ಕ್ಷುಲ್ಲಕ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
Update: 2017-02-25 05:21 GMT
ಮಧುಗಿರಿ, ಫೆ.25: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಜಗಳವೊಂದು ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಿಡಿಗೇಶಿ ಹೋಬಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮೃತರನ್ನು ಇಲ್ಲಿನ ತಿಪ್ಪಗೊಂಡನಹಳ್ಳಿ ನಿವಾಸಿ ಗಿರಿರಾಜು ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಸುಮಾರು 7:30ರ ಸುಮಾರಿಗೆ ತಿಪ್ಪಗೊಂಡನಹಳ್ಳಿಯಲ್ಲಿ ಮುಹಮ್ಮದ್ ಆಸಿಫ್ ಸಾಬ್ ಹಾಗೂ ಜೊತೆಗಾರರು ಗಿರಿರಾಜು ನಡುವೆ ಕ್ಷುಲ್ಲಕ ವಿಚಾರದಲ್ಲಿ ಜಗಳವಾಗಿದೆ. ಈ ವೇಳೆ ಆಸಿಫ್ ಮತ್ತು ಸಂಗಡಿಗರು ಗಿರಿರಾಜು ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಗಿರಿರಾಜು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆಸಿಫ್ ಸಾಬ್ ಮತ್ತು ಆತನ ಪತ್ನಿ ಶಾಮೀಲಾ ಬಾನು, ರಹ್ಮಾನ್ ಮತ್ತು ಆತನ ಪತ್ನಿ ಶಕೀಲಾ ಬಾನು ಎಂಬ ಆರೋಪಿಗಳನ್ನು ಮಿಡಿಗೇಶಿ ಪೋಲೀಸರು ಬಂಧಿಸಿದ್ದಾರೆ.