​ವಿದ್ಯಾರ್ಥಿ ಆತ್ಮಹತ್ಯೆ

Update: 2017-02-22 17:34 GMT

ಮುಂಡಗೋಡ, ಫೆ.22: ತನಗೆ ಜಾತ್ರೆಗೆ ಕರೆದುಕೊಂಡು ಹೋಗಿಲ್ಲವೆಂದು 7ನೆ ತರಗತಿ ವಿದ್ಯಾರ್ಥಿ ಬೇಸರಿಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಮೈನಳ್ಳಿ ಗ್ರಾಮದ ಕಿರಣ ವಡ್ಡರ(14) ಎಂದು ಗುರುತಿಸಲಾಗಿದೆ.
ಮೃತ ವಿದ್ಯಾರ್ಥಿ 7ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಬುಧವಾರ ಶಾಲೆಗೆ ಹೋಗದೆ ಮನೆಯಲ್ಲಿದ್ದ ಎನ್ನಲಾಗಿದೆ. ಮಧ್ಯಾಹ್ನ ಈತನ ತಂದೆ ಹಾನಗಲ್ ಜಾತ್ರೆಗೆ ಹೋಗುತ್ತಿದ್ದ ವಿಷಯ ಗೊತ್ತಾಗಿ ತಾನೂ ಜಾತ್ರೆಗೆ ಬರುವುದೆಂದು ಹಠ ಹಿಡಿದಿದ್ದನು ಎನ್ನಲಾಗಿದೆ. ತಂದೆ ಫಕೀರಪ್ಪ‘ನೀನು ಬರವುದು ಬೇಡ ಪರೀಕ್ಷೆ ಇದೆ.

ಈ ಸಮಯದಲ್ಲಿ ನಿನ್ನನ್ನು ಕರೆದುಕೊಂಡು ಹೋದರೆ ನಿನ್ನ ಅಭ್ಯಾಸ ಹಾಳಾಗುತ್ತದೆ’ ಎಂದು ಬುದ್ಧ್ದಿವಾದ ಹೇಳಿ ಹೋಗಿದ್ದರು.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ತನಗೆ ಜಾತ್ರೆಗೆ ಕರೆದುಕೊಂಡು ಹೋಗಿಲ್ಲವೆಂದು ಮನನೊಂದು ತಮ್ಮ ಮನೆಯ ಅಡುಗೆ ಕೋಣೆ ಯಲ್ಲಿ ಹಗ್ಗದಿಂದ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಈತನ ತಂದೆ ಫಕೀರಪ್ಪ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News