ಓ ಮೆಣಸೇ...

Update: 2017-02-26 18:41 GMT

ಬಿಜೆಪಿಯವರಿಗೆ ಸುಳ್ಳು ಹೇಗೆ ಹೇಳಬೇಕೆಂದು ತರಬೇತಿ ನೀಡಲಾಗಿದೆ
- ಸಿದ್ದರಾಮಯ್ಯ, ಮುಖ್ಯಮಂತ್ರಿ
  ಮುಖ್ಯಮಂತ್ರಿ ಮಾಡುವ ಕೆಲಸ ಬಿಟ್ಟು, ಹೀಗೆಲ್ಲ ತರಬೇತಿ ನೀಡುತ್ತಾ ಹೋದರೆ ನಾಡಿನ ಗತಿ ಏನು?
---------------------

ಪಳನಿಸ್ವಾಮಿಗೆ ಸಿಎಂ ಪಟ್ಟ ಸಂಘಟಿತ ಅಪರಾಧ
-ಕಮಲ ಹಾಸನ್, ನಟ
 ಹಾಸನ್ ಹಿಂದೆ ಕಮಲ ಇರುವುದೇ ಈ ಹೇಳಿಕೆಗೆ ಕಾರಣ ಎನ್ನುವುದು ಶಶಿಕಲಾ ಆರೋಪ.

---------------------
  ಬರೀ ಸುಳ್ಳು ಸುದ್ದಿಗಳನ್ನೇ ಪ್ರಕಟಿಸುವ ಅಮೆರಿಕ ಮಾಧ್ಯಮಗಳ ಬಣ್ಣ ಬಯಲು ಮಾಡುತ್ತೇನೆ

 -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕದ ಬಣ್ಣವನ್ನಂತೂ ನೀವು ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದೀರಿ.

---------------------
  ಬಾಯಲ್ಲಿ ಬೆಳ್ಳಿ ಚಮಚ ಇರಿಸಿಕೊಂಡು ಹುಟ್ಟಿದವರಿಗೆ ಬಡವರ ಕಷ್ಟ ಅರ್ಥ ವಾಗುವುದಿಲ್ಲ
-ನರೇಂದ್ರ ಮೋದಿ, ಪ್ರಧಾನಿ
  ನೀವು ಬಾಯಿಯಲ್ಲಿ ಮನುಷ್ಯರ ಎಲುಬು ಇರಿಸಿಕೊಂಡು ಹುಟ್ಟಿದವರೇ ಎಂಬ ಅನುಮಾನ.

---------------------
  ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ತಲೆ ಸರಿಯಿಲ್ಲ
- ಅರವಿಂದ್ ಲಿಂಬಾವಳಿ, ಬಿಜೆಪಿ ವಕ್ತಾರ
  ಒಟ್ಟಿನಲ್ಲಿ ಜೈಲುಗಳ ಜೊತೆಗೆ ಮಾನಸಿಕ ಆಸ್ಪತ್ರೆಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ.

---------------------
  ನೋಟು ಅಮಾನ್ಯವೆಂಬುದು ಅನಾರೋಗ್ಯಕ್ಕೆ ಚಿಕಿತ್ಸೆ ಕೊಡುವಂತಹ ಕಹಿಯಾದ ಔಷಧವಾಗಿತ್ತು

 -ಎಂ.ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ಇನ್ನು ಅದನ್ನು ನೀವೇ ಕುಡಿಯಬೇಕಾಗುತ್ತದೆ, ಕಾದು ನೋಡಿ.

---------------------
  ಇಂಗ್ಲಿಷ್ ಕಲಿಕೆಗೆ ಪ್ರಾಧಾನ್ಯತೆ ನೀಡುವುದರಿಂದ ಮಕ್ಕಳ ಆಲೋಚನೆ ಮತ್ತು ಭಾವನಾ ಶಕ್ತಿ ಹತ್ಯೆ ಮಾಡಿದಂತಾಗುತ್ತದೆ

  - ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ

ಕನ್ನಡ ಕಲಿತು ನಿಮ್ಮ ಕಾದಂಬರಿ ಓದುವ ಅಪಾಯದಿಂದಲಾದರೂ ಇಂಗ್ಲಿಷ್ ಮೀಡಿಯಂ ಮಕ್ಕಳು ಪಾರಾಗುತ್ತಾರಲ್ಲ?
---------------------
  ಸತ್ತೇನು ಆದರೆ ಬಿಜೆಪಿ, ಆರೆಸ್ಸೆಸ್‌ನೊಂದಿಗೆ ಕೈಜೋಡಿಸಲಾರೆ
-ಲಾಲು ಪ್ರಸಾದ್ ಯಾದವ್, ಜೆಡಿಯು ಮುಖ್ಯಸ್ಥ
    ಕಾಲು ಜೋಡಿಸಿದರೆ ಆಯಿತು ಬಿಡಿ.

