ಕೆ ಇನ್ನಷ್ಟು ಬಲ ಬರಬಹುದು
- ಕೆ.ಎಸ್. ಈಶ್ವರಪ್ಪ, ಬಿಜೆಪಿ ಮುಖಂಡ
  ಇತ್ತೀಚೆಗೆ ಅವರು ಸಿಕ್ಕಾಪಟ್ಟೆ ಬೊಜ್ಜು ಬೆಳೆಸಿಕೊಂಡಿದ್ದಾರೆ.

---------------------
  ಯುದ್ಧ ಮುಂದುವರಿಯಲಿದೆ
- ಓ. ಪನ್ನೀರ್‌ಸೆಲ್ವಂ, ತ.ನಾ. ಮಾಜಿ ಮುಖ್ಯಮಂತ್ರಿ
  ತಮ್ಮ ಸೇನೆ ಎಲ್ಲಿದೆ?
---------------------
 ದೇಶದಲ್ಲಿ ಚಿಲ್ಲರೆ ಸಮಸ್ಯೆ ಇಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ ಸಮಸ್ಯೆಗಳೆಲ್ಲ ನೋಟಿನ ರೂಪ ತಳೆದಿವೆ.

---------------------

  ಪಕ್ಷದಿಂದ ಎಲ್ಲವನ್ನೂ ಪಡೆದು ಕೊನೆಗೆ ಕೈಕೊಟ್ಟು ಹೋಗುವುದು ಸರಿಯೇ?

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
  ಕಾಲು ಕೊಟ್ಟು ಹೋಗಬೇಕಾಗಿತ್ತೇ?

---------------------
  ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಹುದ್ದೆಯ ಗೌರವವೇ ಗೊತ್ತಿಲ್ಲ
 - ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
  
ಗೌರವ ಗೊತ್ತಿದ್ದರೆ ನಿಮಗೆ ಸಚಿವ ಸ್ಥಾನ ಈ ಹಿಂದೆ ಸುಲಭದಲ್ಲಿ ಸಿಗುತ್ತಿರಲಿಲ್ಲ.

---------------------
  ಪ್ರತಿಯೊಬ್ಬರ ಮನಸು ಮಗುವಿನ ಮನಸ್ಸಾಗಬೇಕು
- ರಮಾನಾಥ ರೈ, ಸಚಿವ.
  ಆ ಮಕ್ಕಳಿಗೆ ಅಷ್ಟೂ ತೊಟ್ಟಿಲುಗಳನ್ನು ಎಲ್ಲಿಂದ ತರುತ್ತೀರಿ?
---------------------
  ಮುಸ್ಲಿಮರಿಗೆ ಮಾಡಲು ಕೆಲಸವಿಲ್ಲ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುತ್ತಾರೆ
-ಅಝಂ ಖಾನ್, ಎಸ್ಪಿ ನಾಯಕ
  ತಮ್ಮ ಹೆತ್ತವರ ಬಗ್ಗೆ ಬಹಿರಂಗವಾಗಿ ಇಂತಹದೊಂದು ಕುಹಕವೆ?
---------------------
   ಉತ್ತರ ಪ್ರದೇಶ ಗೂಂಡಾರಾಜ್ಯವಾಗಿದೆ
- ನರೇಂದ್ರ ಮೋದಿ, ಪ್ರಧಾನಿ
  ನಿಮ್ಮನ್ನು ಉತ್ತರಪ್ರದೇಶದಲ್ಲಿ ದತ್ತು ತೆಗೆದುಕೊಂಡಿರುವುದು ಯಾರು ಎನ್ನುವುದು ಬಹಿರಂಗವಾಯಿತು ಬಿಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!