--------------------------------------------

ಸಾಧನೆ ಮೂಲಕವೇ ದೇಶಾದ್ಯಂತ ಬಿಜೆಪಿಗೆ ಗೆಲುವು

  - ನಳಿನ್ ಕುಮಾರ್ ಕಟೀಲು, ಸಂಸದ ಬೆಂಕಿ ಹಚ್ಚುವುದು ತಮ್ಮ ಸಾಧನೆಯ ಭಾಗವೇ?

  ---------------------

ರಾಜ್ಯ ಸರಕಾರ ಹೈಕಮಾಂಡ್‌ಗೆ ದುಡ್ಡು ನೀಡುವ ಮರ
-ಶೋಭಾ ಕರಂದ್ಲಾಜೆ, ಸಂಸದೆ
  ತಮ್ಮ ಆಡಳಿತ ಕಾಲದಲ್ಲಿ ನಾಡನ್ನು ದುಡ್ಡು ಬಗೆಯುವ ಅಕ್ರಮ ಗಣಿಗಾರಿಕೆಯಾಗಿ ಪರಿವರ್ತಿಸಿದ್ದು ನೆನಪಿದೆಯೇ?
---------------------
  ಒಂದು ವೇಳೆ ಮಹಾತ್ಮಾ ಗಾಂಧಿ ಬದುಕಿದ್ದಿದ್ದರೆ ಇಂದಿನ ಕಾಂಗ್ರೆಸ್ ವಿರುದ್ಧವೇ ಹೋರಾಟ ನಡೆಸುತ್ತಿದ್ದರು
- ಸಿ.ಟಿ.ರವಿ, ಶಾಸಕ 
  ಅದಕ್ಕಾಗಿ ಆರೆಸ್ಸೆಸ್ ಅವರನ್ನು ಕೊಂದು ಹಾಕಿತೇ?
---------------------
 ಮನುಷ್ಯ ಬಹಳ ವಿಚಿತ್ರ ಆಸಾಮಿ

 -ಬಾಬಾರಾಮ್‌ದೇವ್, ಯೋಗ ಗುರು

ಕನ್ನಡಿ ನೋಡಿದಾಗ ಹೊಳೆದದ್ದಿರಬೇಕು.

---------------------
   ನರೇಂದ್ರ ದಾಮೋದರ ದಾಸ್ ಮೋದಿ ಅಂದರೆ ನಗೆಟಿವ್ ದಲಿತ ಮ್ಯಾನ್
- ಮಾಯಾವತಿ, ದಲಿತ್ ಮುಖ್ಯಸ್ಥೆ
  ಕನಿಷ್ಠ ನೀವಾದರೂ ಪೋಸಿಟಿವ್ ದಲಿತ್ ವುಮನ್ ಆಗಲು ಯತ್ನಿಸಿ.

---------------------
  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಜೈಲಿಗೆ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ತಾವು ಮತ್ತೆ ಜೈಲು ಸೇರುವುದಾಗಿ ಭರವಸೆ ನೀಡಿದರೆ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ.

---------------------
  ದ.ಕ.ದಲ್ಲಿ ನೀರಿಗೇ ಬೆಂಕಿ ಹಾಕುವವರಿದ್ದಾರೆ
-ಯು.ಟಿ.ಖಾದರ್, ಸಚಿವ
  ದುರ್ಬಲ ಸರಕಾರ ಅಸ್ತಿತ್ವದಲ್ಲಿದ್ದಾಗ ಅಂತಹ ಆಲೋಚನೆಗಳೆಲ್ಲ ಅವರಲ್ಲಿ ಬರುವುದು ಸಹಜ.

---------------------
  ಮಂಡ್ಯದ ಗಂಡಷ್ಟೇ ಅಲ್ಲ, ಸದ್ಯದಲ್ಲೇ ಮಂಡ್ಯದ ಹೆಣ್ಣು ಕೂಡ ಕಾಂಗ್ರೆಸ್‌ನಿಂದ ಹೊರಬರಲಿದ್ದಾರೆ
- ಕೆ.ಎಸ್.ಈಶ್ವರಪ್ಪ, ವಿ.ಪ.ವಿ. ನಾಯಕ
  ನೀವು ಯಾವಾಗ ಹೊರ ಹೋಗುವುದು ಎನ್ನುವುದನ್ನು ಬಿಜೆಪಿಯ ಮುಖಂಡರೊಬ್ಬರು ಕಾಯುತ್ತಿರುವುದನ್ನು ಮರೆತಿರಾ?
---------------------
  ಎಮ್ಮೆ ಹುಡುಕುವವರಿಗೆ ಕತ್ತೆ ಕೆಟ್ಟದಾಗಿ ಕಾಣುತ್ತೆ
-ನರೇಂದ್ರ ಮೋದಿ,ಪ್ರಧಾನಿ
ನಿಮ್ಮನ್ನು ನೋಡುವಾಗ ಕತ್ತೆ ಅಷ್ಟೇನೂ ಕೆಟ್ಟದಾಗಿ ಕಾಣುವುದಿಲ್ಲ, ಬಿಡಿ.

---------------------
  ನಾನು ಧರ್ಮಸ್ಥಳಕ್ಕೆ ಹೋಗಿ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಬಂದೆ
-ಐವನ್ ಡಿಸೋಜಾ, ವಿ.ಪ.ಮುಖ್ಯ ಸಚೇತಕ
  ಕಾಂಗ್ರೆಸ್‌ಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬಾರದಿತ್ತೇ?
---------------------
  ಕಾಂಗ್ರೆಸ್ ಮುಕ್ತ ಕರ್ನಾಟಕ ನಿಮ್ಮ(ಬಿಜೆಪಿ) ಜನ್ಮದಲ್ಲಿ ಸಾಧ್ಯವಿಲ್ಲ
- ಡಾ.ಜಿ.ಪರಮೇಶ್ವರ್, ಗೃಹಸಚಿವ
ಅದಕ್ಕೆ ಆ ಜವಾಬ್ದಾರಿ ನಿಮ್ಮಂತಹ ನಾಯಕರಿಗೆ ವಹಿಸಿರುವುದು.

---------------------
  ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
 ತಮ್ಮ ಮುಳುಗಿದ ಹಡಗಿನ ಬಗ್ಗೆ ಏನಾದರೂ ಹೇಳಿ.

---------------------
  ನಾನು ಒಂದು ರೂಪಾಯಿ ಕೂಡಾ ದುರ್ಬಳಕೆ ಮಾಡಿಕೊಂಡಿಲ್ಲ
-ವಿಜಯ ಮಲ್ಯ, ಉದ್ಯಮಿ
ಉಳಿದ ರೂಪಾಯಿಗಳನ್ನು ಏನು ಮಾಡಿದಿರಿ ಎಂದು ಹೇಳಿ.

---------------------
  ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ
-ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ
ನಿಮ್ಮಂಥವರನ್ನು ಇನ್ನೂ ಪಕ್ಷದಲ್ಲಿ ಉಳಿಸಿಕೊಂಡಿರುವುದೇ ಅದಕ್ಕೆ ಸಾಕ್ಷಿ.

---------------------
  ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕೊಟ್ಟಿರಬಹುದು
-ಎಚ್.ವಿಶ್ವನಾಥ್, ಕಾಂಗ್ರೆಸ್ ಮುಖಂಡ
 ಇದನ್ನು ಹೇಳಲು ಬಿಜೆಪಿ ನಿಮಗೆ ಕೊಟ್ಟಿರುವ ಕಪ್ಪ ಎಷ್ಟಿರಬಹುದು?
---------------------
  ಅಮ್ಮನ ಆತ್ಮ ನಮಗೆ ಮಾರ್ಗದರ್ಶನ ಮಾಡುತ್ತಿದೆ
-ವಿ.ಕೆ.ಶಶಿಕಲಾ, ಎಐಡಿಎಂಕೆ ಪ್ರ.ಕಾರ್ಯದರ್ಶಿ
 ಹಾಗಾದರೆ ಸಂವಿಧಾನದ ಮಾರ್ಗದರ್ಶನದ ಅಗತ್ಯ ನಿಮಗಿಲ್ಲವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...